2:57 PM Sunday19 - October 2025
ಬ್ರೇಕಿಂಗ್ ನ್ಯೂಸ್
ಹಾರಂಗಿ ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ 95 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ… ಕಾರ್ಮಿಕ ಅಧಿಕಾರಿ ಸೋಗಿನಲ್ಲಿ ವಸೂಲಿಗೆ ಯತ್ನ: ಸಾರ್ವಜನಿಕರು ಎಚ್ಚರದಿಂದಿರಲು ಇಲಾಖಾ ಅಧಿಕಾರಿಗಳ ಮನವಿ Mysore | ಎಚ್. ಡಿ. ಕೋಟೆಯಲ್ಲಿ ಹುಲಿ ದಾಳಿ: ಎರಡೂ ಕಣ್ಣು ಕಳೆದುಕೊಂಡ… ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್: ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಸಹಿತ 5… Kodagu | ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ: ಸಾಕ್ಷಿಯಾಗಲಿರುವ ಡಿಸಿಎಂ, ಸಚಿವರು, ಶಾಸಕರು ವಿರಾಜಪೇಟೆಯ ಪೆರಂಬಾಡಿ ಬಳಿ ಉದ್ಯಮಿ ಮೇಲೆ ಹಲ್ಲೆ, ದರೋಡೆ: ಪೊಲೀಸರು ಹೈ ಅಲರ್ಟ್ ಹಾಡು ನಿಲ್ಲಿಸಿದ ಯಕ್ಷ ಕೋಗಿಲೆ: ತೆಂಕುತಿಟ್ಟಿನ ಖ್ಯಾತ ಭಾಗವತ ದಿನೇಶ್ ಅಮ್ಮಣ್ಣಾಯ ಇನ್ನಿಲ್ಲ ನರೇಗಾ ಯೋಜನೆಯಡಿ ಕಾರ್ಮಿಕ ಆಯವ್ಯಯ: ಗ್ರಾಮ ಪಂಚಾಯತಿಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ Kodagu | ತುಲಾ ಸಂಕ್ರಮಣ: ತಲಕಾವೇರಿಗೆ ಭಾಗಮಂಡಲದ ಭಗಂಡೇಶ್ವರ ದೇವಾಲಯದಿಂದ ಆಭರಣ ಕಾವೇರಿಮನೆ ಚಂದನ್ ಗೆ ಯುಎನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಪ್ರದಾನ

ಇತ್ತೀಚಿನ ಸುದ್ದಿ

ಕಲಿಯುವ ಛಲದಿಂದ ಸಂಕಲ್ಪ ಸಾಧಿಸಿದ ತನ್ವಿ!: ಕೆಳ ಮಧ್ಯಮ ಕುಟುಂಬದ ವಿದ್ಯಾರ್ಥಿನಿ ಎಂಬಿಬಿಎಸ್ ಸೀಟು ಪಡೆದ ಕತೆ!!

07/09/2024, 18:31

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ತೊಟ್ಟಿಲು ತೂಗಿದ ಕೈಗಳು ಇಡೀ ದೇಶವನ್ನೇ ಆಳ್ವಿಕೆ ಮಾಡಿದ ಉದಾಹರಣೆ ನಮ್ಮುಂದೆ ಇರುವಾಗ ಛಲವೊಂದಿದ್ದರೆ, ಏನನ್ನೂ ಸಾಧಿಸಬಹುದು ಎನ್ನುವುದು ಮತ್ತಷ್ಟು ಸ್ಷಷ್ಟ. ಇದಕ್ಕೊಂದು ನಮ್ಮ ನಿಮ್ಮ ನಡುವಿನ ಹುಡ್ಗಿಯೊಬ್ಬಳು ನಿದರ್ಶನ.
ಮಂಗಳೂರು ಹೊರವಲಯದ ಕೊಣಾಜೆ ಮುಟಿಂಜ ನಿವಾಸಿ ಪದ್ಮನಾಭ ಬಂಗೇರ ಹಾಗೂ ನೀರಜಾ ಅವರ ಪುತ್ರಿ ತನ್ವಿ ಛಲದಿಂದ ಗೆದ್ದಾಕೆ.ತನ್ವಿ ತಾಯಿ ಖಾಸಗಿ ಏಜೆನ್ಸಿಯಲ್ಲಿ ಅಕೌಂಟೆಂಟ್, ತಂದೆ ಮೇಸ್ತ್ರಿ. ಆರ್ಥಿಕವಾಗಿ ಅಷ್ಟೇನು ಗಟ್ಟಿಗರಲ್ಲ. ಆದರೆ ಪ್ರತಿಭೆ ಆ ಹುಡುಗಿಗೆ ಬೆನ್ನೆಲುಬು ತರಹ ಸಹಾಯ ಮಾಡಿತು. ಎಸ್‌ಎಸ್‌ಎಲ್‌ಸಿಯಲ್ಲಿ 613 ಅಂಕ, ಪಿಯುಸಿಯಲ್ಲಿ 575 ಅಂಕ ಪಡೆದವಳಾಕೆ. ವೈದ್ಯೆಯಾಗುವ ಕನಸು ಕಂಡಿದ್ದಳು. ಮಗಳು ವೈದ್ಯೆಯಾಗಬೇಕು ಎಂಬುದು ಪೋಷಕರ ಕನಸು ಕೂಡ ಆಗಿತ್ತು. ಆದರೆ ಲಕ್ಷಗಟ್ಟಲೆ ಶುಲ್ಕ ಪಾವತಿಸಿ ಎಂಬಿಬಿಎಸ್ ಓದುವುದು ಅವರಿಗೆ ಕನಸಿನ ಮಾತಾಗಿತ್ತು. ಈ ನಡುವೆ ಕಳೆದ ವರ್ಷದ ನೀಟ್ (NEET) ಪರೀಕ್ಷೆಯಲ್ಲಿ ಆಕೆ 720ಕ್ಕೆ 457 ಅಂಕಗಳನ್ನು ಗಳಿಸಿ 1,55,670 ರ್ಯಾಂಕ್ ಪಡೆದಿದ್ದಳು. ಈ ಶ್ರೇಣಿಯಲ್ಲಿ ಆಕೆ ಎಂಬಿಬಿಎಸ್ ಸೀಟು ಪಡೆದಿದ್ದರೂ, ಲಕ್ಷಾಂತರ ಶುಲ್ಕವನ್ನು ಪಾವತಿಸಬೇಕಾಗಿತ್ತು. ಈ ವೇಳೆ ಪೋಷಕರು ತನ್ವಿಗೆ ನರ್ಸಿಂಗ್ ಓದುವುದೇ ಸೂಕ್ತ ಎಂದು ನಿರ್ಧರಿಸಿದ್ದರು. ಆದರೆ ವೈದ್ಯಳಾಗುವ ಕನಸಿಗೆ ಮಾತ್ರ ಹಿಂದೆ ಸರಿಯಲಿಲ್ಲ. ಅಷ್ಟರಲ್ಲಿ ನಾನೇಕೆ ನೀಟ್ ಓದಿ ಮತ್ತೆ ಎಂಬಿಬಿಎಸ್ ಸೀಟು ಪಡೆಯಬಾರದು ಎಂದು ಹಠಕ್ಕೆ ಬಿದ್ದಳು. ಮಂಗಳೂರಿನಲ್ಲಿ ಎಂಬಿಬಿಎಸ್ ಸೀಟು ಪಡೆಯಬೇಕೆಂದು ಹಠಕ್ಕೆ ಬಿದ್ದು ಯೆನೆಪೊಯದಲ್ಲಿ ಉಚಿತ ಕೋಚಿಂಗ್ ಪಡೆದು ಈ ವರ್ಷ ನೀಟ್ ನಲ್ಲಿ 720ರಲ್ಲಿ 647 (28,782 ಆಲ್ ಇಂಡಿಯಾ ರ್ಯಾಂಕ್) ಗಳಿಸಿದ್ದಾಳೆ. ಮಂಗಳೂರು ಕೆಎಂಸಿಯಲ್ಲಿ ಎಂಬಿಬಿಎಸ್ ಸೀಟು ಪಡೆದು ವಿದ್ಯಾರ್ಥಿಗಳಿಗೆ ಮಾದರಿ ಎನಿಸಿದ್ದಾಳೆ. ಗುರುಬೆಳದಿಂಗಳು ಫೌಂಡೇಶನ್ ಕುದ್ರೋಳಿ ತನ್ವಿಯ ಮುಂದಿನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು