ಇತ್ತೀಚಿನ ಸುದ್ದಿ
DOUBLE PIXEL | ಛಾಯಾಗ್ರಾಹಕ ದಯಾನಂದ ಕುಕ್ಕಾಜೆ ಸೆರೆ ಹಿಡಿದ ಫೋಟೋಗೆ ರಾಷ್ಟ್ರ ಪ್ರಶಸ್ತಿ
18/02/2025, 19:14

ಮಂಗಳೂರು(reporterkarnataka.com): “ಡಬಲ್ ಪಿಕ್ಸೆಲ್ ನ್ಯಾಷನಲ್ ಸಲೂನ್ 2025” (DOUBLE PIXEL NATIONAL SALON 2025) ಆಯೋಜಿಸಿದ್ದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಛಾಯಾಗ್ರಾಹಕ ದಯಾನಂದ ಕುಕ್ಕಾಜೆ ಅವರು ಸೆರೆ ಹಿಡಿದ ಫೋಟೋಗೆ ರಾಷ್ಟ್ರ ಪ್ರಶಸ್ತಿ ದೊರೆತಿದೆ.
ಫೊಟೋಜರ್ನಲಿಸಂ ವಿಭಾಗದಲ್ಲಿ ಹೆಲ್ಪ್ ಲೆಸ್ ಹ್ಯಾಂಡ್ ಶೀರ್ಷಿಕೆಯಡಿ ಸೆರೆ ಹಿಡಿದ ಛಾಯಾಗ್ರಹಣಕ್ಕೆ ಪಿ ಎಂ ಪಿ ಸಿಲ್ವರ್ ಅವಾರ್ಡ್ ಹಾಗೂ ಓಪನ್ ಮೊನೋಕ್ರೋಮ್ ವಿಭಾಗದಲ್ಲಿ ಬ್ರೈಟ್ ಪ್ಯೂಚರ್ ಶೀರ್ಷಿಕೆಯಡಿ ಸೆರೆಹಿಡಿದ ಛಾಯಾಗ್ರಹಣವು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ.
ದಯಾನಂದ ಕುಕ್ಕಾಜೆಯವರು ಮಂಗಳೂರಿನ ಪ್ರಸಿದ್ಧ ಹಿರಿಯ ಛಾಯಾಗ್ರಾಹಕರಾಗಿದ್ದು, ಮೊಡಲಿಂಗ್ ಫೋಟೋ ಗ್ರಾಫಿ, ವೆಡ್ಡಿಂಗ್ ಕ್ಯಾಂಡಿಡ್ ಫೋಟೋಗ್ರಾಫಿ,ನೇಚರ್ ಫೋಟೋಗ್ರಾಫಿ. ಫೋಟೋ ಪ್ರಿಯಾರಿಗೆ ಅಚ್ಚುಮೆಚ್ಚು. ಮಾತು ಕಡಿಮೆಯ ಲೆನ್ಸ್ ಮ್ಯಾನ್ ಎಂದೇ ಪ್ರಖ್ಯಾತಿಗಳಿಸಿದ್ದಾರೆ.
ಈ ಹಿಂದೆಯೂ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.