4:36 AM Monday15 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ಕಲ್ಲಡ್ಕ ಕೇಟಿಗೆ 70ರ ಸಂಭ್ರಮ!: ಹಾಲಿನ ಮೇಲೆ ಲೀಲಾಜಾಲವಾಗಿ ತೇಲುವ ಟೀ ಡಿಕಾಕ್ಷನ್ ಇದರ ಸ್ಪೆಷಾಲಿಟಿ !!

26/04/2025, 17:01

ಜಯಾನಂದ ಪೆರಾಜೆ ಬಂಟ್ವಾಳ

info.reporterkarmatak@gmail.com

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಬಿ.ಸಿ.ರೋಡಿನಿಂದ 4-5 ಕಿಮೀ ಅಂತರದಲ್ಲಿ ಸಿಗುವ ಪುಟ್ಟ ಪೇಟೆಯೇ ಕಲ್ಲಡ್ಕ. ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಈ ಪೇಟೆ ಹಲವು ವಿಷಯಗಳಿಗೆ ಪ್ರಖ್ಯಾತಿ ಪಡೆದಿದೆ. ಅಂತಹದರಲ್ಲೊಂದು ಇಲ್ಲಿನ ಕೆ.ಟಿ. ಎಂಬ ಸ್ವಾದಿಷ್ಟವಾದ ಚಹಾ ಕೂಡ ಸೇರಿದೆ. ಅಂತಹ ಚಹಾ ಇಂದು 70ರ ಸಂಭ್ರಮದಲ್ಲಿದೆ.
ಕಲ್ಲಡ್ಕ ಟೀಯನ್ನೇ ಶಾರ್ಟ್ ಆ್ಯಂಡ್ ಸ್ವೀಟ್ ಆಗಿ ಕೆ.ಟಿ. ಎಂದು ಕರೆಯುತ್ತಾರೆ. ಇದು ಸುಮಾರು 70 ವರ್ಷಗಳ ಹಿಂದೆ ಇಟ್ಟ ಹೆಸರು. ಮಂಗಳೂರು- ಬೆಂಗಳೂರು ಹೆದ್ದಾರಿಯಾಗಿ ಸಂಚರಿಸುವ ಸಾಮಾನ್ಯ ವ್ಯಕ್ತಿಯಾಗಲಿ, ವಿಐಪಿಯಾಗಲಿ ಇಲ್ಲಿನ ಕೇಟಿ ಸವಿಯದೆ ಮುಂದೆ ಸಾಗುವುದೇ ಬಹಳ ಅಪರೂಪ.
ಸುಮಾರು 70 ವರ್ಷಗಳ ಹಿಂದೆ ಇಲ್ಲಿನ ಲಕ್ಷ್ಮೀ ನಾರಾಯಣ ಹೊಳ್ಳ ಎಂಬವರು ಲಕ್ಷ್ಮೀ ನಿವಾಸ ಎಂಬ ಹೊಟೇಲ್ ತೆರೆದು ಕೇಟಿ ಎಂಬ ಸ್ವಾದಿಷ್ಟವಾದ ಚಹಾವನ್ನು ಇಡೀ ಊರಿಗೆ ಪರಿಚಯಿಸುತ್ತಾರೆ. ಮುಂದೆ ಇದು ಇಡೀ ರಾಜ್ಯಕ್ಕೆ, ರಾಷ್ಟ್ರಕ್ಕೆ ಪ್ರಸಿದ್ದಿ ಪಡೆಯುತ್ತದೆ. ಹೊರ ದೇಶದವರು ಕೂಡ ಇದರ ಸವಿಗೆ ತಲೆದೂಗಿದ್ದಾರೆ.
ಸಮ ಪ್ರಮಾಣದ ಸಕ್ಕರೆ, ಚಾ ಹುಡಿಯ ಡಿಕಾಕ್ಷನ್, ದಪ್ಪ ಹಾಲಿನಲ್ಲಿ ಸೇರಿದಾಗ ಕೇಟಿ ರೆಡಿಯಾಗುತ್ತದೆ. ಹಾಲಿನ ಮೇಲೆ ಲೀಲಾಜಾಲವಾಗಿ ತೇಲುವ ಟಿ ಡಿಕಾಕ್ಷನ್ ನೋಡುವುದೇ ಒಂದು ಸೊಬಗು. ಗ್ಲಾಸನ್ನು ಎರಡು ತುಟಿಗಳ ಮಧ್ಯೆ ಸಿಲುಕಿಸಿ ಒಂದು ಸಿಪ್ ಗಂಟಲಿನೊಳಗೆ ಇಳಿಯುತ್ತಿದ್ದಂತೆ
ಪರಮಾನಂದವಾಗುತ್ತದೆ. ಮತ್ತಷ್ಟು ಮತ್ತಷ್ಟು ಕುಡಿಯುವ ಬಯಕೆ ಉಂಟಾಗುತ್ತದೆ. ಇದರ ಸ್ವಾದಕ್ಕೆ ಒಂದೇ ಸಿಟ್ಟಿಂಗ್ ನಲ್ಲಿ ಎರಡು ಮೂರು ಕೇಟಿ ಕುಡಿದವರು ಕೂಡ ಉಂಟು.
ಕಲ್ಲಡ್ಕದಲ್ಲಿ ಚತುಷ್ಪಥ ಫ್ಲೈ ಓವರ್ ಕಾಮಗಾರಿ ಶುರುವಾದ ನಂತರ ಕೆಟಿ ಹೊಟೇಲ್ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರದ ಪ್ರವೇಶ ದ್ವಾರದ ಪಕ್ಕದಲ್ಲೇ ಲಕ್ಷ್ಮೀ ಗಣೇಶ ಹೊಟೇಲ್ ಹೆಸರಿನಲ್ಲಿ ತೆರೆದುಕೊಂಡಿದೆ.


ಕಲ್ಲಡ್ಕ ದಾರಿಯಾಗಿ ಪ್ರಯಾಣಿಸುವವರು ತಮ್ಮ ವಾಹನ ನಿಲ್ಲಿಸಿ ಕೇಟಿ ಹೊಟೇಲಿಗೆ ಭೇಟಿ ನೀಡುವುದು ಒಂದು ಸಂಪ್ರದಾಯವಾಗಿ ಬಿಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಮೇಲೆ ರಾಜ್ಯದಲ್ಲಿಯೇ ವಿಶಿಷ್ಟವಾದ ಫ್ಲೈ ಓವರ್ ನಿರ್ಮಾಣವಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ಕೆಳಗಡೆ ದಶಕಗಳ ಇತಿಹಾಸವಿರುವ ಕಪ್ಪುಬಿಳಿ ಚಾ “ಕೇಟಿ” ನೀವೊಮ್ಮೆ ಸವಿಯಲೇ ಬೇಕು. ಇದರ ಜತೆಗೆ ರಿಂಜಿಂ ಕಾಫಿಯನ್ನೂ ಸವಿಯಬಹುದು.

ಇತ್ತೀಚಿನ ಸುದ್ದಿ

ಜಾಹೀರಾತು