6:12 PM Sunday6 - October 2024
ಬ್ರೇಕಿಂಗ್ ನ್ಯೂಸ್
ಮಾಜಿ ಶಾಸಕರ ಸಹೋದರ ದಿಢೀರ್ ನಾಪತ್ತೆ; ಕೂಳೂರು ಸೇತುವೆಯಲ್ಲಿ ಕಾರು ಪತ್ತೆ; ಆತ್ಮಹತ್ಯೆ… ಮಂಗಳೂರು-ಪೊಳಲಿಗೆ ಬೆಂಜನಪದವು- ಕಲ್ಪನೆ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ಆರಂಭ ಕೋಲಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಕ್ಟೋಬರ್ 7 ರಿಂದ ಇ-ಖಾತಾ ಲಭ್ಯ ಬೆಂಗಳೂರು: ಹೃದಯವಾಹಿನಿ ರಜತ ಮಹೋತ್ಸವ, ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನ ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಕೊಟ್ಟಿಗೆಹಾರ ಭೇಟಿ: ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ… ಕೊಟ್ಟಿಗೆಹಾರ: ಗಾಂಧಿ ಜಯಂತಿಯಂದು ಮಾಂಸ ಮಾರಾಟ; ನಿಯಮ ಉಲ್ಲಂಘಿಸಿದ ಮಾರಾಟಗಾರರು ಗಾಂಧೀಜಿ ಚಿಂತನೆಗಳು ಎಲ್ಲಾ ಪತ್ರಕರ್ತರಿಗೆ ಎಂದೆಂದಿಗೂ ಮಾರ್ಗದರ್ಶಿ: ಮಂಗಳೂರು ಬಿಷಪ್ ಡಾ. ಪೀಟರ್… ಸಾಲ ಕೇಳ್ತಾ ಇಲ್ಲ, ಕೆಲಸ ಮಾಡಿದ್ದಕ್ಕೆ ನ್ಯಾಯ ಕೊಡಿ: ಪ್ರತಿಭಟನಾ ಸಭೆಯಲ್ಲಿ ರಾಜ್ಯ… ಈಚರ್ ಲಾರಿ – ಬೈಕ್ ಮಧ್ಯೆ ಭೀಕರ ಅಪಘಾತ: ಮೂವರು ಮಕ್ಕಳು ಸಹಿತ… ಬೈಕ್ ಗೆ ಗುದ್ದಿದ ಕಾಡುಕೋಣ: ರಸ್ತೆಗೆ ಬಿದ್ದು ಸವಾರನಿಗೆ ಗಾಯ

ಇತ್ತೀಚಿನ ಸುದ್ದಿ

ಜಯಪುರ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ತಪ್ಪಿಸಿದ್ರ ತಾಪಂ ಇಓ?: ಗ್ರಾಪಂ ಮಾಡಿದ ಆರೋಪಗಳೇನು?; ನ್ಯಾಯಾಲಯಕ್ಕೆ ಹೋಗಲು ಸಿದ್ಧತೆ

30/09/2024, 21:09

ಶಶಿ ಬೆತ್ತದಕೊಳಲು ಕೊಪ್ಪ

info.reporterkarnataka@gmail.com

2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಸರ್ಕಾರ ಆದೇಶ ಮಾಡಿದ ಕಾರಣದಿಂದ ಜಯಪುರ ಗ್ರಾಮ ಪಂಚಾಯಿತಿಗೆ ದಾಖಲೆ ಪರಿಶೀಲನೆಗೆ ಶೃಂಗೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ನಿಯೋಜನೆ ಮಾಡಲಾಗಿತ್ತು.
20/9/2024 ರಂದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ಮಾಡಿರುತ್ತಾರೆ.
ಆದರೆ ಸರ್ಕಾರದಿಂದ ಬಂದಿದ್ದ 134 ಪ್ರಶ್ನೆಗಳಿಗೆ ಸುಮಾರು 500 ಅಂಕಗಳು ಇರುತ್ತವೆ.
ಶೃಂಗೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರು ಕೇವಲ 10 ರಿಂದ15 ನಿಮಿಷದಲ್ಲಿ ಪರಿಶೀಲನೆ ಮಾಡಿದ್ದಾರೆ.
ಜಯಪುರ ಗ್ರಾಮ ಪಂಚಾಯತಿ ಯಲ್ಲಿ ದಾಖಲೆಗಳು ಸರಿಯಾಗಿ ಇದ್ದರು ಅವರು ಸರಿಯಾಗಿ ಪರಿಶೀಲನೆ ಮಾಡದೆ ಕಾಟಚಾರಕ್ಕೆ ಪರಿಶೀಲನೆ ಮಾಡಿ ಹೋಗಿ ಜಯಪುರ ಗ್ರಾಮ ಪಂಚಾಯಿತಿಗೆ ಸಿಗಬೇಕಿದ್ದ ಗಾಂಧಿ ಗ್ರಾಮ ಪುರಸ್ಕಾರವನ್ನು ತಪ್ಪಿಸಿದ್ದಾರೆ ಎಂದು ಜಯಪುರ ಗ್ರಾಮ ಪಂಚಾಯತಿ ಅವರು ಶೃಂಗೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮೇಲೆ ಅಕ್ರೋಶ ಹೊರಹಾಕಿದ್ದಾರೆ.

ಪರಿಶೀಲನೆ ಮಾಡಿ ನಮಗೆ ಮೊದಲು 401 ಅಂಕಗಳನ್ನು ನೀಡಿ ನಮ್ಮನ್ನು ಆಯ್ಕೆ ಮಾಡಿದ್ದರು.
ಈಗ ಮತ್ತೆ 328 ಅಂಕಗಳನ್ನು ನೀಡಿ ಸುಮಾರು 73 ಅಂಕಗಳನ್ನು ಕಡಿಮೆ ಮಾಡಿ ನಮಗೆ ಪ್ರಶಸ್ತಿಯನ್ನು ತಪ್ಪಿಸಿದ್ದಾರೆ.
ನಮಗೆ 401 ಅಂಕಗಳು ಮೊದಲು ಕೊಟ್ಟು ಈಗ 73 ಅಂಕ ಕಡಿಮೆ ಮಾಡಿ 328 ಅಂಕ ಮಾಡಿದ್ಯಾಕೆ?.ನಮಗೆ 73 ಅಂಕಗಳು ಕಡಿಮೆ ಹೇಗೆ ಆಯ್ತು?.ನಮಗೆ ಮಾಹಿತಿ ನೀಡಬೇಕು ಎಂಬುದು ಜಯಪುರ ಗ್ರಾಮ ಪಂಚಾಯತಿ ಅವರ ಬೇಡಿಕೆ.

ಇತ್ತೀಚಿನ ಸುದ್ದಿ

ಜಾಹೀರಾತು