6:56 PM Friday27 - March 2026
ಬ್ರೇಕಿಂಗ್ ನ್ಯೂಸ್
1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ: ಸಚಿವ ಮಧು ಬಂಗಾರಪ್ಪ… ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌ ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ… ಲ್ಯಾಂಬೊರ್ಗಿನಿ ಕಾರು ಗಿರಿಗಿಟ್ಲೆ ಹೊಡೆಸಿದ ಪ್ರಕರಣ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ,… ಮತ್ತೆ ಬಾಬಾ ಬುಡನ್ ಗಿರಿ ದತ್ತಪೀಠ ವಿವಾದ: ಪೂಜಾ-ವಿಧಿ ವಿಧಾನದ ವಿಚಾರದಲ್ಲಿ ಮುಸ್ಲಿಮರ… ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್‌ ರೋಡ್‌…

ಇತ್ತೀಚಿನ ಸುದ್ದಿ

ಗ್ರಾಮೀಣಾಭಿವೃದ್ಧಿ ಕಟ್ಟಡದ ಲಿಫ್ಟ್ ಒಳಗೆ ಶಾಸಕರು ಇದ್ದಂತೆ ಲಿಫ್ಟ್ ಕೈ ಕೊಡ್ತಾ..!!??

28/07/2024, 13:15

ರಶ್ಮಿ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಸುಮಾರು 13.5 ಕೋಟಿ ರೂ. ವೆಚ್ಚದಲ್ಲಿ ಕಟ್ಟಲಾದ ಗ್ರಾಮೀಣಾಭಿವೃದ್ಧಿ ಕಟ್ಟಡದ ಬಗ್ಗೆ ಈಗಾಗಲೇ ಹಲವು ವಿಷಯಗಳು ಚರ್ಚೆ ಆಗಿದ್ದವು. ಅದರಲ್ಲೂ ಮಳೆಗಾಲದಲ್ಲಿ ಸೋರುವುದು, ತಂಡಿ ಬರುತ್ತಿರುವುದು ಹೀಗೆ ಹಲವು ಕಾಮಗಾರಿಗಳ ಬಗ್ಗೆ ಇದೊಂದು ಅವೈಜ್ಞಾನಿಕ ಕಾಮಗಾರಿ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು.
ಅದು ಬರಿ ಆರೋಪಕ್ಕೆ ಸೀಮಿತವಾಗದೆ ಟಿವಿ ಮಾಧ್ಯಮ, ಪತ್ರಿಕೆ, ಡಿಜಿಟಲ್ ಮಾಧ್ಯಮ ಹೀಗೆ ಎಲ್ಲದರಲ್ಲೂ ಸುದ್ದಿ ಪ್ರಸಾರವಾಗಿತ್ತು. ಈ ಸುದ್ದಿಗಳಲ್ಲಿ ಗ್ರಾಮೀಣಾಭಿವೃದ್ಧಿ ಕಟ್ಟಡದ ಲಿಫ್ಟ್ ಬಗ್ಗೆ ಕೂಡ ಕೆಲವೊಂದು ಮಾಧ್ಯಮ ಲಿಫ್ಟ್ ಕೆಲಸ ನಿರ್ವಹಿಸದೆ ಇರುವ ಬಗ್ಗೆ ಉದ್ಘಾಟನೆ ಆಗಿ ಎರಡು ತಿಂಗಳಲ್ಲೇ ಕೆಟ್ಟು ನಿಂತ ಲಿಫ್ಟ್ ಎಂಬ ಶಿರೋನಾಮೆಯಡಿಯಲ್ಲಿ ವರದಿ ಕೂಡ ಮಾಡಿದ್ದವು.
ಕೆಲವು ವೃದ್ಧರಿಗೆ ಮೆಟ್ಟಿಲು ಹತ್ತಲು ಸಮಸ್ಯೆ ಆಗುತ್ತಿದೆ.ಲಿಫ್ಟ್ ಸರಿಪಡಿಸಿ ಎಂದು ಸುದ್ದಿ ಕೂಡ ಪ್ರಸಾರ ಮಾಡಿದ್ದವು.
ಆದರೆ ಶನಿವಾರ ಗ್ರಾಮೀಣಾಭಿವೃದ್ಧಿ ಕಟ್ಟಡದಲ್ಲಿ ಅತಿವೃಷ್ಟಿಯಿಂದ ಆದ ಮಳೆ ಹಾನಿಗಳ ಕುರಿತಾಗಿ ನಡೆದ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಬೇಕಾಗಿದ್ದ ಶಾಸಕರು ಬರುವುದು 10 ನಿಮೀಷ ತಡವಾಗಿತ್ತು. ಸಭೆಗೆ ಬಂದ ಎಲ್ಲಾ ಅಧಿಕಾರಿಗಳು, ಪತ್ರಿಕಾ ಮಧ್ಯಮದವರು ಶಾಸಕರಿಗಾಗಿ ಕಾಯುತ್ತ ಕುಳಿತಿದ್ದರು. ಆದರೆ ಶಾಸಕರು ಕೆಳಗಡೆಯಿಂದ ಮೇಲ್ಭಾಗದ 4ನೇ ಮಹಡಿಗೆ ಮೆಟ್ಟಿಲು ಹತ್ತಿ ನಡೆದುಕೊಂಡೆ ಬಂದರು.
ಸಭೆಗೆ ಬರಲು ಸುಮಾರು 10 ನಿಮಿಷ ತಡವಾಗಿತ್ತು. ನಂತರ ಶಾಸಕರು ಬಂದರು. ಸಭೆ ಮುಗಿದ ನಂತರ ಶಾಸಕರು ತಡವಾಗಿ ಸಭೆಗೆ ಬರಲು ಕಾರಣ ಏನು ಎಂದು ತಿಳಿದ ವಿಷಯ ಲಿಫ್ಟ್ ಕೈ ಕೊಟ್ಟಿತ್ತು ಎಂದು, ಕರೆಂಟ್ ಹೋಗಿ ಲಿಫ್ಟ್ ನಿಂತಿತ್ತೋ? ಅಥವಾ ಮಿಷನ್ ದುರಸ್ಥಿಗೊಂಡು ನಿಂತಿದ್ದೋ? ಗೊತ್ತಾಗಲಿಲ್ಲ.
ಆದರೆ 10 ನಿಮಿಷ ಶಾಸಕರು ಲಿಫ್ಟ್ ಒಳಗೆ ಸಿಲುಕಿಕೊಂಡಿದ್ದರು ಎಂದು ಅಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ತಿಳಿಸಿದ್ದು ಲಿಫ್ಟ್ ನಂಬಿ ಉಸಿರು ಕಟ್ಟಿ ಜೀವ ಕಳೆದು ಕೊಳ್ಳುವುದಕ್ಕಿಂತ ದೇವರು ಕೊಟ್ಟ ಕಾಲಿನಿಂದ ಮೆಟ್ಟಿಲು ಹತ್ತಿ ಹೋಗುವುದೇ ಒಳ್ಳೆಯದು ಎಂಬ ಮಾತುಗಳು ಸಭೆಯಲ್ಲಿ ಭಾಗಿಯಾಗಿದ್ದ ಕೆಲವು ಮಂದಿಯಿಂದ ಕೇಳಿ ಬಂದಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು