ಇತ್ತೀಚಿನ ಸುದ್ದಿ
Ex chief Minister | ಬೆಂಗಳೂರನ್ನು ನೀರಲ್ಲಿ ಮುಳುಗಿಸಿದ ಸರ್ಕಾರ: ಬಸವರಾಜ ಬೊಮ್ಮಾಯಿ ಟೀಕೆ
20/05/2025, 09:40

ಬೆಂಗಳೂರು(reporterjarnataka.com): ಬೆಂಗಳೂರನ್ಮು ನೀರಲ್ಲಿ ಮುಳುಗಿಸಿ ಮೊದಲಿದ್ದ ಬೆಂಗಳೂರಿನ ಹೆಸರನ್ನು ಪ್ರವಾಹದಲ್ಲಿ ಅಳುಕಿಸಿ ಹಾಕಿದ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು, ಬೆಂಗಳೂರಿಂದ ಅತ್ಯಧಿಕ ತೆರಿಗೆ ಪಡೆಯುವ ಸರ್ಕಾರ ಕಳೆದ ಎರಡು ವರ್ಷದಿಂದ ಮಳೆ ಪರಿಹಾರಕ್ಕಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ನೀಡಿದ್ದ 2000 ಕೋಟಿ ಹಣ ಬಿಡುಗಡೆ ಮಾಡದೇ, ಸಿಲಿಕಾನ ಸಿಟಿ, ಶ್ರಿಮಂತ ಸಿಟಿ ಬೆಂಗಳೂರನ್ನು ಬಡ ಸಿಟಿ ಬೆಂಗಳೂರನ್ನಾಗಿ ಮಾಡಿದೆ ಇದು ಅತ್ಯಂತ ಖಂಡನೀಯ ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.