ಇತ್ತೀಚಿನ ಸುದ್ದಿ
ಇಂದು ಪುತ್ತೂರಿನ ಆರ್ಲ ಪದವಿನಲ್ಲಿ ಪಾವಂಜೆ ಮೇಳದಿಂದ ‘ಶ್ರೀದೇವಿ ಲಲಿತೋಪಾಖ್ಯಾನ’ ಯಕ್ಷಗಾನ ಬಯಲಾಟ ; ಹಿರಿಯ ಕಲಾವಿದರಿಗೆ ಗೌರವಾರ್ಪಣೆ
10/01/2022, 12:47

ಮಂಗಳೂರು (Reporterkarnataka.com) ಬಿ ಬಿ ಕ್ರಿಯೇಶನ್ಸ್ ಪಾಣಾಜೆ ವತಿಯಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಶ್ರೀ ದೇವಿ ಲಲಿತೋಪಾಖ್ಯಾನ ಯಕ್ಷಗಾನ ಬಯಲಾಟದ ಪ್ರದರ್ಶನವು ಜ.10ರಂದು ಸಂಜೆ 6ರಿಂದ ಪುತ್ತೂರಿನ ಆರ್ಲ ಪದವು (ಪಾಣಾಜೆ) ಸುಬೋಧ ಪ್ರೌಢಶಾಲಾ ವಠಾರದಲ್ಲಿ ನಡೆಯಲಿದೆ.
ಈ ಸಂದರ್ಭ ಬೊಳ್ಳಿಂಬಳ ದಿ.ಸುಬ್ರಾಯ ಓಕುಣ್ಣಾಯ ಸ್ಮರಣಾರ್ಥ ಹಿರಿಯ ಕಲಾವಿದರಾದ ಜಿ.ಶೀನಪ್ಪ ರೈ ಪಡ್ಯಂಬೆಟ್ಟು, ವೆಂಕಟೇಶ ಉಳಿತ್ತಾಯ ಆರ್ಲಪದವು, ಶೀನಪ್ಪ ರೈ ಕೋಂದಲಡ್ಕ, ಶ್ರೀಧರ ಗೌಡ ಮಿತ್ತಡ್ಕ ಇವರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 8ಗಂಟೆಯ ಬಳಿಕ, ಶ್ರೀಮತಿ ಕಾವ್ಯಶ್ರೀ ಹಾಗೂ ಜೋತಿಷ್ಯರಾದ ಲೋಕೇಶ್ ಬಲ್ಯಾಯ ದೊಡ್ಡಡ್ಕ ಪುತ್ತೂರು ಇವರಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.