ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಮದುವೆ ಮನೆಗೆ ನುಗ್ಗಿ ಮಂಗಳ ಮುಖಿಯರ ರಂಪಾಟ; ಹಣಕ್ಕೆ ಬೇಡಿಕೆ
11/02/2026, 20:29
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.repoeterkarnataka@gmail.com
ಮದುವೆ ಮನೆಗೆ ನುಗ್ಗಿ ಮಂಗಳ ಮುಖಿಯರು ರಂಪಾಟ ನಡೆಸಿದ ಘಟನೆ ಚಿಕ್ಕಮಗಳೂರು ನಗರದ ರಂಗಣ್ಣನ ಛತ್ರದಲ್ಲಿ ನಡೆದಿದೆ.
ಮದುವೆ ಮನೆಯವರು 500 ರೂಪಾಯಿ ಕೊಟ್ಟಾಗ 10 ಸಾವಿರ ಕೊಡಿ ಎಂದು ಗಲಾಟೆ ಮಾಡಿದ ಮಂಗಳ ಮುಖಿಯರು ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.
ವಧು-ವರರ ಮುಂದೆಯೇ ಮಂಗಳ ಮುಖಿಯರು ಹಣಕ್ಕೆ ಬೇಡಿಕೆ ಇಟ್ಟದ್ದರು.





ಕೊಟ್ಟಷ್ಟು ತೆಗೊಂಡು ಹೋಗಬೇಕು ಎಂದು ಮದುವೆ ಮನೆಯವರು ಹೇಳದರೂ ಕೇಳದೇ ಗಲಾಟೆ ಮಾಡಿದ್ದಾರೆ.
ಮಂಗಳಮುಖಿಯರು ಅವಾಚ್ಯ ಶಬ್ದಗಳಿಂದ ಬೈದು ಮದುವೆ ಮಂಟಪದಲ್ಲಿ ರಂಪಾಟ ಮಾಡಿ ಇಡೀ ಮದುವೆ ಮನೆ ಸಂಭ್ರಮವನ್ನೇ ಕೆಡಿಸಿ ಬಿಟ್ಟಿದ್ದಾರೆ. ನಿಮಗೆ ಹಣ ಕೊಡೋ ಯೋಗ್ಯತೆ ಇಲ್ವಾ ಎಂದು ನಿಂದನೆ ಮಾಡಿದ್ದಾರೆ.
ಪ್ರಶ್ನೆ ಮಾಡಿದವರನ್ನ ಹೊರಗೆ ಬಾ ನೋಡಿಕೊಳ್ತೀವಿ ಎಂದು ಮಂಗಳಮುಖಿಯರು ಆವಾಜ್ ಹಾಕಿದ್ದಾರೆ ಎಂದು ಹೇಳಲಾಗಿದೆ.












