ಇತ್ತೀಚಿನ ಸುದ್ದಿ
Chikkamagaluru | ಮೂಡಿಗೆರೆ: ಭಾರೀ ಮಳೆಗೆ ಭೂಕುಸಿತ; 5 ಕುಟುಂಬಗಳ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ
17/06/2025, 22:47

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಲಿಗೆ ಗ್ರಾಮದಲ್ಲಿ ಭಾರಿ ಮಳೆಗೆ ಭೂಕುಸಿತವಾಗಿದ್ದು. ತಾಲೂಕು ಆಡಳಿತ 5 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಬಲಿಗೆ ಗ್ರಾಮದ ಶಾಲೆ, ಅಂಗನವಾಡಿ ಹಾಗೂ ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರವನ್ನು ತೆರೆದಿದ್ದು. ಅಗತ್ಯ ವಸ್ತುಗಳನ್ನು ತಾಲೂಕು ಆಡಳಿತವೇ ನೀಡಿದೆ. ಬಲಿಗೆ ಗ್ರಾಮದ ಭಾಸ್ಕರ, ಲಕ್ಷ್ಮಿ, ವೆಂಕಯ್ಯ, ಮುಕುಂದ, ಶೇಖರ ಎಂಬುವವರ ಕುಟುಂಬಗಳನ್ನು ಬಲಿಗೆ ಶಾಲೆಯಲ್ಲಿ ತೆರೆದ ತಾತ್ಕಾಲಿಕ ಕಾಳಜಿ ಕೇಂದ್ರದಲ್ಲಿ ಇರಿಸಲಾಗಿದೆ. 2019ರಲ್ಲಿ ಈ ಭಾಗದಲ್ಲಿ ಬಾರಿ ಪ್ರಮಾಣದ ಭೂಕುಸಿತವಾಗಿದ್ದು ಹಲವಾರು ಮಂದಿ ಮನೆ ಹಾಗೂ ಆಸ್ತಿಪಾಸ್ತಿ ಕಳೆದುಕೊಂಡಿದ್ದರು.