4:33 PM Tuesday3 - March 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ… ನಾಪೋಕ್ಲು: ಹಿಂದೂ ಸಂಗಮ ಸಮಾವೇಶ ಪ್ರಚಾರ ವೇಳೆ ಮಾತಿನ ಚಕಮಕಿ; ಓರ್ವನಿಗೆ ಗಾಯ ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು… “ನಾನು ಭ್ರಷ್ಟನಲ್ಲ”: ದಿಲ್ಲಿ ಅಬಕಾರಿ ಪ್ರಕರಣದಲ್ಲಿ ಖುಲಾಸೆಗೊಂಡ ಅರವಿಂದ್ ಕೇಜ್ರಿವಾಲ್ ಕಣ್ಣೀರು ಪಾದಚಾರಿಗೆ ಸ್ಕೂಟಿ ಡಿಕ್ಕಿ: ಅದೇ ವ್ಯಕ್ತಿ ಮೇಲೆ ಹರಿದ ಕಾರು; ಸ್ಥಳದಲ್ಲೇ ಸಾವು ಬ್ಯಾಚುಲರ್ ಲೈಫ್‌ಗೆ ಕೊಡಗಿನ ಬೆಡಗಿ ಗುಡ್‌ಬೈ: ರಶ್ಮಿಕಾ – ದೇವರಕೊಂಡ ದಂಪತಿಗೆ ಅಂಬಾನಿ,… ಮಸ್ಕಿ ಇರಕಲ್ ಶ್ರೀ ಮಠದ ಜಾತ್ರಾ ಮಹೋತ್ಸವ: ಹಸೆಮಣೆ ಏರಿದ 12 ಜೋಡಿಗಳು ಜವಾಹರಲಾಲ್ ನೆಹರು ತಾರಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂಭ್ರಮ; ವೈಜ್ಞಾನಿಕ ಮನೋಭಾವಕ್ಕೆ ಸಚಿವ…

ಇತ್ತೀಚಿನ ಸುದ್ದಿ

ಜೆಸಿಐ ಸುರತ್ಕಲ್ ನಿಂದ ಗೋವಿಂದ ದಾಸ ಪಿಯು ಕಾಲೇಜಿನಲ್ಲಿ ನವಗ್ರಹ ವನ ಉದ್ಘಾಟನೆ; ಕ್ಯೂ ಆರ್ ಕೊಡ್ ಅಳವಡಿಕೆ

22/09/2021, 08:47

ಸುರತ್ಕಲ್( reporterkarnataka.com): ಜೆಸಿಐ ಸುರತ್ಕಲ್ ಘಟಕದ ವತಿಯಿಂದ ಆಯೋಜಿಸಿದ ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ರಾಖೀ ಜೈನ್ ಅವರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಸುರತ್ಕಲ್ ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಔಷಧೀಯ ಸಸ್ಯಗಳು ಉದ್ಯಾನ ಹಾಗೂ ನವಗ್ರಹ ವನದ ಉದ್ಘಾಟನಾ ಸಮಾರಂಭ ನಡೆಯಿತು.


ವನವನ್ನು ಉದ್ಘಾಟಿಸಿ ಜೇಸಿ ರಾಖೀ ಜೈನ್ ಅವರು ಜೆಸಿಐ ಸುರತ್ಕಲ್ ಹಾಗೂ ಕಾಲೇಜಿನ ಬಾಂಧವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಆರೋಗ್ಯದ ರಕ್ಷಣೆಗಾಗಿ ಔಷಧೀಯ ವನಗಳ ಪ್ರತಿ ಸಂಸ್ಥೆ, ಮನೆಗಳಲ್ಲಿ ಅತ್ಯಗತ್ಯ ಹಾಗೂ ನವಗ್ರಹ ವನದ ಯೋಜನೆಯ ಕುರಿತು ಶ್ಲಾಘಿಸಿದರು. 


ಅಧ್ಯಕ್ಷತೆಯನ್ನು ಜೆಸಿಐ ಸುರತ್ಕಲ್ ಘಟಕದ ಅಧ್ಯಕ್ಷ ಜೇಸಿ ರಾಕೇಶ್ ಹೊಸಬೆಟ್ಟು ವಹಿಸಿದರು. ಜೆಸಿಐ ಭಾರತದ ವಲಯ ಹದಿನೈದರ ವಲಯಾಧ್ಯಕ್ಷ ಜೇಸಿ ಸೌಜನ್ಯ ಹೆಗ್ಡೆ, ಹಿಂದೂ ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಹೊಸಬೆಟ್ಟು ಶ್ರೀರಂಗ, ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ವೈ.ವಿ.ರತ್ನಾಕರ ರಾವ್, ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ ಪಿ. ಶುಭ ಹಾರೈಸಿದರು. 

ನವಗ್ರಹ ವನದ ಪ್ರತಿ ಸಸಿಗಳ ಫಲಕದಲ್ಲಿ ಕ್ಯೂ ಆರ್ ಕೊಡ್ ಅಳವಡಿಸಲಾಗಿದ್ದು, ಅದನ್ನು ಸ್ಕ್ಯಾನ್ ಮಾಡಿದಲ್ಲಿ ಆ ಸಸ್ಯದ ವಿಶೇಷತೆಗಳು ಸ್ಮಾರ್ಟ್ ಫೋನ್ ನಲ್ಲಿ ಲಾಭ್ಯವಾಗುವುದು. ಈ ಮೂಲಕ ವಿದ್ಯಾರ್ಥಿಗಳಿಗೆ ಸಸ್ಯಗಳ ಮಹತ್ವಗಳ ಬಗ್ಗೆ ಅರಿವು ಮಾಡಿಸಬಹುದು ಎಂದು ಅಧ್ಯಕ್ಷರು ತಿಳಿಸಿದರು.

ಯೋಜನೆಯ ಜವಾಬ್ದಾರಿ ವಹಿಸಿದ ಎಚ್.ವಿ.ಸಂಘದ ಎಂ.ಜಿ.ರಾಮಚಂದ್ರ, ವಿರಾಟ್ ಸಂಸ್ಥೆಯ ಕಾರ್ಯನಿರ್ವಹಣಾ ಅಧಿಕಾರಿ ಸತೀಶ್ ಸದಾನಂದ ಹಾಗೂ ವಿನ್ಯಾಸಕಾರ ಶಿವರಾಂ ಅಮೀನ್ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಲಯಾಧಿಕಾರಿಗಳಾದ ಜೇಸಿ ಸತ್ಯನಾರಾಯಣ ಭಟ್, ಜೇಸಿ ಲೋಕೇಶ್ ರೈ, ಜೇಸಿ ಅಬ್ದುಲ್ ಜಬ್ಬಾರ್ ಸಾಹೇಬ್, ಜೇಸಿ ಆಶಾ ಅಲೆನ್, ಜೇಸಿ ದೀಪಕ್ ಗಂಗೂಲಿ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ, ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ. ಚೇತನಾ ಬಿ.ಕೆ, ಪೈಕ ವೆಂಕಟರಮಣ ರಾವ್, ಪಲ್ಲವಿ ರಾಜೇಶ್, ಜಯಂತಿ ಅಮೀನ್, ಜಯಶ್ರೀ, ಜೆಸಿಐ ಸುರತ್ಕಲ್ ಘಟಕದ ಸದಸ್ಯರಾದ ಜೇಸಿ ಚೆನ್ನಕೇಶವ, ಜೇಸಿ ಗುಣವತಿ ರಮೇಶ್, ಜೇಸಿ ವಿನೀತ್ ಶೆಟ್ಟಿ, ಜೇಸಿ ಸುಜೀರ್ ಶೆಟ್ಟಿ, ಜೇಸಿ ರಾಜೇಶ್ವರಿ ಶೆಟ್ಟಿ, ಜೇಸಿ ಜಯರಾಜ್ ಆಚಾರ್ಯ, ಜೇಸಿ ಜ್ಯೋತಿ ಪಿ ಶೆಟ್ಟಿ, ಜೇಸಿ ಭಾರತಿ, ಜೇಸಿ ಜ್ಯೋತಿ ಜೆ ಶೆಟ್ಟಿ,ಜೇಸಿ ಶಶಿಕುಮಾರ್ ಶೆಟ್ಟಿ, ಘಟಕದ ಯುವ ಜೇಸಿ ಸದಸ್ಯೆ ಜೇಜೆಸಿ ಹಿತಾ ಉಮೇಶ್ ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ಜೇಸಿ ನಿತೇಶ್ ಶೆಟ್ಟಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು