9:40 AM Monday12 - January 2026
ಬ್ರೇಕಿಂಗ್ ನ್ಯೂಸ್
ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್: ಎಎಪಿ ಯುವ ಘಟಕದಿಂದ ಸಹಿ ಸಂಗ್ರಹಣ…

ಇತ್ತೀಚಿನ ಸುದ್ದಿ

ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಬಸನಗೌಡ ಬಾದರ್ಲಿ ಭೇಟಿ: ಸಹಾಯ ಹಸ್ತ ವಿತರಣೆ

02/07/2021, 07:46

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ಸಹಾಯ ಹಸ್ತ ಚಾಚಲು ಮುಂದೆ ಬಂದಿದ್ದಾರೆ.

ತಾಲೂಕಿನಲ್ಲಿ ಕೊರೊನಾದಿಂದ ಸಾವು-ನೋವು ಹಾಗೂ ಉದ್ಯೋಗ ಕಳೆದುಕೊಂಡವರ, ಆರ್ಥಿಕವಾಗಿ ಸಂಕಷ್ಟಕೀಡಾದ ರೈತರು, ಕಾರ್ಮಿಕರ, ಬಡವರ, ಕಷ್ಟಗಳನ್ನು ಆಲಿಸಿದ ಬಾದರ್ಲಿ ಅವರು ಬಾದರ್ಲಿ ಜಿಪಂ ವ್ಯಾಪ್ತಿಯಲ್ಲಿ ಮೃತರಾದ ಬಾದರ್ಲಿಯ ದೂಗಪ್ಪ ನಾಯಕ, ಅಲಬನೂರಿನ ಕೆ. ಬಸವರಾಜಪ್ಪ, ಹರೇಟನೂರನ ದೇವರಾಜ ನಾಯಕ, ಗಿಣಿವಾರದ ವೆಂಕನಗೌಡ ಕೋಟೆಗೋಡೆ ಮತ್ತು ಬಿ.ವೆಂಕಟೇಶ ಅವರ ಕುಂಟುಬಕ್ಕೆ ಭೇಟಿ ನೀಡಿ ಮೃತರ ಕುಂಟುಂಬಸ್ಥರಿಗೆ ಆತ್ಮಸ್ಥೆರ್ಯ ತುಂಬಿ ತಲಾ 10 ಸಾವಿರ ರೂ.ಗಳ ಧನ ಸಹಾಯ ನೀಡಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಅವರು,

ಸರಕಾರ ಮೃತರ ಸಂಖ್ಯೆಯಲ್ಲಿ ಸುಳ್ಳು ವರದಿ ನೀಡುತ್ತಿದ್ದು, ಸರಿಯಾದ ವರದಿಯನ್ನು ತರಿಸಿಕೊಂಡು ಮೃತರಿಗೆ ತಲಾ 5 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. 

ಇಂತಹ ಕಾರ್ಯಗಳು ಮಾಡುವುದರಿಂದ ಅವರಿಗೆ ಅವರ ಕುಟುಂಬ ಶಾಂತಿ ನಮ್ಮದೇ ಸಿಗುತ್ತದೆಂದು ಸೋಮನಾಥ ಶಿವಾಚಾರ್ಯರು ಬಾಳೆಹೊನ್ನೂರು ಪೀಠ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ವೆಂಕಟೇಶ ರಾಗಲಪರ್ವಿ, ಶಿವಕುಮಾರ ಜವಳಿ, ಫಕೀರಯ್ಯ ರಾಗಲಪರ್ವಿ ದೇವಪ್ಪ ಅಲಬನೂರು ಆರ್. ಪಂಪಾಪತಿ, ಮುನ್ನಾ, ಹಾಗೂ ಗ್ರಾಮ ಪಂ.ಸ. ಹುಚ್ಚಪ್ಪ ಹರೇಟನೂರು ಚನ್ನಪ್ಪ ಅಲಬನೂರು ಯಂಕನಗೌಡ ಮಾಜಿ ತಾ.ಪಂ.ಸ ಮಲ್ಲರಡ್ಡಿ, ಗ್ರಾ.ಪಂ.ಸ. ಮಾಹಾದೇವ, ಪಕೀರಪ್ಪ, ನಾಗಪ್ಪ ಮಾ.ಗ್ರಾ.ಪಂ.ಸ. ರಾಮನಗೌಡ, ಸಿದ್ದನಗೌಡ, ಬಸವರಾಜ ನಾಯಕ, ಬಸವರಾಜ, ವೆಂಕಟೇಶ ಯದ್ದಲದೊಡ್ಡಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಊರಿನ ಹಿರಿಯರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು