ಇತ್ತೀಚಿನ ಸುದ್ದಿ
Chikkamagaluru | ರಸ್ತೆ ದುರಾವಸ್ಥೆ: ಪ್ರಧಾನಿ ಮೋದಿಗೆ ಕೊಪ್ಪದ ಬಾಲಕಿ ಸಿಂಧೂರ ಪತ್ರ
18/07/2025, 10:27

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ
ಕೊಪ್ಪ ತಾಲೂಕಿನ ಮಲಗಾರು ಗ್ರಾಮದ 8ನೇ ತರಗತಿಯ
ಪುಟ್ಟ ಬಾಲಕಿಯೊಬ್ಬಳು ತನ್ನೂರಿನಿಂದ ಶಾಲೆಗೆ ಸಾಗುವ ರಸ್ತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾಳೆ.
ಮಳೆಗಾಲದಲ್ಲಿ ಕೆಸರುಮಯವಾಗುವ ರಸ್ತೆಯಲ್ಲಿ ಶಾಲೆಗೆ ಹೋಗುವುದು ಗುರಿ ಸಾಧನೆಯಂತೆ ಆಗುತ್ತಿದೆ. ಮನೆಯಿಂದ ಶಾಲೆಗೆ ದಿನವೂ 3-4 ಕಿ.ಮೀ. ನಡೆಯುವ ಸಿಂಧೂರ ಹೆಸರಿನ ಬಾಲಕಿ, ಗ್ರಾಮೀಣ ರಸ್ತೆಯ ದುಸ್ಥಿತಿಯಿಂದ ಬೇಸತ್ತಿದ್ದಾಳೆ. ತನ್ನ ಊರಿನ ಮುಖ್ಯ ರಸ್ತೆಯು ತುಂಬಾ ಹಾಳಾಗಿದ್ದು, ಮಳೆ ಬಂದರೆ ಓಡಾಡುವುದೇ ದುಸ್ತರವಾಗುತ್ತದೆ ಎಂದು ಹೇಳಿರುವ ಸಿಂಧೂರ, ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಸಿಂಧೂರ ತನ್ನ ಪತ್ರದಲ್ಲಿ ಹೇಳಿರುವಂತೆ:
> “ನಮ್ಮ ಊರಿಗೆ ಒಂದು ಉತ್ತಮ ರಸ್ತೆ ಬೇಕಾಗಿದೆ. ಶಾಲೆಗೆ ಹೋಗುವ ಬದಿಯಲ್ಲಿ ಬೇರೆ ದಾರಿಯೇ ಇಲ್ಲ. ವಾರದಲ್ಲಿ 3-4 ದಿನ ಶಾಲೆಗೆ ಹೋಗಲು ಸಾಧ್ಯವಿಲ್ಲ. ಮಕ್ಕಳು, ಮಹಿಳೆಯರು ಎಲ್ಲರೂ ಸಮಸ್ಯೆ ಅನುಭವಿಸುತ್ತಿದ್ದಾರೆ. ದಯವಿಟ್ಟು ನಮ್ಮ ರಸ್ತೆಯನ್ನು ದುರಸ್ತಿ ಮಾಡಿಸಿ.”
ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಯಲ್ಲಿ ಪತ್ರ ಬರೆದಿರುವ ಈ ಬಾಲಕಿಯ ಹೃದಯಸ್ಪರ್ಶಿ ಮನವಿ ಇದೀಗ ಗ್ರಾಮದಲ್ಲಿಯೇ ಅಲ್ಲ, ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ.
ಪ್ರಮುಖ ವಿಷಯವೆಂದರೆ, ಈ ಭಾಗದ ರಸ್ತೆ ಮಾತ್ರ ಶಾಲೆಗಷ್ಟೇ ಅಲ್ಲದೆ, ದಿನನಿತ್ಯದ ಆರೋಗ್ಯ ಸೇವೆ, ಅಗತ್ಯ ವಸ್ತುಗಳ ಸಾಗಣೆ, ಹಾಗೂ ಎಮರ್ಜೆನ್ಸಿ ಸಂದರ್ಭಗಳಿಗೂ ಪ್ರಮುಖ ದಾರಿ. ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಸ್ಪಂದಿಸುವ ಸಮಯ ಇದಾಗಿದೆ ಎಂಬ ಅಭಿಪ್ರಾಯ ಈಗ ಸಾರ್ವಜನಿಕದಲ್ಲಿ ಮೂಡುತ್ತಿದೆ.