ಇತ್ತೀಚಿನ ಸುದ್ದಿ
ಕೊಡಗಿನಲ್ಲಿ ಮುಂದುವರಿದ ಕಾಡಾನೆ-ಮಾನವ ಸಂಘರ್ಷ: ಪೈರು ಮಾಡಲು ಇಟ್ಟಿದ್ದ ಭತ್ತ ನಾಶ
29/06/2025, 16:22

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿರಾಜಪೇಟೆ ತಾಲ್ಲೂಕು ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳತ್ಮಾಡು ಗ್ರಾಮದಲ್ಲಿ ಕಳೆದ ರಾತ್ರಿ ಕಾಡಾನೆಗಳು ದಾoಧಲೆ ನಡೆಸಿ,ಕೊಲ್ಲೀರ ಉಮೇಶ್ ಅವರಿಗೆ ಸೇರಿದ ಗದ್ದೆ ಬಳಿ ಇರಿಸಿದ್ದ ಭತ್ತವನ್ನು ಆನೆಗಳು ತಿಂದು ಹಾಕಿದ ಘಟನೆ ನಡೆದಿದೆ.
ಕೊಂಚ ಮಳೆ ಬಿಡುವು ನೀಡಿರುವ ಹಿನ್ನಲೆಯಲ್ಲಿ ಭತ್ತ ಕೃಷಿ ಆರಂಭಿಸಬೇಕಿದ್ದ ಉಮೇಶ್ ಅವರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು,ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಕ್ರಮಕೈಗೊಳ್ಳುವಂತೆ ಒತ್ತಾಸಿದ್ದಾರೆ.