9:14 PM Tuesday22 - April 2025
ಬ್ರೇಕಿಂಗ್ ನ್ಯೂಸ್
Terrorist Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಭೀಕರ ನರಮೇಧಕ್ಕೆ ಸಾವಿನ… Mandya | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ ಸರಿಯಿಲ್ಲವೆನ್ನಲು ಬಿಜೆಪಿಗೆ ನೈತಿಕ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ: ಶಿವಮೊಗ್ಗದ ಉದ್ಯಮಿ ಸಹಿತ 5ಕ್ಕೂ ಹೆಚ್ಚು… Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್…

ಇತ್ತೀಚಿನ ಸುದ್ದಿ

ಡಿಗ್ಗಿ ಸಂಗಮೇಶ್ವರನಿಗೆ 101 ಸಿಡಿಗಾಯಿ ಒಡೆದು ಹರಕೆ ತೀರಿಸಿದ ಸಿಂದಗಿ ನೂತನ ಶಾಸಕ ಭೂಸನೂರ

06/11/2021, 11:10

ವಿಜಯಪುರ(reporterkarnataka.com);
ರಾಜ್ಯದಲ್ಲೇ ತೀವ್ರ ಕುತೂಹಲ ಕೆರಳಿಸಿದ್ದ ಸಿಂದಗಿ ವಿಧಾನ ಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಜಯಗಳಿಸಿದ ಹಿನ್ನೆಲೆಯಲ್ಲಿ ಶಹಾಪೂರ ತಾಲೂಕಿನ ಡಿಗ್ಗಿ ಸಂಗಮೇಶ್ವರ ದೇವಾಲಯದ ೧೦೧ ಮೆಟ್ಟಲಗಳಿಗೆ ಸಿಡಿಗಾಯಿ ಒಡೆದು ಹರಕೆ ತೀರಿಸಿದರು.

ಡಂಬಳ ಗ್ರಾಮದ ಬಿಜೆಪಿ ಮುಖಂಡ ಸಂತೋಷಗೌಡ ಪಾಟೀಲ ಡಂಬಳ ಅವರು ಹರಕೆ ಹೊತ್ತಿಕೊಂಡಿರುವ ನಿಮಿತ್ತವಾಗಿ ಡಿಗ್ಗಿ ಸಂಗಮೇಶ್ವರಗೆ ಹರಕೆ ನೀಡಲಾಯಿತು.

ಸಂಗಮೇಶ್ವರ ದೇವಾಲಯಕ್ಕೆ ಆಗಮಿಸಿದ ನೂತನ ಶಾಸಕರು ಡಿಗ್ಗಿ ಸಂಗಮೇಶ್ವರ ಗುಡ್ಡದ ಮೇಲೆ ಇರುವದರಿಂದ ೧೦೧ ಮೆಟ್ಟಲಿಗೆ ಸಿಡಿಗಾಯಿ ಒಡೆದು ಸಂಗಮೇಶ್ವರ ದೇವರಿಗೆ ಭಕ್ತಿ ಭಾವದಿಂದ ಹೂವು ಕಾಯಿ

ಕರ್ಪುರ ಮಹಾ ಪೂಜಾ ನೆರವೇರಿಸಿದರು.ಬಿಜೆಪಿ ಕಾರ್ಯಕರ್ತರು ಸಿಡಿಗಾಯಿ ಒಡೆದು ಸಂಭ್ರಮ ಪಟ್ಟರು. ಡಿಗ್ಗಿ ಸಂಗಮೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ವೇ.ದೇವಯ್ಯ ಹಿರೇಮಠ ಅವರು ಶಾಸಕ ರಮೇಶ ಭೂಸನೂರ ಅವರನ್ನು ಸನ್ಮಾನಿಸಿದರು.

ಬಿಜೆಪಿ ಮುಖಂಡ ಸಂತೋಷಗೌಡ ಪಾಟೀಲ. ಸಿದ್ದು ಬುಳ್ಳಾ. ಪ್ರಶಾಂತಗೌಡ ಬಿರಾದಾರ ಬಂದಾಳ ರವಿ ನಾಯ್ಕೋಡಿ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು