11:52 AM Sunday28 - December 2025
ಬ್ರೇಕಿಂಗ್ ನ್ಯೂಸ್
ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ ಹೊಸ ವರ್ಷಾಚರಣೆ: ರೆಸಾರ್ಟ್, ಹೋಟೆಲ್, ಹೋಂ ಸ್ಟೇ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಡಗಿನಲ್ಲಿ ಅರಣ್ಯ ರಕ್ಷಕರಿಂದಲೇ ಮರಗಳ ಲೂಟಿ: ಲೋಡರ್ ಬಂಧನ; ನಾಲ್ವರು ಪರಾರಿ ಖಾಸಗಿ ವಾಹನಕ್ಕೆ ನಾಮಫಲಕ | ಪೊಲೀಸಪ್ಪನಿಂದೇ ಕಾನೂನು ಉಲ್ಲಂಘನೆ: ದಂಡ ಯಾವತ್ತೇ ವಿಧಾನಸಭೆ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ: ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಶ್ವಾಸ ಭಾರತ ರತ್ನ ವಾಜಪೇಯಿ ಗ್ರಂಥಾಲಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟನೆ ಜಿಲ್ಲಾ ಮತ್ತು ಕ್ಲಸ್ಟರ್ ಮಟ್ಟದಲ್ಲಿ ಡಿಜಿಟಲ್ ಆರ್ಥಿಕತೆಗೆ ಒತ್ತು: ಕೆಡಿಇಎಂ ಮತ್ತು ಎಫ್‌ಕೆಸಿಸಿಐ… ಪ್ರೀತಿಯ ಸಂಸ್ಕೃತಿ ಬೆಳೆಸಿ: ರೊಸಾರಿಯೋ ಕೆಥೆಡ್ರಲ್‌ನಲ್ಲಿ ಬಿಷಪ್ ಡಾ. ಸಲ್ಡಾನರಿಂದ ಕ್ರಿಸ್ಮಸ್ ಸಂದೇಶ ಕಲಬುರ್ಗಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ | ಮುಂದಿನ ತಿಂಗಳು ಉನ್ನತ ಮಟ್ಟದ ಸಭೆ:…

ಇತ್ತೀಚಿನ ಸುದ್ದಿ

ಮಾಜಿ ಯೋಧನಿಗೆ ಕೊಟ್ಟ ಜಾಗದಲ್ಲಿ ಮೋಸ; ಸೈನಿಕ ಭವನದ ಕೊರತೆ, ಸೌಲಭ್ಯ ವಂಚನೆ: ಮಾಜಿ ಸೈನಿಕರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷರ ಅಳಲು

06/07/2024, 17:22

ಶಿವು ರಾಠೋಡ ಹುಣಸಗಿ ಯಾದಗಿರಿ

info.reporterkarnataka@gmail.com

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಸೈನಿಕರಿಗೆ ಸಿಗಬೇಕಾದ ಸೌಲಭ್ಯಗಳು ದೊರಕದೇ ಇರುವುದು ಮತ್ತು ದೇಶಕ್ಕಾಗಿ ಒಬ್ಬ ಯೋಧ ಹುತಾತ್ಮನಾದಾಗ ಪಾರ್ಥಿವ ಶರೀರ ಬಂದಾಗ ಅಂತಿಮ ನಮನ ಸಲ್ಲಿಸಲು ಒಂದು ಸ್ಥಳವೂ ಇಲ್ಲದಿರುವುದು. ಹಾಗೆ ಒಂದು ಭವನವು ಇಲ್ಲದಂತಾಗಿದೆ ಇದೆಂಥ ವಿಪರ್ಯಾಸ..
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷರು ಲಿಂಗನಗೌಡ ಎಸ್ ಪಾಟೀಲ್ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಳಲು ವ್ಯಕ್ತಪಡಿಸಿದರು.
ಮಾಜಿ ಸೈನಿಕರು 27- 28 ವರ್ಷ ದುಡಿದು ಬಂದ ಹಣದಲ್ಲಿ ಒಂದು ಜಮೀನು ಖರೀದಿಸಿದರು. ಸರ್ವೇ ನಂಬರ್ 216/ ಪೋವ 1/1ನಲ್ಲಿ 3 ಎಕರೆ N.A. ನಿವೇಶನದ ಮಾಲೀಕರಾದ ವೆಂಕಟೇಶ್ ಸುರೇಂದ್ರ ರಾವ್ ದೇಶಪಾಂಡೆ, ಉಪ್ಪಣ್ಣ ಸುರೇಂದ್ರ ರಾವ್ ದೇಶಪಾಂಡೆ, ಶಾಮ್ ಸುಂದರ್ ಸುರೇಂದ್ರ ರಾವ್ ದೇಶಪಾಂಡೆ ಕುಟುಂಬಸ್ಥರು. ನಿಂಗನಗೌಡ ಎಸ್ ಪಾಟೀಲ್ ಅವರು. ತಮ್ಮ ತಾಯಿ ಹಾಗೂ ಅಕ್ಕನ ಹೆಸರಿನಲ್ಲಿ ಖರೀದಿಸಿದ ಜಾಗವನ್ನು ಮಾಲೀಕರು ತಮಗೆ ನೀಡಿರುವ ಪತ್ರದಲ್ಲಿ ಕೊಟ್ಟಿರುವ ಜಾಗದಲ್ಲಿ ಅಳತೆಯಲ್ಲೂ ಮೋಸ ಮಾಡುತ್ತಿದ್ದಾರೆ. ಅದನ್ನು ಜಿಲ್ಲಾಧಿಕಾರಿಗಳಿಗೆ, ಹುಣಸಗಿ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೂ ತಿಳಿಸಿದರೂ ಅದರ ಬಗ್ಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳಲಿ ಇರುವುದು ಖಂಡನೆ ಅಪರಾಧ ಎಂದು ತಮ್ಮ ನೋವನ್ನು ತೋರಿಕೊಂಡರು.
ಯಾದಗಿರಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಸಹ ನಿರ್ದೇಶಕರು ಕೂಡ ಸೈನಿಕರ ಕುಟುಂಬಕ್ಕೆ ಅನ್ಯಾಯವಾಗುತ್ತಿದೆ ಎಂದು ಗಮನ ಹರಿಸದೇ ಇರುವುದು ನೋವಿನ ಸಂಗತಿ ಎಂದು ಅವರು ನುಡಿದರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷರು ಲಿಂಗನಗೌಡ ಎಸ್. ಪಾಟೀಲ್,
ಯಾದಗಿರಿ ಪ್ರಧಾನ ಕಾರ್ಯದರ್ಶಿ ಮಡಿವಾಳಪ್ಪ ಎಸ್ ಕಟ್ಟಿಮನಿ ಹುಣಸಗಿ, ಅಧ್ಯಕ್ಷರು ವೀರೇಶ್ ಪ್ರಭುಗೌಡ ಗೋಳೇಬಾಳ್, ಸುರಪುರ ತಾಲೂಕ ಅಧ್ಯಕ್ಷ ಭೀಮ ನಾಯಕ್ ಲಕ್ಷ್ಮಿಪುರ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು