3:37 AM Saturday19 - April 2025
ಬ್ರೇಕಿಂಗ್ ನ್ಯೂಸ್
Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್…

ಇತ್ತೀಚಿನ ಸುದ್ದಿ

ಬೆಳಗಾವಿ: ಭಾರಿ ಗಾಳಿ ಮಳೆ; ಮರ, ಲೈಟ್ ಕಂಬಗಳು ಧರಾಶಾಯಿ; ದ್ರಾಕ್ಷೆ ಬೆಳೆಗೆ ಅಪಾರ ಹಾನಿ, ಕಂಗಾಲಾದ ರೈತರು 

09/04/2022, 23:09

ಬೆಳಗಾವಿ(reporterkarnataka.com): ಜಿಲ್ಲೆಯ ಹಲವೆಡೆ ಶನಿವಾರ ಮಿಂಚು ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಹಲವು ಮರ ಹಾಗೂ ವಿದ್ಯುತ್ ಕಂಬಗಳು ಧರಾಶಾಯಿಯಾಗಿದೆ.

ಗಾಳಿ ಸಮೇತ ಮಳೆಯಾಗುವುದರಿಂದ ಮುಖ್ಯ ಬಸ್ ನಿಲ್ದಾಣ ಎದುರುಗಡೆ ಇರುವ ಸಿಂಗನಲದ ಕರೆಂಟ್ ಕಂಬಗಳಿಗೆ ಹಾಕಿರುವ ಜಾಹೀರಾತು ಬ್ಯಾನರ್ ಗಳು ಹರಿದು ಹೋಗಿವೆ. ಬ್ಯಾನರ್ ತುಂಡುಗಳು ಗಾಳಿಗೆ ಹಾರಿ ವಿದ್ಯುತ್ ವಯರ್ ಗಳಿಗೆ ತಾಗಿ ಶಾರ್ಟ್ ಸರ್ಕಿಟ್ ಆಗುವ ದೃಶ್ಯ ಕಂಡು ಬಂತು. ಅಲ್ಲಲ್ಲಿ ಮರಗಳು ಉರುಳಿ ಅಂಗಡಿ ಮುಂಗಟ್ಟುಗಳಿಗೆ ಹಾನಿ ಸಂಭವಿಸಿದೆ. 

ಬೆಳಗಾವಿ, ನಿಪ್ಪಾಣಿ, ಅಥಣಿ ಮುಂತಾದ ತಾಲೂಕುಗಳಲ್ಲಿ ಭಾರಿ
ಮಳೆಯಾಗಿದೆ. ಅಥಣಿ ತಾಲೂಕಿನ ಐಗಳಿ,ತೆಲಸಂಗ,ಕೋಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ  ಬಾರಿ ಅಕಾಲಿಕ ಗಾಳಿ ಮಳೆ ಸುರಿದಿದೆ.  ಗಾಳಿ ರಭಸಕ್ಕೆ ಗಿಡ,  ಮರಗಳು  ಹಾಗೂ   ಲೈಟ್ ಕಂಬಗಳು  ಉರಳಿವೆ. ಇನ್ನೂ  ಐಗಳಿ.ತೆಿಲಸಂಗ ಕೋಹಳ್ಳಿ ಗ್ರಾಮದ ರೈತರು ಐಗಳಿ ದ್ರಾಕ್ಷಿ  ಸಂಸ್ಕರಣಾ ಘಟಕದ ಸಮೀಪ ಇರುವ ಶೇಡ್ ಗಳಲ್ಲಿ ತುಂಬಿದ ದ್ರಾಕ್ಷಿ  ಹಣ್ಣುಗಳು ಮಳೆಗೆ ಸಂಪೂರ್ಣ ವಾಗಿ  ತೊಯ್ದು ನಾಶವಾಗಿವೆ.   ರೈತರು ವರ್ಷವಿಡಿ   ದುಡಿದು ಕೊನೆಯ ಹಂತದಲ್ಲಿ ಅಪಾರವಾದ ನಷ್ಟ ಅನುಭವಿಸುವಂತಾಗಿದೆ.


ಇದರಿಂದ ರೈತರು ಕಂಗಾಲ ಆಗಿದ್ದಾರೆ  ಸಾವಿರಾರು ರೂ. ಸಾಲ ಮಾಡಿ ಖರ್ಚು ಮಾಡಿ ಬೆಳೆದ  ಬೆಳೆ  ಕೈಗೆ  ಬಾರದೆ ಇರುವುದು   ರೈತರ ಕಣ್ಣಲ್ಲಿ ನೀರು ತರಿಸಿದೆ  ಇದಕ್ಕೆ ಸರ್ಕಾರ  ಕೂಡಲೇ  ಪರಿಹಾರ   ನೀಡಬೇಕು  ಎಂದು ರೈತರು  ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು