ಇತ್ತೀಚಿನ ಸುದ್ದಿ
ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು ದುರಂತ
22/08/2025, 10:56

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿರಾಜಪೇಟೆ ತಾಲ್ಲೂಕಿನ ಕಣ್ಣಂಗಾಲ ಗ್ರಾಮದಲ್ಲಿ ಸಂಭವಿಸಿದ ಕಾರು ಮತ್ತು ಆಟೋ ನಡುವಿನ ಅಪಘಾತದಲ್ಲಿ ಆಟೋ ಚಾಲಕ ಸಾವನಪ್ಪಿರುವ ಘಟನೆ ನಡೆದಿದೆ.
ಚೆoಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಣಗೇರಿ ಗ್ರಾಮದ ಬಾಳಕೇರಿ ಪೈಸಾರಿ ನಿವಾಸಿ ಪೊಣಿ ಎಂಬುವವರ ಪುತ್ರ ಹೆಚ್. ಬಿ ವಿನೋದ್ ಮೃತ ದುರ್ದೈವಿಯಾಗಿದ್ದಾನೆ. ಮೃತ ವಿನೋದ್ ಕೂಲಿ ಕೆಲಸ ಮಾಡಿಕೊಂಡಿದ್ದು, ಈ ಹಿಂದೆ ಆಟೋ ಓಡಿಸಿಕೊಂಡಿದ್ದರು. ವಿನೋದ್ ಸ್ನೇಹಿತ ದೇವಯ್ಯ ಅನಾರೋಗ್ಯದಿಂದ ಬಳುತ್ತಿದ್ದರು, ದೇವಯ್ಯ ಓದುಸುತ್ತಿದ್ದ ಆಟೋ ಓಡಿಸಲಾಗದೆ ಒಂಟಿ ಅಂಗಡಿ ಗ್ರಾಮದಲ್ಲಿ ನಿಲ್ಲಿಸಲಾಗಿತ್ತು, ಈ ಹಿಂದೆ ಆಟೋ ಓಡಿಸಿಕೊಂಡಿದ್ದ ಕಾರಣ ದೇವಯ್ಯ ತನ್ನ ಸ್ನೇಹಿತನಿಗೆ ತನ್ನ ಆಟೋವನ್ನು ಮನೆಗೆ ತರಲು ತಿಳಿಸಿದ್ದರು, ಅದರಂತೆ ಒಂಟಿಯoಗಡಿಯಿಂದ ವಿನೋದ್ ಆಟೋ ತರುತ್ತಿದ್ದ ಸಂದರ್ಭ ಕಣ್ಣಂಗಾಲ -ಚoಬೆಬೆಳ್ಳೂರು ರಸ್ತೆಯಲ್ಲಿ ಬರುತ್ತಿದ್ದ ವೇಳೆ ಎದುರಿಗೆ ಬರುತ್ತಿದ್ದ ಸ್ವಿಫ್ಟ್ ಕಾರು ಆಟೋಕ್ಕೆ ಅಪ್ಪಳಿಸಿದ್ದು ತಲೆಗೆ ಗಂಭೀರ ಗಾಯಗೊಂಡ ವಿನೋದ್ ಮೃತಪಟ್ಟಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕ ಕಟ್ಟೆಮಾಡು ಗ್ರಾಮದ ನಿವಾಸಿ ತಮನ್ ಪೊನ್ನಣ್ಣ ವಿರುದ್ಧ ಪ್ರಕರಣ ದಾಖಲು ಮಾಡಿ ಮಾಡಲಾಗಿದೆ.