4:39 AM Tuesday26 - August 2025
ಬ್ರೇಕಿಂಗ್ ನ್ಯೂಸ್
ಜಾತ್ಯತೀತತೆಯ ಸಂಕೇತವಾಗಿರುವ ನಾಡ ಹಬ್ಬ, ಧಾರ್ಮಿಕವಲ್ಲ: ಡಾ. ಪುರುಷೋತ್ತಮ ಬಿಳಿಮಲೆ Bangalore | ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಿ:… Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು

ಇತ್ತೀಚಿನ ಸುದ್ದಿ

ಜೇಸಿಐ ಬಿ.ಸಿ.ರೋಡ್ ವತಿಯಿಂದ ಮಹಿಳಾ ದಿನಾಚರಣೆ: ಸಾಧಕಿಯರಿಬ್ಬರಿಗೆ ಸನ್ಮಾನ

10/03/2022, 19:11

ಬಂಟ್ವಾಳ(reporterkarnataka.com): ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ  ಜೇಸಿಐ ಬಿ.ಸಿ.ರೋಡ್ ಪವರ್ ಸ್ಟಾರ್” ವತಿಯಿಂದ ಮಹಿಳಾ ಸಾಧಕಿಯರಿಬ್ಬರನ್ನು ಸನ್ಮಾನಿಸಲಾಯಿತು.

ಗಾಂದೋಡಿನ ಅಂಗನವಾಡಿ ಕೇಂದ್ರದಲ್ಲಿ ಸುಮಾರು 30 ವರುಷದಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಾಂಸ್ಕೃತಿಕ ಸಂಘಟಕಿ, ಸಾಮಾಜಿಕ‌ ಕಾರ್ಯಕರ್ತೆ ಸರೋಜಾ ಪ್ರಕಾಶ್ ಹಾಗೂ ಹೋಮಿಯೋಪತಿ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ ವಿಷಯದಲ್ಲಿ  4ನೇ ಶ್ರೇಣಿ ಪಡೆದು ತೇರ್ಗಡೆ ಹೊಂದಿರುವ ಸಾಧಕಿ ಡಾ. ಪ್ರಣಮ್ಯ ಜೈನ್ ರಾಯಿ  ಅವರನ್ನು‌ ಸನ್ಮಾನಿಸಿ‌ ಅಭಿನಂದಿಸಲಾಯಿತು. 

ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಕಾಡುಮಠ ವಹಿಸಿದ್ದರು. ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಹೇಮಚಂದ್ರ ಶೆಟ್ಟಿಗಾರ್,ಜಗದೀಶ್ ಕೊಯಿಲ,ರಾಘವೇಂದ್ರ ರಾಯಿ, ಸತೀಶ್ ಕೊಯಿಲ,ರೀಟಾ ಮಾರಿಯಾ ಮೆನೇಜಸ್  ಉಪಸ್ಥಿತರಿದ್ದರು.   ಸರೋಜಾ ಪ್ರಕಾಶ್ ಅವರನ್ನು ಅಂಗನವಾಡಿ ಕೇಂದ್ರದಲ್ಲಿ ಹಾಗೂ ಡಾ. ಪ್ರಣಮ್ಯ ಜೈನ್ ರಾಯಿ ಅವರನ್ನು‌ ಅವರ ಸ್ವಗೃಹದಲ್ಲಿ ಅಭಿನಂದಿಸಲಾಯಿತು. ಭವಾನಿ ಶೆಟ್ಟಿ ,ಸುಭಾಶ್ ರೈ, ಸತೀಶ್ ಸಂಪಾಜೆ,ಮಹೇಶ್ ಶೆಟ್ಟಿ, ವಿದ್ಯಾ ಎಸ್. ರೈ ಉಪಸ್ಥಿತರಿದ್ದರು. ಆಶಾ ದಿನೇಶ್ ಶೆಟ್ಟಿ ಹಾಗೂ ಮರೀಟಾ ಕ್ರಿಸ್ಟಿನ್ ಡಿಸೋಜಾ ಸನ್ಮಾನಿತರ ಪರಿಚಯಿಸಿದರು. 

ಸುಧೀರ್ ಕುಮಾರ್ ಶೆಟ್ಟಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು