ಇತ್ತೀಚಿನ ಸುದ್ದಿ
Chikkamagaluru | ಕಳಸ: ಭದ್ರಾ ನದಿಯಲ್ಲಿ ಸತತ 23 ತಾಸುಗಳ ಶೋಧ ಬಳಿಕ ಜೀಪ್ ಪತ್ತೆ; ಚಾಲಕನ ಕುರುಹು ಅಲಭ್ಯ
25/07/2025, 20:02

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಳಸ ತಾಲೂಕಿನ ಕೊಳಮಾಗೆಯಲ್ಲಿ ಜೀಪೊಂದು ಭದ್ರಾ ನದಿಗೆ ಬಿದ್ದು ಚಾಲಕ ನೀರು ಪಾಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರ ಸತತ 23 ತಾಸುಗಳ ಕಾರ್ಯಾಚರಣೆ ಬಳಿಕ ಜೀಪ್ ಪತ್ತೆಯಾಗಿದೆ. ಆದರೆ, ಜೀಪ್ ಚಾಲಕನ ಯಾವುದೇ ಕುರುಹು ಪತ್ತೆಯಾಗಿಲ್ಲ.
ಭದ್ರಾ ನದಿಯಲ್ಲಿ ಪತ್ತೆಯಾದ ಪಿಕಪ್ ಜೀಪ್ ನಿನ್ನೆ ಭದ್ರಾ ನದಿಗೆ ಜೀಪ್ ಉರುಳಿದ ಪರಿಣಾಮ ಅವರ ಚಾಲಕ 23ರ ಹರೆಯದ ಶಮಂತ್ ನೀರು ಪಾಲಾಗಿದ್ದ. ಸುದ್ದಿ ತಿಳಿದು ಆತನ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದೀಗ ಸತತ 23 ತಾಸುಗಳ ಶೋಧ ಕಾರ್ಯಾಚರಣೆ ಬಳಿಕ
ಜೀಪನ್ನು ಮೇಲಕ್ಕೆತ್ತಲಾಗಿದೆ.
ಆದರೆ ಜೀಪ್ ನಲ್ಲಿ ಚಾಲಕ ಶಮಂತ್ ಕುರುಹು ಪತ್ತೆಯಾಗಿಲ್ಲ. ಶಮಂತ್ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.
ನಿನ್ನೆ ಸಂಜೆ ತಾಯಿ ಹಾಗೂ ಕಾರ್ಮಿಕರನ್ನ ಕರೆದುಕೊಂಡು ಬರಲು ವೇಳೆ ಈ ದುರ್ಘಟನೆ ನಡೆದಿತ್ತು.ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ಭದ್ರಾ ನದಿಗೆ ಜೀಪ್ ಉರುಳಿತ್ತು.ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.