6:57 AM Wednesday5 - November 2025
ಬ್ರೇಕಿಂಗ್ ನ್ಯೂಸ್
ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ Chikkamagaluru | ಶೃಂಗೇರಿ: ನರಹಂತಕ ಕಾಡಾನೆ ಕೊನೆಗೂ ಸೆರೆ; ಸಾಕಾನೆಯ ಮೂಲಕ ಕಾರ್ಯಾಚರಣೆ Mysore | ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ: ಸಿಎಂ ಸಿದ್ದರಾಮಯ್ಯ ನವಕಲಬುರಗಿ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ದ, ಲೀಪ್ ಯೋಜನೆಯ ಅಡಿಯಲ್ಲಿ ಅಭಿವೃದ್ದಿಗೆ ಒತ್ತು:… ಡಿಜಿಟಲ್ ಅರೆಸ್ಟ್ ಮೂಲಕ ಹಣ ವರ್ಗಾವಣೆಯಾಗದಂತೆ ತಡೆದ ಪೊಲೀಸರು: ಮಂಗಳೂರು ಪೊಲೀಸರ ಕಾರ್ಯಕ್ಕೆ… Kodagu | ಪೊನ್ನಂಪೇಟೆಯಲ್ಲಿ ಮಿತಿ ಮೀರಿದ ಬೀದಿ ನಾಯಿ ಹಾವಳಿ: ಶ್ವಾನ ದಾಳಿಗೆ…

ಇತ್ತೀಚಿನ ಸುದ್ದಿ

ಶಿವಳ್ಳಿ ಸಮುದಾಯದ ಸಾತ್ವಿಕ ಅಹಾರ ಸಂಸ್ಕೃತಿ ಇಷ್ಟ: ಪತ್ರಕರ್ತ ರವೀಂದ್ರ ಜೋಶಿ

21/08/2025, 22:26

ಮಂಗಳೂರು(reporterkarnataka.com): ಶಿವಳ್ಳಿ ನಂಬಿಕಸ್ತ ಸಮುದಾಯ, ವಿಶಿಷ್ಟ ಆಹಾರ ಸಂಸ್ಕೃತಿಯ ಶಿವಳ್ಳಿ ಬ್ರಾಹ್ಮಣರ ಖಾದ್ಯಗಳು ತುಂಬಾ ರುಚಿಕರ ಎಂದು ಸಾಹಿತಿ, ಪತ್ರಕರ್ತ ರವೀಂದ್ರ ಜೋಶಿ ಹೇಳಿದರು.
ನಗರದ ಕದ್ರಿ ಶ್ರೀಮಾತಾಕೃಪಾದಲ್ಲಿ ಶಿವಳ್ಳಿ ಸ್ಪಂದನ ಕದ್ರಿ ವಲಯದ ವತಿಯಿಂದ ನಡೆದ ಆಟಿ ಕೂಟ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಾತ್ವಿಕ ಆಹಾರದಿಂದ ಜನರಲ್ಲಿ ಸಾತ್ವಿಕತೆ ಹೆಚ್ಚುತ್ತದೆ. ಶಿವಳ್ಳಿ ಹೆಸರಿನ ಹೋಟೆಲ್‌ಗಳಲ್ಲಿ ಆಹಾರದಲ್ಲಿ ಮೋಸ ಇರೋದಿಲ್ಲ, ಹೊಟ್ಟೆಗೆ ಸಮಸ್ಯೆ ಆಗುವುದಿಲ್ಲ. ವಿಶಿಷ್ಟ ರುಚಿ ಇರುತ್ತವೆ. ಆದರೆ ಅಂತಹ ಹೋಟೆಲ್‌ಗಳು ಈಗ ನಶಿಸುತ್ತಿವೆ ಎಂದರು. ಸಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆದರೆ ಖಿನ್ನತೆ ಉಂಟಾಗುತ್ತದೆ. ಮಾನವ ಸಂಘಜೀವಿ ಇದೇ ರೀತಿಯ ಸಮುದಾಯ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಮಾನಸಿ, ದೈಹಿಕ ಆರೋಗ್ಯ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕದ್ರಿ ದೇವಸ್ಥಾನ ಅರ್ಚಕರಾದ ವೇದಮೂರ್ತಿ ಕೃಷ್ಣ ಅಡಿಗರು ಪ್ರವಚನ ನೀಡಿ, ಆಟಿ ತಿಂಗಳಿನಲ್ಲಿ ಮಹಿಳೆಯರು ಹೊಸ್ತಿಲು ಬರೆಯುವ ಕ್ರಮದಿಂದ ಪ್ರಾರಂಭಿಸಿ ತುಳುನಾಡಿನಲ್ಲಿ ಆಟಿ ತಿಂಗಳನ್ನು ವಿಶೇಷ ಕ್ರಮದಿಂದ ಆಚರಿಸುತ್ತಾರೆ. ವಿವಿಧ ಆಚರಣೆಗಳಿವೆ, ಇದಕ್ಕೆ ವೈಜ್ಞಾನಿಕ/ಶಾಸ್ತ್ರದ ಹಿನ್ನೆಲೆ ಇದೆ ಎಂದರು.
ಶಿವಳ್ಳಿ ಸ್ಪಂದನ ಮಂಗಳೂರು ತಾಲೂಕಿನ ಅಧ್ಯಕ್ಷ ವಾಸುದೇವ ಭಟ್, ಕಾರ್ಯದರ್ಶಿ ಕೃಷ್ಣ ಭಟ್, ಉಪಾಧ್ಯಕ್ಷ ರಾಮಚಂದ್ರ ಭಟ್ ಎಲ್ಲೂರು, ಆಡಳಿತ ಮಂಡಳಿಯ ಸದಸ್ಯ ನೋಡು ಶ್ರೀನಿವಾಸ ಆಚಾರ್, ಮಾಧ್ಯಮ ಸಲಹೆಗಾರ ಜಿತೇಂದ್ರ ಕುಂದೇಶ್ವರ, ಧಾರ್ಮಿಕ ಪರಿಷತ್‌ ಮಾಜಿ ಸದಸ್ಯ ಗಿರಿಪ್ರಕಾಶ್‌ ತಂತ್ರಿ, ಶಿವಳ್ಳಿ ತಾಲೂಕು ಮಹಿಳಾಘಟಕದ ಅಧ್ಯಕ್ಷೆ ರಮಾಮಣಿ, ವಲಯ ಅಧ್ಯಕ್ಷೆ ಗೀತ ಬೆಳ್ಳೆ, ಕಾರ್ಯದರ್ಶಿ ಶೀಲಾ ಜಯಪ್ರಕಾಶ, ಕೋಶಾಧಿಕಾರಿ ರವಿಕಾಂತ ಭಟ್ ಇದ್ದರು.
ಅನಂತ ಭಟ್ ಮತ್ತು ರಾಮಚಂದ್ರ ಭಟ್ ಎಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಆ ನಂತರ ಆಟಿ ತಿಂಗಳ ವಿಶೇಷ ಖಾದ್ಯ ವನ್ನು ತಯಾರಿಸಿದ ಮಹಿಳಾ ಸದಸ್ಯರನ್ನು ಸನ್ಮಾನಿಸಲಾಯಿತು. ಖಾದ್ಯಗಳನ್ನು ಎಲ್ಲಾ ಸದಸ್ಯರಿಗೆ, ಅತಿಥಿಗಳಿಗೆ ಉಣಬಡಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು