6:55 PM Friday12 - December 2025
ಬ್ರೇಕಿಂಗ್ ನ್ಯೂಸ್
ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು… ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಭರವಸೆ ಆರೆಸ್ಸೆಸ್ ಅಂದ್ರೆ ಉರಿಯುವ ಕಾಂಗ್ರೆಸ್ ನಾಯಕರಿಗೆ ಅವರ ಸರ್ಕಾರದಿಂದಲೇ ಉತ್ತರ: ಕೇಂದ್ರ ಸಚಿವ… ಮೈಸೂರು-ಕುಶಾಲನಗರ ಹೆದ್ದಾರಿ ಪ್ಯಾಕೇಜ್ 2 ಕಾಮಗಾರಿ ಆರಂಭ: 4126 ಕೋಟಿ ವೆಚ್ಚದಲ್ಲಿ ಅಗಲೀಕರಣ ಭೂ ಪರಿವರ್ತನೆ ನಿಯಮಗಳ ಸರಳೀಕರಣ: ವಿಧಾನ ಪರಿಷತ್ ನಲ್ಲಿ ಸಚಿವ ಕೃಷ್ಣ ಬೈರೇಗೌಡ ರಾಜ್ಯದಲ್ಲಿ 37,48,700 ವಸತಿ ರಹಿತರು: ವಿಧಾನ ಪರಿಷತ್ ನಲ್ಲಿ ಸಚಿವ ಜಮೀರ್ ಖಾನ್ ಬೆಂಗಳೂರು ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ ಧರ್ಮ ಮತ್ತು ಸಂಸ್ಕೃತಿ ಅಧ್ಯಯನ ಕೇಂದ್ರ ಉದ್ಘಾಟನೆ

ಇತ್ತೀಚಿನ ಸುದ್ದಿ

ಬೆಂಗಳೂರು: ಸೈಂಟ್ ಜೋಸೆಫ್ ವಿಶ್ವವಿದ್ಯಾಲಯ, ಕಂಪ್ಯೂಟರ್ ವಿಜ್ಞಾನ ಸಂಘದ ಪದಗ್ರಹಣ ಸಮಾರಂಭ

01/07/2024, 22:34

ಬೆಂಗಳೂರು(reporterkarnataka.com): ಸೈಂಟ್ ಜೋಸೆಫ್ ವಿಶ್ವವಿದ್ಯಾಲಯ, ಬೆಂಗಳೂರಿನ ಐಇಇಇ ವಿದ್ಯಾರ್ಥಿ ಪರಿಷತ್ತಿನ ಒಂದು ಪ್ರಮುಖ ಅಂಗವಾದ ಕಂಪ್ಯೂಟರ್ ವಿಜ್ಞಾನ ಸಂಘದ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ ಜರುಗಿತು.


ಶಾಂತಿಯುತ ಪ್ರಾರ್ಥನೆಯೊಂದಿಗೆ ಸಮಾರಂಭ ಪ್ರಾರಂಭವಾಯಿತು. ಐಇಇಇ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕಾರಿ ಅಧ್ಯಕ್ಷರಾದ ಜಾನ್ವಿಸ್ಟನ್ ಡಯಾಸ್ ಅವರು ನೀಡಿದ ಸ್ವಾಗತ ಭಾಷಣದಲ್ಲಿ ಗೌರವಾನ್ವಿತ ಅತಿಥಿಗಳು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಮತ್ತು ಬೆಂಬಲಕ್ಕಾಗಿ ಅವರು ಕೃತಜ್ಞತೆ ಸಲ್ಲಿಸಿ, ಸಂಘದ ಉದ್ದೇಶಗಳು ಮತ್ತು ಈ ಗುರಿಗಳನ್ನು ಸಾಧಿಸುವಲ್ಲಿ ಸಮಾರಂಭದ ಪ್ರಾಮುಖ್ಯತೆಯನ್ನು ತಿಳಿಸಿದರು.
ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದ ಮಾಹಿತಿ ತಂತ್ರಜ್ಞಾನ ಕಾಲೇಜಿನ ರೆ| ಫಾ| ಡೆನ್ಸಿಲ್ ಲೋಬೊ ಎಸ್‌.ಜೆ. ಅವರು ಶಿಕ್ಷಣ ಮತ್ತು ಕಂಪ್ಯೂಟರ್ ವಿಜ್ಞಾನ ಕ್ಷೇತ್ರಗಳಿಗೆ ಡಾ. ಸುಜಾತಾ ಅವರ ಕೊಡುಗೆಗಳ ಪರಿಗಣಿಸಿ, ಮುಖ್ಯ ಅತಿಥಿ ಡಾ. ಸುಜಾತಾ ಡಿ.ಎನ್. ಅವರನ್ನು ಸನ್ಮಾನಿಸಿದರು.
ಡಾ. ದೀಪಾ ನಾಗಲ್ವಿ ಅವರು ಮುಖ್ಯ ಅತಿಥಿ ಡಾ. ಸುಜಾತಾ ಡಿ.ಎನ್. ಅವರ ಪರಿಚಯವನ್ನು ನೀಡಿದರು. ಅವರು ಡಾ. ಸುಜಾತಾ ಅವರ ಗಮನಾರ್ಹ ಸಾಧನೆಗಳು ಮತ್ತು ಶಿಕ್ಷಣ ವಲಯವನ್ನು ಪರಿವರ್ತನಗೊಳಿಸುವಲ್ಲಿ ಅವರ ಪ್ರಮುಖ ಪಾತ್ರವನ್ನು ವಿವರಿಸಿದರು.
ನಂತರ ಐಇಇಇ ಬೆಂಗಳೂರು ವಿಭಾಗದ ಪ್ರಮುಖ ವ್ಯಕ್ತಿಯಾದ ಡಾ. ಸುಜಾತಾ ಡಿ.ಎನ್. ಅವರು ಕಳೆದ ವರ್ಷಗಳಲ್ಲಿ ಶಿಕ್ಷಣದ ವಿಕಾಸದ ಬಗ್ಗೆ ಮಾತನಾಡಿದರು ಮತ್ತು ಐಇಇಇಯಂತಹ ವೇದಿಕೆಗಳನ್ನು ಕೌಶಲ್ಯಗಳನ್ನು ಹೆಚ್ಚಿಸಲು ಬಳಸಿಕೊಳ್ಳುವುದರ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಅವರ ಭಾಷಣವು ವೇಗವಾಗಿ ಬದಲಾಗುತ್ತಿರುವ ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ನಿರಂತರ ಕಲಿಕೆ ಮತ್ತು ನಾವೀನ್ಯತೆಯನ್ನು ಅಳವಡಿಸಿಕೊಳ್ಳಲು ಪ್ರೇಕ್ಷಕರನ್ನು ಪ್ರೇರೇಪಿಸಿತು.
ಅಧ್ಯಕ್ಷೀಯ ಭಾಷಣದಲ್ಲಿ, ರೆ| ಫಾ| ಡೆನ್ಸಿಲ್ ಲೋಬೊ ಎಸ್‌ಜೆ ನಿರಂತರ ಕಲಿಕೆ, ಕಲಿತದ್ದನ್ನು ಮರೆಯುವುದು ಮತ್ತು ಮತ್ತೆ ಕಲಿಯುವ ಮನಸ್ಥಿತಿಯ ಅಗತ್ಯತೆಯ ಬಗ್ಗೆ ಮಾತನಾಡಿದರು. ಅವರು ವಿದ್ಯಾರ್ಥಿಗಳನ್ನು ಹಿರಿದಾದ ಕನಸು ಕಾಣಲು ಮತ್ತು ಸವಾಲುಗಳ ಹೊರತಾಗಿಯೂ ಪರಿಶ್ರಮ ಪಡಲು ಪ್ರೋತ್ಸಾಹಿಸಿದರು.
ಡಾ. ಮೊಹಮ್ಮದ್ ಮುಯೀನ್ ಪಾಷಾ ಅವರು ನಾಯಕತ್ವ ವಹಿಸಲು ಮತ್ತು ನಾವೀನ್ಯತೆ ತೋರಲು ಸಿದ್ಧವಿರುವ ಒಂದು ತಂಡದೊಂದಿಗೆ ಕಂಪ್ಯೂಟರ್ ವಿಜ್ಞಾನ ಸಂಘದ ಹೊಸ ಪದಾಧಿಕಾರಿಗಳ ನೇಮಕಾತಿಯನ್ನು ನಡೆಸಿದರು. ಕಂಪ್ಯೂಟರ್ ಸೈನ್ಸ್ ಸೊಸೈಟಿಯ ಕಾರ್ಯಕಾರಿ ಅಧ್ಯಕ್ಷರಾದ ಫ್ರಾಂಕ್ಲಿನ್ ಜೆರಾಲ್ಡ್ ಎಫ್. ಅವರ ವಂದನಾ ನಿರೂಪಣೆಯೊಂದಿಗೆ ಸಮಾರಂಭವು ಸಂಪನ್ನಗೊಂಡಿತು.

ಇತ್ತೀಚಿನ ಸುದ್ದಿ

ಜಾಹೀರಾತು