7:56 AM Thursday24 - April 2025
ಬ್ರೇಕಿಂಗ್ ನ್ಯೂಸ್
Bangalore | ಪೆಹಲ್ಗಾಮ್ ನರಮೇಧ: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ… Water Metro | ಗುರುಪುರ- ನೇತ್ರಾವತಿ ನದಿಯಲ್ಲಿ ಮಂಗಳೂರು ವಾಟರ್ ಮೆಟ್ರೋ ಯೋಜನೆಗೆ ರಾಜ್ಯ… ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಕೇಂದ್ರ ಸರಕಾರಕ್ಕೆ ಸಂಪೂರ್ಣ ಸಹಕಾರ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ… ಉಗ್ರರ ದಾಳಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಜತೆಗೆ ನಿಲ್ಲುತ್ತೇವೆ; ರಾಜಕೀಯ ಮಾಡುವುದಿಲ್ಲ: ಉಪ… Terror Attack | ಕಾಶ್ಮೀರ: ಭಾರತೀಯ ಸೇನಾ ಕಾರ್ಯಾಚರಣೆಗೆ ಹತರಾದ ಉಗ್ರಗಾಮಿಗಳು: ಕಣಿವೆಯಲ್ಲಿ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರಗಾಮಿಗಳ ವಿರುದ್ಧ ಸೇನಾ ಕಾರ್ಯಾಚರಣೆ: ಇಬ್ಬರು… ಕಾಶ್ಮೀರದಲ್ಲಿ ಕನ್ನಡಿಗರ ಮೇಲೆ ಉಗ್ರರ ದಾಳಿಗೆ ಶಿವಮೊಗ್ಗದ ಉದ್ಯಮಿ ಸಾವು: ಮುಖ್ಯಮಂತ್ರಿ ತುರ್ತುಸಭೆ;… Terrorist Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಭೀಕರ ನರಮೇಧಕ್ಕೆ ಸಾವಿನ… Mandya | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ ಸರಿಯಿಲ್ಲವೆನ್ನಲು ಬಿಜೆಪಿಗೆ ನೈತಿಕ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ: ಶಿವಮೊಗ್ಗದ ಉದ್ಯಮಿ ಸಹಿತ 5ಕ್ಕೂ ಹೆಚ್ಚು…

ಇತ್ತೀಚಿನ ಸುದ್ದಿ

ಗಂಗಾವತಿ: ಹಿರೇಜಂತಕಲ್ ನಲ್ಲಿ ಅಂತಾರಾಷ್ಟ್ರೀಯ ಬಾಲೆಯರ ದಿನಾಚರಣೆ

15/10/2022, 10:20

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka gmail.com

ಗಂಗಾವತಿ ತಾಲೂಕು ಹಿರೇಜಂತಕಲ್ಲು ಗ್ರಾಮದ ಕೂಡ್ಲಿಗಿ ಸ್ಫೂರ್ತಿ ಮಹಿಳಾ ಸೇವಾ ಟ್ರಸ್ಟ,ಇವರಿಂದ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯನ್ನು ಆಚರಿಸಲಾಯಿತು.

ಪ್ರಯುಕ್ತ ಗ್ರಾಮದ ಶ್ರೀ ದ್ಯಾವಮ್ಮನ ದೇವಸ್ಥಾನದಲ್ಲಿ, ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡ್ಲಿಗಿ ಸ್ಫೂರ್ತಿ ಮಹಿಳಾ ಸೇವಾ ಟ್ರಸ್ಟ್ ಅಧ್ಯಕ್ಷೆ ಡಾ.ಆರ್.ಈರಮ್ಮ ವಹಿಸಿಕೊಂಡಿದ್ದರು.

ಪುಟ್ಟ ಪುಟ್ಟ ಬಾಲಕಿಯರು ನಮ್ಮ ದೇಶದ ನಮ್ಮ ಕರ್ನಾಟಕದ ಕ್ರಾಂತಿಕಾರಿ ಹೋರಾಟಗಾರರ ಹಾಗೂ ಗಣ್ಯಮಾನ್ಯರ ಮತ್ತು ಸಮಾಜ ಸುಧಾರಕರ ವೇಷದಲ್ಲಿ ಕಾಣಿಸಿಕೊಂಡು. ಕಾರ್ಯಕ್ರಮನ್ನು ಪುಟ್ಟ ಹೆಣ್ಣು ಮಕ್ಕಳಾದ ಸಾನ್ವಿ, ಆದ್ಯ, ಸನ್ನಿಧಿ, ಸಿಂಚನಾ,ಶಿವಾನಿ, ಪ್ರಿಯದರ್ಶಿನಿ, ಯಣ್ ಆದಿತ್ಯ ಮುಂತಾದ ಬಾಲಕಿಯರು ಕೇಕ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಈರಮ್ಮ ಮಾತನಾಡಿ, ಹೆಣ್ಣು ದೇಶದ ಕಣ್ಣು ಈ ದೇಶದ ಆಸ್ತಿಯಾಗಿದ್ದರು. ಪ್ರತಿಯೊಬ್ಬರೂ ಹೆಣ್ಣು ಮಕ್ಕಳನ್ನು ಗೌರವಿಸಿ, ಹೆಣ್ಣು ಮಕ್ಕಳಿಗೆ ಉತ್ತಮ
ಶಿಕ್ಷಣ ನೀಡಬೇಕಿದೆ. ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆಯಿಲ್ಲ, ಎಲ್ಲಾ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಬೆಳೆಯಬೇಕು ಬೆಳೆಸಬೇಕು ಎಂದು ಈರಮ್ಮ ಕೋರಿದರು.

ಈ ಮೂಲಕ ಅವರು ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು,ಹಾಗೆ ಪುಟ್ಟ ಮಕ್ಕಳಿಗೆ ಪುಸ್ತಕ,ಪೆನ್ನು,ಜಾಮಿಟ್ರಿ ಬಾಕ್ಸ್ ವಿತರಿಸಿದರು. ಮಹಿಳಾ ಮಹಿಳಾ ಸಂಘದವರಾದ ಈರಮ್ಮ, ಗಂಗಾವತಿ ಮಲ್ಲಮ್ಮ, ಲಕ್ಷ್ಮಿದೇವಿ, ಸುನೀತಾ,ಈರಮ್ಮ, ರತ್ನ,ಸುನೀತಾ, ಗಂಗಮ್ಮ, ರೇಖಾ, ಶಾರದಾ, ಶಕುಂತಲಾ, ರತ್ನಮ್ಮ, ಜಯಮ್ಮ, ಮರಿಯಮ್ಮ, ತಾಯಮ್ಮ, ಗೌರಮ್ಮ, ಉಮಾದೇವಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. ಗಂಗಾವತಿ ಈರಮ್ಮ ಸ್ವಾಗತಿಸಿ ನಿರ್ವಹಿಸಿದರು,ಮಲ್ಲಮ್ಮ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು