2:13 PM Saturday2 - August 2025
ಬ್ರೇಕಿಂಗ್ ನ್ಯೂಸ್
ರಾಹುಲ್ ಗಾಂಧಿ ನೀಡಿರುವ ‘ಮತ ಕಳ್ಳತನ’ ಪದವು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ:… ಸ್ಪಾಟ್ 1ರಲ್ಲಿ ದೊರೆತ ಡೆಬಿಟ್, ಪಾನ್ ಕಾರ್ಡ್ ವಾರಸುದಾರರು ಪತ್ತೆ; ಧರ್ಮಸ್ಥಳ ಪ್ರಕರಣಕ್ಕೂ… ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತಗಳ್ಳತನದ ವಿರುದ್ಧ ರಾಹುಲ್ ನೇತೃತ್ವದಲ್ಲಿ ಆ.5ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ: ಡಿಸಿಎಂ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಮುಂದುವರಿಯಲಿರುವ ಉತ್ಖನನ ಪ್ರಕ್ರಿಯೆ; ತಾತ್ಕಾಲಿಕ ಶೆಡ್ ನಿರ್ಮಾಣ ಶಿರೂರು ಗುಡ್ಡ ಕುಸಿತ ದುರಂತ ಕಥನ ಬೆಳ್ಳಿತೆರೆ ಮೇಲೆ ನೋಡಿ: ಮಲಯಾಳಂನಲ್ಲಿ ಸಿನಿಮಾ… ಮೈಸೂರಿನಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಸಂಸತ್ ನಲ್ಲಿ ಯದುವೀರ್… 3 ವರ್ಷ ಬಳಿಕ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೋ ಗೊತ್ತಿಲ್ಲ: ಶಾಸಕಿ ನಯನಾ ಮೋಟಮ್ಮ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಏನಿಲ್ಲ ಏನಿಲ್ಲ ಎನ್ನುವುದರ ನಡುವೆ ಸಿಕ್ಕೇ ಬಿಡ್ತು…

ಇತ್ತೀಚಿನ ಸುದ್ದಿ

ಚಂಡಮಾರುತದ ಅಬ್ಬರ: ಕಡವಿನಬಾಗಿಲು ನಂದಿನಿ ನದಿ ಬದಿಯಲ್ಲಿ ಕಟ್ಟಲಾಗಿರುವ ರಸ್ತೆ ತಡೆಗೋಡೆ ಕುಸಿತ

17/05/2021, 20:06

ಹಳೆಯಂಗಡಿ(reporterkarnataka news);

ಹೊಯ್ಗೆಗುಡ್ಡೆ-ಕದಿಕೆ ನದಿ ಬದಿ ಮೂಲಕ ಚಿತ್ರಾಪು ಮತ್ತು ಸಸಿಹಿತ್ಲುಗಳನ್ನು ಸಂಪರ್ಕಿಸುವ ನೇರ ಸಂಪರ್ಕ ರಸ್ತೆಗೆ ಕಡವಿನಬಾಗಿಲು ಸಮೀಪ ನಂದಿನಿ ನದಿಯ ಬದಿಯಲ್ಲಿ ಕಟ್ಟಲಾಗಿರುವ ರಸ್ತೆ ತಡೆಗೋಡೆ ಕುಸಿದಿದೆ.

2015ರಲ್ಲಿ ರಸ್ತೆ ನಿರ್ಮಾಣವಾದಂದಿನಿಂದಲೂ ಈ ಸ್ಥಳದಲ್ಲಿ ರಸ್ತೆ ತಡೆಗೋಡೆ ಬೇರೆ ಬೇರೆ ಕಡೆಗಳಲ್ಲಿ ಹಲವು ಬಾರಿ ಕುಸಿದಿದೆ. ಪ್ರಸಕ್ತ ಕುಸಿದಿರುವ ತಡೆಗೋಡೆ ಕಳೆದ ವರ್ಷವೇ ಬಿರುಕುಬಿಟ್ಟಿದ್ದು, ಇತ್ತೀಚಿನ ದಿನಗಳಲ್ಲಿ ಬಿರುಕು ಹೆಚ್ಚುತ್ತಾ ಹೋಗಿತ್ತು. ಕೊನೆಗೆ ಮೊನ್ನೆಯ ‘ತೌಕ್ತೆ’ ಚಂಡಮಾರುತದ ನೀರಿನ ಪ್ರವಾಹ ಮತ್ತು ಅಬ್ಬರದ ಅಲೆಗಳ ಆಘಾತಕ್ಕೆ ಕುಸಿದು ಹೋಗಿದೆ.

ಈ ರಸ್ತೆಯು ಕದಿಕೆ-ಹೊಯ್ಗೆಗುಡ್ಡೆ ಪ್ರದೇಶದ ಜೀವನಾಡಿಯಾಗಿದ್ದು, ಚಿತ್ರಾಪು ಮತ್ತು ಸಸಿಹಿತ್ಲುಗಳನ್ನು ಸಂಪರ್ಕಿಸುವ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಈಗಾಗಲೇ ಮಳೆಗಾಲ ಆರಂಭವಾಗಿದೆ. ರಸ್ತೆಯು ಮಳೆಗಾಲದಲ್ಲಿ ನಂದಿನಿ ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ಮುನ್ನ ತಕ್ಷಣ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕೆಂದು ಹೊಯ್ಗೆಗುಡ್ಡೆ, ಕದಿಕೆ, ಚಿತ್ರಾಪು, ಸಸಿಹಿತ್ಲು, ಹಳೆಯಂಗಡಿ, ಪಡುಪಣಂಬೂರಿನ ಜನರು ಮೀನುಗಾರಿಕಾ ಇಲಾಖೆಯ ಎಂಜಿನಿಯರ್ ಗಳನ್ನು ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು