ಇತ್ತೀಚಿನ ಸುದ್ದಿ
ಹಿರಿಯಡ್ಕ: ಸೆಪ್ಟೆಂಬರ್ 7ರಂದು ‘ಸಪ್ತಪದಿ’ ವಧು–ವರ ಅನ್ವೇಷಣೆ – 2025
04/09/2025, 12:51

ಹಿರಿಯಡ್ಕ(reporterkarnataka.com): ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ, ಹಿರಿಯಡ್ಕ ಇವರ ಮುಂದಾಳತ್ವದಲ್ಲಿ, RSB & BGSB ಸಪ್ತಪದಿ ವಿವಾಹ ಮಾಹಿತಿ ಕೇಂದ್ರ, ಬೆಂಗಳೂರು ಇವರ ಆಯೋಜನೆಯಲ್ಲಿ “ಸಪ್ತಪದಿ ವಧು–ವರ ಅನ್ವೇಷಣೆ – 2025” ಕಾರ್ಯಕ್ರಮವು ಸೆಪ್ಟೆಂಬರ್ 7ರಂದು ಬೆಳಗ್ಗೆ 9 ಗಂಟೆಯಿಂದ ಹಿರಿಯಡ್ಕ ಓಂತಿಬೆಟ್ಟುನ
ಶಿವಪುರ ಸುಬ್ಬಣ್ಣನಾಯಕ್ ಸಾರಸ್ವತ ಸಭಾ ಭವನ ನಡೆಯಲಿದೆ.
ಸಮಾಜದ ವಿವಾಹಾಪೇಕ್ಷಿ ವಧು–ವರರಿಗೆ ಪರಸ್ಪರ ಪರಿಚಯ ಹಾಗೂ ಮಾಹಿತಿಗಳ ವಿನಿಮಯಕ್ಕಾಗಿ ವೇದಿಕೆಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಭಾಗವಹಿಸಲು ಯಾವುದೇ ಶುಲ್ಕವಿಲ್ಲ. ನೋಂದಾವಣಾ ಅರ್ಜಿ 2 ಪ್ರತಿಗಳು ಹಾಗೂ 2 postcard ಗಾತ್ರದ ಭಾವಚಿತ್ರಗಳನ್ನು ಸಲ್ಲಿಸುವುದು ಕಡ್ಡಾಯ. ವಧು–ವರರ ಪೋಷಕರು ಕಡ್ಡಾಯವಾಗಿ ಹಾಜರಿರಬೇಕೆಂದು ಸಂಘದವರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಚಹಾ, ತಿಂಡಿ ಹಾಗೂ ಊಟದ ವ್ಯವಸ್ಥೆಯೂ ಕಲ್ಪಿಸಲಾಗಿದೆ.
ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದವರು:
– ಪ್ರತಿಮಾ ಪ್ರಭು ಕೋಂಟು – 9480566541
– ಮೋಹನ್ ನಾಯಕ್ ಶಿವಮೊಗ್ಗ – 9482736447
– ಶಿವರಾಮ್ ಪ್ರಭು ಆತ್ರಾಡಿ – 9448724073
– ಸುನೀಲ್ ಬೋರ್ಕರ್ ಪುತ್ತೂರು – 9686914639
– ಸರೋಜಿನಿ ಪ್ರಭು ಕೋಡಿಬೆಟ್ಟು – 9663394650
– ಎಂ.ಡಿ. ಪ್ರಭು ಬೆಂಗಳೂರು – 7019976058
– ಹರಿದಾಸ್ ಕಾಮತ್ ಕಾಂಥರಗುಂಡಿ – 9481748552
– ಶ್ರೀನಿಧಿ ಓಂತಿಬೆಟ್ಟು – 8277403845
– ಮೇಘ ನಾಗರಾಜ್ ನಾಯಕ್ ಕಾಜರಗುತ್ತು – 7676822949
ಭಾಗವಹಿಸುವವರು ಫೋಟೋ ಹೊಂದಿರುವ ಬಯೋಡೇಟಾವನ್ನು ನೋಂದಾವಣಾ ಅಧಿಕಾರಿಗಳಿಗೆ WhatsApp ಮುಖಾಂತರ ಕಳುಹಿಸಿ ನೋಂದಾವಣೆ ಖಚಿತಪಡಿಸಿಕೊಳ್ಳಬೇಕು. ನೋಂದಾವಣೆಯನ್ನು ಪರಿಚಿತ ಅಧಿಕಾರಿಯ ಮೂಲಕವೇ ಮಾಡಿಕೊಳ್ಳಬೇಕು, ಪ್ರತಿಯೊಬ್ಬರಿಗೂ ಕರೆ ಮಾಡುವ ಅವಶ್ಯಕತೆಯಿಲ್ಲ ಎಂದು ಹಿರಿಯಡ್ಕ ರಾಜಾಪುರ ಸಾರಸ್ವತ ಬ್ರಾಹ್ಮಣಸಂಘ ಪ್ರಕಟಣೆಯಲ್ಲಿ ತಿಳಿಸಿದೆ