ಇತ್ತೀಚಿನ ಸುದ್ದಿ
ಡಿಗ್ಗಿ ಸಂಗಮೇಶ್ವರನಿಗೆ 101 ಸಿಡಿಗಾಯಿ ಒಡೆದು ಹರಕೆ ತೀರಿಸಿದ ಸಿಂದಗಿ ನೂತನ ಶಾಸಕ ಭೂಸನೂರ
06/11/2021, 11:10

ವಿಜಯಪುರ(reporterkarnataka.com);
ರಾಜ್ಯದಲ್ಲೇ ತೀವ್ರ ಕುತೂಹಲ ಕೆರಳಿಸಿದ್ದ ಸಿಂದಗಿ ವಿಧಾನ ಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಜಯಗಳಿಸಿದ ಹಿನ್ನೆಲೆಯಲ್ಲಿ ಶಹಾಪೂರ ತಾಲೂಕಿನ ಡಿಗ್ಗಿ ಸಂಗಮೇಶ್ವರ ದೇವಾಲಯದ ೧೦೧ ಮೆಟ್ಟಲಗಳಿಗೆ ಸಿಡಿಗಾಯಿ ಒಡೆದು ಹರಕೆ ತೀರಿಸಿದರು.
ಡಂಬಳ ಗ್ರಾಮದ ಬಿಜೆಪಿ ಮುಖಂಡ ಸಂತೋಷಗೌಡ ಪಾಟೀಲ ಡಂಬಳ ಅವರು ಹರಕೆ ಹೊತ್ತಿಕೊಂಡಿರುವ ನಿಮಿತ್ತವಾಗಿ ಡಿಗ್ಗಿ ಸಂಗಮೇಶ್ವರಗೆ ಹರಕೆ ನೀಡಲಾಯಿತು.
ಸಂಗಮೇಶ್ವರ ದೇವಾಲಯಕ್ಕೆ ಆಗಮಿಸಿದ ನೂತನ ಶಾಸಕರು ಡಿಗ್ಗಿ ಸಂಗಮೇಶ್ವರ ಗುಡ್ಡದ ಮೇಲೆ ಇರುವದರಿಂದ ೧೦೧ ಮೆಟ್ಟಲಿಗೆ ಸಿಡಿಗಾಯಿ ಒಡೆದು ಸಂಗಮೇಶ್ವರ ದೇವರಿಗೆ ಭಕ್ತಿ ಭಾವದಿಂದ ಹೂವು ಕಾಯಿ
ಕರ್ಪುರ ಮಹಾ ಪೂಜಾ ನೆರವೇರಿಸಿದರು.ಬಿಜೆಪಿ ಕಾರ್ಯಕರ್ತರು ಸಿಡಿಗಾಯಿ ಒಡೆದು ಸಂಭ್ರಮ ಪಟ್ಟರು. ಡಿಗ್ಗಿ ಸಂಗಮೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ವೇ.ದೇವಯ್ಯ ಹಿರೇಮಠ ಅವರು ಶಾಸಕ ರಮೇಶ ಭೂಸನೂರ ಅವರನ್ನು ಸನ್ಮಾನಿಸಿದರು.
ಬಿಜೆಪಿ ಮುಖಂಡ ಸಂತೋಷಗೌಡ ಪಾಟೀಲ. ಸಿದ್ದು ಬುಳ್ಳಾ. ಪ್ರಶಾಂತಗೌಡ ಬಿರಾದಾರ ಬಂದಾಳ ರವಿ ನಾಯ್ಕೋಡಿ ಮುಂತಾದವರು ಉಪಸ್ಥಿತರಿದ್ದರು.