ಇತ್ತೀಚಿನ ಸುದ್ದಿ
College Student Missing | ದಿಗಂತ್ ನಾಪತ್ತೆ ಪ್ರಕರಣ: ಎಬಿವಿಪಿಯಿಂದ ಮಿನಿ ವಿಧಾನ ಸೌಧ ಎದುರು ಪ್ರತಿಭಟನೆ
07/03/2025, 19:58

ಮಂಗಳೂರು(reporterkarnataka.com):ಕಾಲೇಜು ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಿಂದ
ನಗರದ ಮಿನಿ ವಿಧಾನ ಸೌಧ ಮುಂಭಾಗ ಪ್ರತಿಭಟನೆ ನಡೆಯಿತು.
ದಿಗಂತ್ ಪ್ರಕರಣದಲ್ಲಿ ರಾಜ್ಯ ಸರಕಾರ ಕಣ್ಣುಮುಚ್ಚಿ ಕೂತಿದೆ. ರಾಜ್ಯ ಸರಕಾರಕ್ಕೆ ಹಾಗೂ ಗೃಹ ಇಲಾಖೆಗೆ ಧಿಕ್ಕಾರ ಮೊಳಗಿದವು. ದಿಗಂತ್ ನನ್ನು ಹುಡುಕಿ ಕೊಡಿ ಎಂದು ವಿದ್ಯಾರ್ಥಿಗಳು ರಾಜ್ಯ ಸರಕಾರಕ್ಕೆ ಪ್ರತಿಭಟನೆ ಮೂಲಕ ಒತ್ತಯಿಸಿದರು.
ಸ್ಥಳಕ್ಕೆ ಆಗಮಿಸಿದ ಸ್ಪೆಷಲ್ ಬ್ರಾಂಚ್ ಅಧಿಕಾರಿಗಳು ತನಿಖೆಯನ್ನು ಇನ್ನಷ್ಟು ಚುರುಕು ಗೊಳಿಸುತ್ತವೆ. ಇವತ್ತು ಎಸ್ ಪಿ ಘಟನಾ ಸ್ಥಳಕ್ಕೆ ತೆರಳಿದ್ದಾರೆ ಎಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.
12 ತಾರೀಕಿನೊಳಗೆ ಪತ್ತೆ ಹಚ್ಚ ದಿದ್ದಲಿ ಮುಂದಿನ ಹೋರಾಟ ವಿಭಾಗೀಯ ಮಟ್ಟದಲ್ಲಿ ನಡೆಸುತ್ತೇನೆ. ಸ್ಪೆಷಲ್ ಬ್ರಾಂಚ್ ಆಫೀಸರ್ ಬರೋದು ಬೇಡ. ಎಸ್ ಪಿ ಕಚೇರಿ ತೆರಳುತ್ತೇವೆ. ಇಷ್ಟು ಶಾಂತಿಯುತವಾಗಿ ಇರಲಿಕಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.