1:10 AM Monday16 - September 2024
ಬ್ರೇಕಿಂಗ್ ನ್ಯೂಸ್
ನಂಜನಗೂಡು: ಮುನಿರತ್ನ ವಿರುದ್ಧ ಜನ ಸಂಗ್ರಾಮ ಪರಿಷತ್ ಪ್ರತಿಭಟನೆ: ಶಾಸಕ ಸ್ಥಾನದಿಂದ ವಜಾಗೊಳಿಸಲು… ಜೈಪುರದಲ್ಲಿ ಇಂಡಿಯನ್ ಯೂತ್ ಪಾಲಿ೯ಮೆಂಟ್ 27ನೇ ಅಧಿವೇಶನ: ಸ್ಪೀಕರ್ ಖಾದರ್ ಉದ್ಘಾಟನೆ ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ ಕಾರ್ಯಕ್ರಮ ಸರಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ… ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಭಾರೀ ಫೈಟ್: ಮಹಿಳಾ ಅಭ್ಯರ್ಥಿಯಿಂದ ಪ್ರಬಲ ಪೈಪೋಟಿ ಮಹಿಳಾ ಆಯೋಗದ ಅಧ್ಯಕ್ಷೆ ಬಂದ್ರೂ ಅಧಿಕಾರಿಗಳು ನಾಪತ್ತೆ: ರಾಯಲ್ಪಾಡು ಪ್ರಾಥಮಿಕ ಆರೋಗ್ಯ ಕೇಂದ್ರ,… ಅಥಣಿ: ಶೌಚಕ್ಕೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ದಾರುಣ… ನಂಜನಗೂಡು: ಭಗೀರಥ ಹಾಗೂ ಕನಕ ಸಮುದಾಯ ಭವನಕ್ಕೆ ಶಾಸಕರಿಂದ ಭೂಮಿ ಪೂಜೆ ಮಂಗಳೂರು: ಸಾಕು ನಾಯಿಯ ತ್ಯಾಜ್ಯ ಸಂಗ್ರಹಿಸುವ ವಾಹನಕ್ಕೆ ನೀಡಿದ ಪಾಪಿಗಳು; ವೀಡಿಯೊ ವೈರಲ್… ವೈದ್ಯರ ಮೇಲೆ ಹಲ್ಲೆ ಪ್ರಕರಣ: ಚಿಕ್ಕಮಗಳೂರು ನಗರ ಠಾಣೆ ಎದುರು ಆರೋಗ್ಯ ಸಿಬ್ಬಂದಿಗಳ… ರಸ್ತೆ ಆಳುವ ಬೀದಿ ನಾಯಿಗಳು: ಶ್ರೀನಿವಾಸಪುರದಲ್ಲಿ ಶ್ವಾನಗಳದ್ದೇ ಕಾಟ; ಕಣ್ಮುಚ್ಚಿ ಕುಳಿತ ಪುರಸಭೆ…

ಇತ್ತೀಚಿನ ಸುದ್ದಿ

ಕಲಿಯುವ ಛಲದಿಂದ ಸಂಕಲ್ಪ ಸಾಧಿಸಿದ ತನ್ವಿ!: ಕೆಳ ಮಧ್ಯಮ ಕುಟುಂಬದ ವಿದ್ಯಾರ್ಥಿನಿ ಎಂಬಿಬಿಎಸ್ ಸೀಟು ಪಡೆದ ಕತೆ!!

07/09/2024, 18:31

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ತೊಟ್ಟಿಲು ತೂಗಿದ ಕೈಗಳು ಇಡೀ ದೇಶವನ್ನೇ ಆಳ್ವಿಕೆ ಮಾಡಿದ ಉದಾಹರಣೆ ನಮ್ಮುಂದೆ ಇರುವಾಗ ಛಲವೊಂದಿದ್ದರೆ, ಏನನ್ನೂ ಸಾಧಿಸಬಹುದು ಎನ್ನುವುದು ಮತ್ತಷ್ಟು ಸ್ಷಷ್ಟ. ಇದಕ್ಕೊಂದು ನಮ್ಮ ನಿಮ್ಮ ನಡುವಿನ ಹುಡ್ಗಿಯೊಬ್ಬಳು ನಿದರ್ಶನ.
ಮಂಗಳೂರು ಹೊರವಲಯದ ಕೊಣಾಜೆ ಮುಟಿಂಜ ನಿವಾಸಿ ಪದ್ಮನಾಭ ಬಂಗೇರ ಹಾಗೂ ನೀರಜಾ ಅವರ ಪುತ್ರಿ ತನ್ವಿ ಛಲದಿಂದ ಗೆದ್ದಾಕೆ.ತನ್ವಿ ತಾಯಿ ಖಾಸಗಿ ಏಜೆನ್ಸಿಯಲ್ಲಿ ಅಕೌಂಟೆಂಟ್, ತಂದೆ ಮೇಸ್ತ್ರಿ. ಆರ್ಥಿಕವಾಗಿ ಅಷ್ಟೇನು ಗಟ್ಟಿಗರಲ್ಲ. ಆದರೆ ಪ್ರತಿಭೆ ಆ ಹುಡುಗಿಗೆ ಬೆನ್ನೆಲುಬು ತರಹ ಸಹಾಯ ಮಾಡಿತು. ಎಸ್‌ಎಸ್‌ಎಲ್‌ಸಿಯಲ್ಲಿ 613 ಅಂಕ, ಪಿಯುಸಿಯಲ್ಲಿ 575 ಅಂಕ ಪಡೆದವಳಾಕೆ. ವೈದ್ಯೆಯಾಗುವ ಕನಸು ಕಂಡಿದ್ದಳು. ಮಗಳು ವೈದ್ಯೆಯಾಗಬೇಕು ಎಂಬುದು ಪೋಷಕರ ಕನಸು ಕೂಡ ಆಗಿತ್ತು. ಆದರೆ ಲಕ್ಷಗಟ್ಟಲೆ ಶುಲ್ಕ ಪಾವತಿಸಿ ಎಂಬಿಬಿಎಸ್ ಓದುವುದು ಅವರಿಗೆ ಕನಸಿನ ಮಾತಾಗಿತ್ತು. ಈ ನಡುವೆ ಕಳೆದ ವರ್ಷದ ನೀಟ್ (NEET) ಪರೀಕ್ಷೆಯಲ್ಲಿ ಆಕೆ 720ಕ್ಕೆ 457 ಅಂಕಗಳನ್ನು ಗಳಿಸಿ 1,55,670 ರ್ಯಾಂಕ್ ಪಡೆದಿದ್ದಳು. ಈ ಶ್ರೇಣಿಯಲ್ಲಿ ಆಕೆ ಎಂಬಿಬಿಎಸ್ ಸೀಟು ಪಡೆದಿದ್ದರೂ, ಲಕ್ಷಾಂತರ ಶುಲ್ಕವನ್ನು ಪಾವತಿಸಬೇಕಾಗಿತ್ತು. ಈ ವೇಳೆ ಪೋಷಕರು ತನ್ವಿಗೆ ನರ್ಸಿಂಗ್ ಓದುವುದೇ ಸೂಕ್ತ ಎಂದು ನಿರ್ಧರಿಸಿದ್ದರು. ಆದರೆ ವೈದ್ಯಳಾಗುವ ಕನಸಿಗೆ ಮಾತ್ರ ಹಿಂದೆ ಸರಿಯಲಿಲ್ಲ. ಅಷ್ಟರಲ್ಲಿ ನಾನೇಕೆ ನೀಟ್ ಓದಿ ಮತ್ತೆ ಎಂಬಿಬಿಎಸ್ ಸೀಟು ಪಡೆಯಬಾರದು ಎಂದು ಹಠಕ್ಕೆ ಬಿದ್ದಳು. ಮಂಗಳೂರಿನಲ್ಲಿ ಎಂಬಿಬಿಎಸ್ ಸೀಟು ಪಡೆಯಬೇಕೆಂದು ಹಠಕ್ಕೆ ಬಿದ್ದು ಯೆನೆಪೊಯದಲ್ಲಿ ಉಚಿತ ಕೋಚಿಂಗ್ ಪಡೆದು ಈ ವರ್ಷ ನೀಟ್ ನಲ್ಲಿ 720ರಲ್ಲಿ 647 (28,782 ಆಲ್ ಇಂಡಿಯಾ ರ್ಯಾಂಕ್) ಗಳಿಸಿದ್ದಾಳೆ. ಮಂಗಳೂರು ಕೆಎಂಸಿಯಲ್ಲಿ ಎಂಬಿಬಿಎಸ್ ಸೀಟು ಪಡೆದು ವಿದ್ಯಾರ್ಥಿಗಳಿಗೆ ಮಾದರಿ ಎನಿಸಿದ್ದಾಳೆ. ಗುರುಬೆಳದಿಂಗಳು ಫೌಂಡೇಶನ್ ಕುದ್ರೋಳಿ ತನ್ವಿಯ ಮುಂದಿನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು