10:57 PM Friday5 - July 2024
ಬ್ರೇಕಿಂಗ್ ನ್ಯೂಸ್
ಬೆಲೆಯೇರಿಕೆ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ: ಶಾಸಕ ಡಾ. ಭರತ್ ಶೆಟ್ಟಿ… ಕೋಟರಿಂದ ತೆರವಾದ ಸ್ಥಾನದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್… ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆ ಶಾಶ್ವತ ತಡೆಗೆ, ದ್ವೀಪವಾಸಿಗಳ ರಕ್ಷಣೆಗೆ ಜಿಲ್ಲಾ… ಶ್ರಮ ಸಂಸ್ಕೃತಿ ಗೌರವಿಸುವ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ: ಉತ್ತರ ಕರ್ನಾಟಕದಲ್ಲೆಡೆ ಭಾರೀ ಸಂಭ್ರಮ ಮಂಗಳೂರಿನ ವಿವಿಧಡೆ ಟ್ರಾಫಿಕ್ ಪೊಲೀಸರಿಂದ ಕರ್ಕಶ ಹಾರ್ನ್, ಎಲ್ಇಡಿ ಲೈಟ್ ತೆರವು ಕಾರ್ಯಾಚರಣೆ ಹುಣಸಗಿ: ವಿದ್ಯಾನಂದ ಶರಣರ 18ನೇ ವರ್ಷದ ಪುಣ್ಯಸ್ಮರಣೆ; ಸತ್ಸಂಗ ಸಂಜೀವಿನಿ ಕೂಟ ನೀಟ್ ಪರೀಕ್ಷೆ ಹಗರಣ: ಕೇಂದ್ರ ಸರಕಾರ ವಿರುದ್ಧ ಕಾಂಗ್ರೆಸ್, ಎನ್ ಎಸ್ ಯುಐ… ಚಾರ್ಮಾಡಿ ಘಾಟಿಯಲ್ಲಿ ಕಸ ಎಸೆದ ಎಳನೀರು ವಾಹನದ ಚಾಲಕನ ಮೇಲೆ ಕೇಸ್; ಚಾಲಕನಿಂದಲೇ… ಪಿಎಂ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ಕಲ್ಯಾಣ ಕರ್ನಾಟಕ ಅಭಿವೃದ್ದಿ, ಬೆಂಗಳೂರಿನಲ್ಲಿ ಸುರಂಗ… 1.80 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬೆಳಗೇರಾ ಸೇತುವೆ ಸಂಚಾರಕ್ಕೆ ರೆಡಿ: ಹೋರಾಟಕ್ಕೆ ಸಂದ…

ಇತ್ತೀಚಿನ ಸುದ್ದಿ

ಹುಣಸಗಿ: ವಿದ್ಯಾನಂದ ಶರಣರ 18ನೇ ವರ್ಷದ ಪುಣ್ಯಸ್ಮರಣೆ; ಸತ್ಸಂಗ ಸಂಜೀವಿನಿ ಕೂಟ

03/07/2024, 14:05

ಶಿವು ರಾಠೋಡ ಹುಣಸಗಿ ಯಾದಗಿರಿ

info.reporterkarnataka@gmail.com

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬೆನಕನಹಳ್ಳಿ ಮಹಾಬೋಧಾಲಯ ಮಠದಲ್ಲಿ ಇಂದು ಶ್ರೀ ವಿದ್ಯಾನಂದ ಶರಣರ 18ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಸತ್ಸಂಗ ಸಂಜೀವಿನಿ ಕೂಟ ಏರ್ಪಡಿಸಲಾಗಿತ್ತು.


ಈ ಸತ್ಸಂಗ ಸಂಜೀವಿನಿ ಕೂಟ ಮೂರು ದಿನಗಳ ಕಾಲ ನಡೆಯಲಿದ್ದು, ಬೆನಕನಹಳ್ಳಿ ಮಠಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಶರಣರ ಹಿತ ವಚನಗಳನ್ನು ಆಲಿಸುತ್ತಾರೆ.
ಸುತ್ತಮುತ್ತಲಿನ ಗ್ರಾಮದಿಂದ ಆಗಮಿಸುತ್ತಿರುವ ಭಕ್ತಾದಿಗಳಿಗೆ ಪ್ರವಚನ ನೀಡಲು ಅನೇಕ ಮಠಾಧಿಪತಿಗಳು ಗುರುಗಳು ಆಗಮಿಸುತ್ತಾರೆ. ಕಾರ್ಯಕ್ರಮಕ್ಕೆ ಮಾತೊ ಶ್ರೀ ದೇವಿತಾಯಿ, ಮನೋಹರ ರಾವ್ ಕುಲಕರ್ಣಿ, ಕೃಷ್ಣಾನಂದ ಶಾಸ್ತ್ರಿ, ಶಂಕ್ರಣ್ಣ ಹುಣಶ್ಯಾಳ ಹಾಗೂ ಪರಮಪೂಜ ಈ ದೇವಾನಂದ ಶರಣರು ಮಹಾಭೋದಾಲಯ ಬೆನಕನಹಳ್ಳಿ ಮೂರು ದಿನಗಳ ವರೆಗೂ ನಡೆಯುವ ಈ ಸಂಜೀವಿನಿ ಕೂಟವು ಪ್ರತಿದಿನವೂ ಒಬ್ಬರು ಶರಣರು ಭಕ್ತಾದಿಗಳಿಗೆ ಪ್ರವಚನ ಮಾಡುತ್ತಿದ್ದಾರೆ. ಇಂದು ಮೂರನೇ ದಿನವಾದ್ದರಿಂದ ಬಹಳ ವಿಶೇಷ ಪೂಜೆ ನಡೆಯುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಪರಮಪೂಜ್ಯರ ಪ್ರವಚನವನ್ನು ಆಲಿಸುತ ಭಕ್ತಾದಿಗಳು ಮೈಮರೆಯುವಂತೆ ಕುಳಿತಿದ್ದರು. ಈ ಮಠದಲ್ಲಿ ದಿನನಿತ್ಯ ವಿವಿಧ ಬಗೆಯ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತಿತ್ತು. ಆದರೆ ಇಂದು ಕೊನೆಯ ದಿನ ಪ್ರಯುಕ್ತ ಶೇಂಗಾ ಹೋಳಿಗೆ ವಿಶೇಷವಾಗಿ ನೀಡಲಾಯಿತು. ಶ್ರೀ ಸಂಜೀವಿನಿ ಕೂಟದಲ್ಲಿ ಸಹಸ್ರಾರು ಭಕ್ತಾದಿಗಳು ಬೆನಕನಹಳ್ಳಿ ಹೆಬ್ಬಾಳ ಕ್ಕೆ ಗ್ರಾಮದ ಮುಖಂಡರು ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು