ಇತ್ತೀಚಿನ ಸುದ್ದಿ
DK News | ಪುತ್ತೂರಿನಲ್ಲಿ ಭಾರಿ ಮಳೆಗೆ ಬನ್ನೂರು ಬಳಿಯ ತಡೆಗೋಡೆ ಕುಸಿತ
29/03/2026, 18:50
ಪುತ್ತೂರು(reporterkarnataka.com): ದಕ್ಷಿಣ ಕನ್ನಡ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ನೆನ್ನೆ ದಿನ ಸುರಿದ ಮಳೆಗೆ ಪುತ್ತೂರು ತಾಲ್ಲೂಕಿನ ಬನ್ನೂರು ಬಳಿಯ ಬಲಮುರಿಯಲ್ಲಿನ ಹವ್ಯಕ ಭವನದ ತಡೆಗೋಡೆಗೆ ಹಾನಿ ಉಂಟಾಗಿದೆ.
ಭವನದ ಒಂದು ಭಾಗದಲ್ಲಿ ನಿರ್ಮಾಣ ಮಾಡಲಾಗಿದ್ದ ತಡೆಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಸದ್ಯ ಗೋಡೆಯ ಕಲ್ಲುಗಳನ್ನು ಜೆಸಿಬಿ ಮೂಲಕ ತೆರವು ಗೊಳಿಸಲಾಗುತ್ತಿದೆ.












