12:03 PM Wednesday30 - July 2025
ಬ್ರೇಕಿಂಗ್ ನ್ಯೂಸ್
Bangaluru | ಪತ್ರಿಕಾ ಸಂಪಾದಕರ ಕೈಕಟ್ಟಿ ಹಾಕಲಾಗುತ್ತಿದೆ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ… Mandya | ಒಂದೇ ದಿನ 1146 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ… ಬಾಳೆಬೈಲು – ಕುರುವಳ್ಳಿ ಬೈಪಾಸ್ ರಸ್ತೆಯಲ್ಲಿ ಕುಸಿಯುತ್ತಿರುವ ಗುಡ್ಡ: ಬ್ಯಾರಿಕೆಡ್ ಹಾಕಿರುವ ಪೊಲೀಸರು Shivamogga | ತೀರ್ಥಹಳ್ಳಿ: ಬೆಜ್ಜವಳ್ಳಿ ಸಮೀಪ ಸ್ಕೂಟಿಗೆ ಹಿಂಭಾಗದಿಂದ ಬಸ್ ಡಿಕ್ಕಿ; ಸವಾರ… ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಒಂಟಿ ಸಲಗ ಪ್ರತ್ಯಕ್ಷ: ಪ್ರಯಾಣಿಕರಲ್ಲಿ ಭೀತಿ ಗದಗ -ಬಂಕಾಪುರ ರಾಷ್ಟ್ರೀಯ ಹೆದ್ದಾರಿಗೆ ಗಡ್ಕರಿ ಭರವಸೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Koppa | ಬೃಹತ್ ಮರ ರಸ್ತೆಗೆ ಪತನ: ಜಯಪುರ- ಬಸರೀಕಟ್ಟೆ,- ಕಳಸ- ಹೊರನಾಡು… ಕೊಡಗಿನಲ್ಲಿ ಭಾರೀ ಮಳೆ: ತುಂಬಿ ತುಳುಕುತ್ತಿರುವ ಕಾವೇರಿ, ಕನ್ನಿಕೆ, ಸುಜ್ಜ್ಯತಿ ನದಿಗಳು; ತ್ರಿವೇಣಿ… ಕೊಡಗು: ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣಬೈರೇ ಗೌಡ ಭೇಟಿ; ಪರಿಹಾರ… BJP Leader | ಚುನಾವಣಾ ಉದ್ದೇಶದಿಂದ ಬೆಂಗಳೂರು ಒಡೆದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ…

ಇತ್ತೀಚಿನ ಸುದ್ದಿ

ಕಾರಿನ ಬ್ರೇಕ್ ಫೈಲ್: ಪ್ರತಿಪಕ್ಷ ಉಪ ನಾಯಕ ಯು. ಟಿ. ಖಾದರ್ ಅಪಾಯದಿಂದ ಪಾರು

09/12/2022, 21:48

ಮಂಗಳೂರು(reporterkarnataka.com): ಪ್ರತಿಪಕ್ಷದ ಉಪನಾಯಕ ಹಾಗೂ ಮಂಗಳೂರು ಶಾಸಕ ಯು. ಟಿ. ಖಾದರ್ ಅವರು ಪ್ರಯಾಣಿಸುತ್ತಿದ್ದ ಕಾರ್ ಬ್ರೇಕ್ ಫೈಲ್ ಆಗಿದ್ದು, ಅದೃಷ್ಟವಶಾತ್ ಖಾದರ್ ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಶುಕ್ರವಾರ ಅಪರಾಹ್ನ ಈ ಘಟನೆ ಬಂಟ್ವಾಳ ಬಂಟರ ಭವನ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದಾಗ ನಡೆದಿದೆ. ಪಡೀಲ್ ಬಳಿಯ ಕಣ್ಣೂರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಸಮೀಪ ಕಾರಿನ ಬ್ರೇಕ್ ಫೈಲ್ ಆಗಿದ್ದು, ಚಾಲಕ ಲಿಬ್ಜಿತ್ ತಕ್ಷಣ ಕಾರು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಬದಲಿ ಕಾರಿನಲ್ಲಿ ಖಾದರ್ ಅವರು ಮಂಗಳೂರಿಗೆ ಪ್ರಯಾಣ ಬೆಳೆಸಿದರು. ಅದೃಷ್ಟವಶತ್ ಶಾಸಕರು ಹಾಗೂ ಕಾರಲ್ಲಿದ್ದವರು ಏನೂ ಅಪಾಯವಾಗದೆ ಪಾರಾಗಿದ್ದಾರೆ.

ಈ ಬಗ್ಗೆ ಕಾರಿನ ಚಾಲಕ ಲಿಬ್ಜಿತ್ ರಿಪೋಟರ್ ಕರ್ನಾಟಕಕ್ಕೆ ಪ್ರತಿಕ್ರಿಸಿ, ನಗರದ ಪಡೀಲ್ ನ ಟೊಯೋಟಾ ಶೋರೂಮ್ ನಲ್ಲಿ ಕಾರನ್ನು ಸರ್ವಿಸ್ ಆಗಿ ತಂದು ಇಂದಿಗೆ 5 ದಿನ ಮಾತ್ರ ಆಗಿದ್ದು. ಅದಲ್ಲದೆ ಶಾಸಕರಿಲ್ಲದೆ ದಿನಕ್ಕೆ 10 ಕಿ.ಮೀ. ಓಡಿರಬಹದು. ಗೇರ್ ನಿಂದ ಕಂಟ್ರೋಲ್ ಮಾಡಿ ಕಾರು ನಿಲ್ಲಿಸಿದ್ದೇನೆ. ದೇವರ ದಯೆಯಿಂದ ಅವಘಡ ಏನು ಆಗಿಲ್ಲ. ಶಾಸಕರಿಗೆ ಏನು ಆಗಿಲ್ಲ. ನಂತರ ಬೇರೆ ಕಾರಿನ ವ್ಯವಸ್ಥೆ ಮಾಡಿದ್ದೇನೆ. ಈ ಬಗ್ಗೆ ಶೋರೂಮ್ ತೆರಳಿ ಕೇಳಿದ್ರೆ. ಬ್ರೇಕ್ ಲಿಕ್ವಿಡ್ ಹೋಗಿರಬಹುದು ಎಂದು ಉಡಾಫೆ ಉತ್ತರ ನೀಡಿದ್ದಾರೆ.
ಒಬ್ಬ ಜನ ಪ್ರತಿನಿಧಿಗೆ ಸರಿಯಾದ ಸರ್ವಿಸ್ ನೀಡಲಾಗಿಲ್ಲವಾದರೆ ಜನ ಸಾಮಾನ್ಯರಿಗೆ ಸಮಾಧಾನಕರ ಉತ್ತರಸಿಗಬಹುದೇ ಎಂಬುದು ಅವರ ಅಳಲು ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು