7:34 PM Wednesday11 - February 2026
ಬ್ರೇಕಿಂಗ್ ನ್ಯೂಸ್
ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್‌ ಸಿಂಹ ಕಿಡಿ ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ… ರಾಜ್ಯ ಸರ್ಕಾರ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ: ಮಾಜಿ… NDPS ಕಾಯ್ದೆ: ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳು… Mangaluru | ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ನಮ್ಮ ಅಭಿಪ್ರಾಯ ಕೇಳಿಲ್ಲ:… ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

ಇತ್ತೀಚಿನ ಸುದ್ದಿ

ಬಸ್ ಸ್ಟಾಂಡ್ ಯಾಕೆ ಬೇಕು? ಏರ್ ಪೋರ್ಟ್ ಇದ್ರೆ ಸಾಕು!!: 30 ವರ್ಷಗಳಲ್ಲಿ ಒಂದು ಸರ್ವಿಸ್ ಬಸ್ ಸ್ಟಾಂಡ್ ಕಟ್ಟುವ ಯೋಗ್ಯತೆ ಇಲ್ಲದ ಸರಕಾರ, ಜನಪ್ರತಿನಿಧಿಗಳು!

02/04/2023, 13:06

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಆ 30 ವರ್ಷಗಳ ಅವಧಿಯಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಹಲವು ಸರಕಾರಗಳು ಬಂದು ಹೋಗಿವೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಲವು ಶಾಸಕರು ಬಂದು ಹೋಗಿದ್ದಾರೆ. ಸಾರಿಗೆ ಇಲಾಖೆ ಹಲವು ಸಚಿವರುಗಳನ್ನು ಕಂಡಿದೆ. ಆದರೆ ಆ ಬಸ್ ಸ್ಟಾಂಡ್ ಮಾತ್ರ 3 ದಶಕಗಳಿಂದ ಅಲ್ಲೇ ಪರ್ಮನೆಂಟ್ ಆಗಿ ಬೇರು ಬಿಟ್ಟಿದೆ.
ಇದು ಮಂಗಳೂರು ಸರ್ವಿಸ್ ಬಸ್ ನಿಲ್ದಾಣದ ವ್ಯಥೆಯ ಕಥೆ. 30 ವರ್ಷಗಳ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿಯ ಹಾಕಿ ಗ್ರೌಂಡ್ ನಲ್ಲಿ ನಿರ್ಮಿಸಿದ ಖಾಸಗಿ ಸರ್ವಿಸ್ ಬಸ್ ನಿಲ್ದಾಣದ ಕಣ್ಣೀರ ಕಥೆ. ಭರತ್ ಲಾಲ್ ಮೀನಾ ಅವರು ಹಂಪನಕಟ್ಟೆಯಲ್ಲಿದ್ದ ಗೂಡಿನ ತರಹದ ಬಸ್ ನಿಲ್ದಾಣವನ್ನು ತಾತ್ಕಾಲಿಕ ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಬಳಿಗೆ ಸ್ಥಳಾಂತರಿಸಿದ್ದರು.


ಅಲ್ ಇನ್ ವನ್: ಸ್ಟೇಟ್ ಬ್ಯಾಂಕ್ ಬಳಿಯ ಈ ಖಾಸಗಿ ಸರ್ವಿಸ್ ಬಸ್ ನಿಲ್ದಾಣ ಒಂದು ರೀತಿಯಲ್ಲಿ ಅಲ್ ಇನ್ ವನ್ ಬಸ್ ನಿಲ್ದಾಣ, ಖಾಸಗಿ ಸರ್ವಿಸ್ ಬಸ್ ಜತೆ ಕೆಎಸ್ಸಾರ್ಟಿಸಿ ಬಸ್ ಕೂಡ ಇಲ್ಲೇ ನಿಲ್ಲುತ್ತದೆ. ಇದೀಗ
ಏಪ್ರಿಲ್ 1ರಿಂದ ಸಿಟಿ ಬಸ್ ಗಳನ್ನು ಕೂಡ ಇಲ್ಲಿಗೆ ಶಿಫ್ಟ್ ಮಾಡಲಾಗಿದೆ. ಹಾಗೆ ಇದು ಬಸ್ ನಿಲ್ದಾಣವೂ ಹೌದು, ಗ್ಯಾರೇಜ್ ಕೂಡ ಹೌದು. ಇಲ್ಲೇ ಬಸ್ ರಿಪೇರಿ ಮಾಡಲಾಗುತ್ತದೆ. ಟಯರ್ ಬದಲಾಯಿಸಲಾಗುತ್ತದೆ. ಆಯಿಲ್ ಚೇಂಜ್ ಮಾಡಲಾಗುತ್ತದೆ. ಬೋಲ್ಟ್ ಟೈಟ್ ಮಾಡಲಾಗುತ್ತದೆ. ಡ್ರೈವರ್, ಕಂಡೆಕ್ಟರ್ ಗಳು ಬಾಟ್ಲಿ ನೀರು ಸುರುಗಿಕೊಂಡು ಇಲ್ಲೇ ಮುಖ ತೊಳೆಯುತ್ತಾರೆ. ಕತ್ತಲೆಯಾಗುತ್ತಿದ್ದಂತೆ ಮೈದಾನ ಕಡೆಯ ಗೋಡೆಗೆ ಮುಖ ಮಾಡಿ ದೇಹಬಾಧೆ ತೀರಿಸಿಕೊಳ್ಳುವವರೂ ಇದ್ದಾರೆ. ಟೀ ಸ್ಟಾಲ್, ತಿಂಡಿ ಸ್ಟಾಲ್ ಗಳಿವೆ. ಒಟ್ಟಿನಲ್ಲಿ ಗಿಜಿಗಿಜಿ ವಾತಾವರಣ.
ಪ್ರಯಾಣಿಕರ ಪರದಾಟ: ಈ ಬಸ್ ಸ್ಟಾಂಡ್ ನಲ್ಲಿ ಸಿಟಿ ಬಸ್ ಗಳು ಬರುವ ಮೊದಲೇ ಇಲ್ಲಿ ಪ್ರಯಾಣಿಕರು ಮೈಯೆಲ್ಲ ಕಣ್ಣಾಗಿಸಿ ಓಡಾಡ ಬೇಕು. ಯಾಕೆಂದರೆ ಸಣ್ಣ ಜಾಗದಲ್ಲಿ ಈ ಬಸ್ ನಿಲ್ದಾಣ ಇರುವುದರಿಂದ ಅಡ್ಡಾದಿಡ್ಡಿ ಬಸ್ ಗಳು ನಿಂತಿರುತ್ತವೆ. ಒಂದು ಕಡೆ ಬಸ್ ಸ್ಟಾಂಡ್ ಗೆ ಎಂಟ್ರಿ ಕೊಡುವ ಬಸ್ ಗಳ ಧಾವಂತ. ಇನ್ನೊಂದು ಕಡೆ ನಿರ್ಗಮಿಸುವ ಬಸ್ ಗಳ ಹಪಾಹಪಿ. ಇದರ ಮಧ್ಯೆ ಪ್ರಯಾಣಿಕರು ಪ್ರಾಣ ಉಳಿಸಿಕೊಳ್ಳಬೇಕು.

ಜನಪ್ರತಿನಿಧಿಗಳ ನಾಟಕ:
ಪ್ರತಿ 5 ವರ್ಷಕ್ಕೊಮ್ಮೆ ಹೊಸ ಖಾಸಗಿ ಸರ್ವಿಸ್ ಬಸ್ ನಿಲ್ದಾಣಕ್ಕೆ ಜಾಗ ಹುಡುಕುವ ನಾಟಕವನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡುತ್ತಲೇ ಬಂದಿದ್ದಾರೆ. ಒಮ್ಮೆ ಪಂಪ್ ವೆಲ್ ಬಳಿಯ ಜಾಗ ನೋಡುವುದು, ಇನ್ನೊಮ್ಮೆ ಕೂಳೂರು ಬಳಿ ಜಾಗ ನೋಡುವುದು. ಅಲ್ಲಿಗೆ ಎಲ್ಲವೂ ಮುಗಿಯಿತು. ಈ ನಾಟಕ ನೋಡಿ ನೋಡಿ ಕಡಲನಗರಿಯ ಜನರಿಗೆ ಅಭ್ಯಾಸವಾಗಿ ಹೋಗಿದೆ. ವಾಸ್ತವದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸರ್ವಿಸ್ ಬಸ್ ನಿಲ್ದಾಣಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಸ್ಮಾರ್ಟ್ ಸಿಟಿಯ ಹೆಚ್ಚಿನ ಹಣವನ್ನು ನಗರದ ರಸ್ತೆ, ಮಳೆ ನೀರು ತೋಡು, ಫುಟ್ ಪಾತ್ ನುಂಗಿ ಹಾಕಿವೆ. ಇಲ್ಲಿನ ಜನರು ಹೊಸ ಬಸ್ ನಿಲ್ದಾಣ ಕೇಳಬಾರದು ಎನ್ನುವ ರೀತಿಯಲ್ಲಿ ಹಾಕಿ ಗ್ರೌಂಡಿನ ಸರ್ವಿಸ್ ಬಸ್ ನಿಲ್ದಾಣವನ್ನು ಸ್ಮಾರ್ಟ್ ಸಿಟಿ ಹಣದಲ್ಲಿ ನವೀಕರಣ ಮಾಡಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು