3:39 PM Wednesday24 - September 2025
ಬ್ರೇಕಿಂಗ್ ನ್ಯೂಸ್
Kodagu | ವಿರಾಜಪೇಟೆ, ಕುಶಾಲನಗರ ಮತ್ತು ಹುದಿಕೇರಿ ಆಸ್ಪತ್ರೆ ಮೇಲ್ದರ್ಜೆಗೆ: ಆರೋಗ್ಯ ಸಚಿವ… ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಮಹಿಳೆಯರ ಬದುಕು ಸುಧಾರಣೆ: ಮಹಿಳಾ ದಸರಾ ಉದ್ಘಾಟಿಸಿ… ಪೊನ್ನಂಪೇಟೆ ಕೋಣಗೇರಿಯಲ್ಲಿ ಸೈನಿಕ ಪತಿಯಿಂದಲೇ ಪತ್ನಿಗೆ ಗುಂಡು: ಮೈಸೂರಿಗೆ ರವಾನೆ ಗೋಣಿಕೊಪ್ಪಲು ಬಿಟ್ಟಂಗಾಲ ಮುಖ್ಯರಸ್ತೆಯಲ್ಲಿ ಖಾಸಗಿ ಬಸ್ – ಜೀಪು ಅಪಘಾತ: ಅದೃಷ್ಟವಶಾತ್ ಎಲ್ಲರೂ… Kodagu | ಐತಿಹಾಸಿಕ ಮಡಿಕೇರಿ ದಸರಾಕ್ಕೆ ಚಾಲನೆ: 4 ಶಕ್ತಿ ದೇವತೆಗಳಿಗೆ ವಿಶೇಷ… ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಸರ್ಕಾರದಿಂದ 6 ಕೋಟಿ ನಗದು ಬಹುಮಾನ: ಮುಖ್ಯಮಂತ್ರಿ… ಜಿಎಸ್ ಟಿ ಜಾರಿ ಮಾಡಿದ್ದೂ ಮೋದಿ, ಜಿಎಸ್ ಟಿ ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ,… ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ

ಇತ್ತೀಚಿನ ಸುದ್ದಿ

ಐಡಿಯಲ್ ಪಬ್ಬಾಸ್ ನಲ್ಲಿ ಐಸ್ ಕ್ರೀಂ ಸವಿದ ಕಾಂಗ್ರೆಸ್ ಯುವರಾಜ!: ಗಡಬಡ್, ಚಾಕುಲೇಟ್ ಡ್ಯಾಡ್ ಗೆ ರಾಹುಲ್ ಫಿದಾ!!

28/04/2023, 15:30

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporter Karnataka@gmail.com

ಐಸ್ ಕ್ರೀಂ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ…? ಅಬಾಲವೃದ್ದರ ವರೆಗೆ ಎಲ್ಲರೂ ಐಸ್ ಕ್ರೀಂ ಪ್ರಿಯರೇ. ಅದರಲ್ಲೂ ಕರಾವಳಿಯ ಮನೆ ಮಾತಾಗಿರುವ ಐಡಿಯಲ್ ಐಸ್ ಕ್ರೀಂ ಯಾರಿಗೆ ಬೇಡ ಹೇಳಿ?. ಐಡಿಯಲ್ ಅಂದ್ರೆ ಕರಾವಳಿ ಜನ ಮುಗಿ ಬೀಳ್ತಾರೆ. ಕ್ಯೂ ನಿಂತು ಐಸ್ ಕ್ರೀಂ ಮೆಲ್ಲುತ್ತಾರೆ. ಹಾಗೆ ಕಾಂಗ್ರೆಸ್ ನ ಯುವರಾಜ ರಾಹುಲ್ ಗಾಂಧಿ ಅವರು ಕೂಡ ಐಡಿಯಲ್ ಐಸ್ ಕ್ರೀಂಗೆ ಮನಸೋತಿದ್ದಾರೆ.
ರಾಹುಲ್ ಗಾಂಧಿ ನಿನ್ನೆ ಉಡುಪಿಗೆ ಆಗಮಿಸಿದ್ದರು. ಅಲ್ಲಿಂದ ಹೆಲಿಕಾಪ್ಟರ್ ನಲ್ಲಿ ಮಂಗಳೂರಿಗೆ ಬಂದಿದ್ದಾರೆ. ಇದು ಅವರ ಎಲೆಕ್ಷನ್ ಟೂರ್. ಕಾಪುವಿನಲ್ಲಿ ಮೋಗವೀರ ಸಮುದಾಯದ ಜತೆ ಸಂವಾದ ನಡೆಸಿದ ಅವರು ಸಂಜೆ ಮಂಗಳೂರಿನ ಹೊರವಲಯದ ಅಡ್ಯಾರ್ ಸಮೀಪದ ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ನಲ್ಲಿ ಕಾಂಗ್ರೆಸ್ ನ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದಾರೆ.
ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಬಳಿಕ ರಾತ್ರಿ ಅಲ್ಲಿಂದ ರಾಹುಲ್ ಅವರು ನಗರಕ್ಕೆ ಆಗಮಿಸಿ ಲಾಲ್ ಬಾಗ್ ನಲ್ಲಿರುವ ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್ ಗೆ ತೆರಳಿ ಐಸ್ ಕ್ರೀಮ್ ಸವಿದಿದ್ದಾರೆ. ಐಡಿಯಲ್ ಐಸ್ ಕ್ರೀಮ್ ಸ್ಪೆಷಲ್ ಆದ ಗಡಬಡ್, ಚಾಕುಲೇಟ್ ಡ್ಯಾಡ್, ಪಾನ್ ಐಸ್ ಕ್ರೀಂ, ಸಿರಾಮುಸ್ ಸೇರಿದಂತೆ ಹಲವು ಪ್ಲೆವರ್ ಗಳ ಐಸ್ ಕ್ರೀಂಗಳನ್ನು ಸೇವಿಸಿದರು. ಎಲ್ಲ ಐಸ್ ಕ್ರೀಂ ಗಳಿಗಿಂತ್ ಗಡಬಡ್ ಹಾಗೂ ಚಾಕಲೇಟ್ ಡ್ಯಾಡ್ರಾ ರಾಹುಲ್ ಅವರಿಗೆ ತುಂಬಾ ಇಷ್ಟವಾಯಿತು.ಎಂದು ಅವರ ಜತೆಗಿದ್ದ ಮುಖಂಡರರು ರಿಪೋರ್ಟರ್ ಕರ್ನಾಟಕಕ್ಕೆ ತಿಳಿಸಿದ್ದಾರೆ.


ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಮುಂತಾದವರು ಅವರ ಜತೆಗಿದ್ದರು. ರಾಹುಲ್ ಗಾಂಧಿ ಅವರ ಜತೆಗೆ ಸೆಲ್ಫಿಗಾಗಿ ಜನರು ಮುಗಿಬಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು