9:51 AM Saturday5 - July 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ

ಇತ್ತೀಚಿನ ಸುದ್ದಿ

ಬಿಜೆಪಿ ದೀನ ದಲಿತರ ಪಕ್ಷ: ಮಾಜಿ ಶಾಸಕ ಕುಮಾರಸ್ವಾಮಿ ಹೇಳಿಕೆಗೆ ವಿನಯ್ ಹಳೆಕೋಟೆ ತಿರುಗೇಟು

11/04/2024, 18:05

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಅಂಬೇಡ್ಕರ್ ಬದುಕಿದ್ದಾಗ ಅವರನ್ನು ಕಾಂಗ್ರೆಸ್ ಅವಮಾನಿಸಿದ್ದು. ಜನಸಂಘ, ಬಿಜೆಪಿ ಅವರ ತತ್ವ ಸಿದ್ಧಾಂತ ಮತ್ತು ಪಾಂಡಿತ್ಯವನ್ನು ವಿಶ್ವಕ್ಕೆ ಸಾರಿವೆ. ಬಿಜೆಪಿ ಪಕ್ಷವು ವಿಕಸಿತ ಭಾರತದಲ್ಲಿ ದಲಿತರ ಎಳಿಗೆ ಹಾಗೂ ನಾಯಕತ್ವಕ್ಕಾಗಿ ಶ್ರಮಿಸುತ್ತಿದೆ. ರಾಷ್ಟ್ರಪತಿ ಸೇರಿದಂತೆ ಅನೇಕ ಸ್ಥಾನಮಾನಗಳನ್ನು ದಲಿತರಿಗೆ ನೀಡಿದ್ದು, ಮಾಜಿ ಶಾಸಕ ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸುತ್ತಿರುವುದಾಗಿ ಪಕ್ಷದ ವಕ್ತಾರ ವಿನಯ್ ಹಳೆಕೋಟೆ ಹೇಳಿದರು.
ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಇತ್ತೀಚೆಗೆ ಕಳಸದಲ್ಲಿ ದಲಿತರು ಬಿಜೆಪಿ ಕಚೇರಿಯನ್ನು ತುಳಿಯುವಂತೆ ನಾನೇ ಮಾಡಿದ್ದು ಎಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದ್ದು. ನೀವುಗಳು ಈ ಹಿಂದೆ ಪಕ್ಷಕ್ಕೆ ಬರುವ ಮುಂಚೆ ನಮ್ಮಲ್ಲಿ ಸಾವಿರಾರು ದಲಿತ ನಾಯಕರು ನಿಮಗಿಂತಲು ಹೆಚ್ಚು ಬುದ್ದಿವಂತರಿದ್ದರು. ಪಕ್ಷವನ್ನು ಸಂಘಟಿಸಿದ್ದರು. ಗೆದ್ದಲು ಹುಳುವಿನ ರೀತಿ ನೀವು ಬಿಜೆಪಿ ಪಕ್ಷಕ್ಕೆ ಆಗಮಿಸಿದ್ದು ಏನು ಇಲ್ಲದ ನಿಮ್ಮನ್ನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಐದು ಬಾರಿ ವಿಧಾನಸಭೆ ಟಿಕೆಟ್ ನೀಡಿ ಮೂರು ಬಾರಿ ಶಾಸಕನನ್ನಾಗಿ ಮಾಡಿದ್ದು ಬಿಜೆಪಿ ಪಕ್ಷವಾಗಿದೆ. ನಿಮ್ಮ ವೈಯಕ್ತಿಕ ದಂಧೆಗಳು ಮತ್ತು ಭ್ರಷ್ಟಾಚಾರದಿಂದ ಈ ಬಾರಿ ಟಿಕೆಟ್ ಅನ್ನು ನಿರಾಕರಿಸಿದ್ದು, ಇತ್ತೀಚಿಗೆ ನೀವು ಭ್ರಷ್ಟ ರಾಜಕೀಯ ಪಕ್ಷವೊಂದನ್ನು ಸೇರುವಾಗ ಈ ಹಿಂದೆಯೇ ನನ್ನದು ಕಾಂಗ್ರೆಸ್‌ ಮನಸ್ಥಿತಿ ಎಂದಿದ್ದೀರಿ. ದೇಶ ಒಡೆದ ಕೋಮುವಾದಿಗಳು ಭ್ರಷ್ಟಾಚಾರಿಗಳು ಆ ಪಕ್ಷದಲ್ಲೇ ಇರುವುದು ಸೂಕ್ತ. ನೀವೀಗ ರಾಜಕೀಯ ರಂಗಕ್ಕೆ ತಿರಸ್ಕೃತರಾಗಿದ್ದು. ಬೇರೆ ಪಕ್ಷದಲ್ಲಿ ಒಂದು ಬಾರಿ ಶಾಸಕನಾಗುವ ಶಕ್ತಿಯು ನಿಮ್ಮಲ್ಲಿಲ್ಲ. ನಿಮ್ಮ ಹಳಸಲು ಹೇಳಿಕೆಗಳು ಎಲ್ಲಿಯೂ ಈಗ ಸಲ್ಲುವುದಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಸುಳ್ಳು ಗ್ಯಾರಂಟಿಗಳ ಹೆಸರಲ್ಲಿ ಜನರನ್ನು ಒಂದು ಬಾರಿ ಮೋಸ ಮಾಡಬಹುದು. ಎರಡನೇ ಬಾರಿ ಸಾಧ್ಯವಿಲ್ಲ. ಈ ಬಾರಿಯ ಲೋಕಸಭಾ ಚುನಾವಣಾ ಸೇರಿದಂತೆ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಗೆಲುವು ತಾಲೂಕಿನಲ್ಲಿ ಶತಸಿದ್ಧ ಎಂದು ವಿನಯ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು