1:27 PM Thursday27 - November 2025
ಬ್ರೇಕಿಂಗ್ ನ್ಯೂಸ್
ಟೈಯರ್ ಸ್ಫೋಟ: ನಿಯಂತ್ರಣ ಕಳೆದುಕೊಂಡು ಪಿಕ್ ಅಪ್ ಪಲ್ಟಿ; ಚಾಲಕನಿಗೆ ತೀವ್ರ ಗಾಯ ಛಲವಾದಿ ಹಾಗೂ ಆರ್. ಅಶೋಕ್ ಗೆ ರಾಜಕೀಯ ವಿವೇಕ ಇಲ್ಲ: ಸಚಿವ ಎನ್.… ಸಂತಾನ ಹರಣ ಚಿಕಿತ್ಸೆ ಬಳಿಕವೂ ಗರ್ಭಿಣಿಯಾದ ಪತ್ನಿ: ಪತಿಯಿಂದ ವೈದ್ಯರಿಗೆ ಬೆದರಿಕೆ ಆರೋಪ:… ರಾಜ್ಯದ ಕ್ರಿಕೆಟ್ ಪಟುಗಳಿಗೆ ತಲಾ 10 ಲಕ್ಷ ನಗದು ಬಹುಮಾನ ಜತೆಗೆ ಸರ್ಕಾರಿ… ಹೈವಿಷನ್ ಇಂಡಿಯಾ ಜತೆ ಕೊರಿಯನ್ ಸಂಸ್ಥೆ ಜಿಟಿಟಿಸಿ ಒಪ್ಪಂದಕ್ಕೆ ಸಹಿ |ರಾಜ್ಯದ ಪ್ರವಾಸಿ… ಗಗನಯಾನಿಯಾಗಲು ದೈಹಿಕ, ಮಾನಸಿಕ ಆರೋಗ್ಯ ಬಹಳ ಮುಖ್ಯ: ಶುಭಾಂಶು ಶುಕ್ಲಾ Kodagu | ಅಪಘಾತಕ್ಕೆ ಈಡಾಗಿ ಗಂಭೀರ ಸ್ಥಿತಿಯಲ್ಲಿ ಪುತ್ರ: ನೊಂದ ತಾಯಿ ಕೆರೆಗೆ… ಅಕ್ರಮ‌ ಆಸ್ತಿ ಸಂಪಾದನೆ ಆರೋಪ: ಕೊಡಗು ಪಿಡಬ್ಲ್ಯುಡಿ ಎಂಜಿನಿಯರ್ ಕಚೇರಿ, ಮನೆ ಮೇಲೆ… Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಇತ್ತೀಚಿನ ಸುದ್ದಿ

ಬಣಕಲ್ ಬಾಲಿಕ ಮರಿಯ ಚರ್ಚ್ ವಾರ್ಷಿಕೋತ್ಸವ; ಮಾತೆ ಮರಿಯಮ್ಮ ಭರವಸೆಯ ತಾಯಿ’: ಫಾ.ಪೌಲ್ ಮೆಲ್ವಿನ್ ಡಿಸೋಜ

14/02/2025, 21:54

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮಾತೆ ಮರಿಯಮ್ಮನವರು ಏಸುಕ್ರಿಸ್ತರ ಜನ್ಮದಾತೆಯಾಗಿ ಭರವಸೆಯ ತಾಯಿಯಾಗಿದ್ದಾರೆ ಎಂದು ಮೈಸೂರು ಬೋಗಾಧಿ ಚರ್ಚಿನ ನಿರ್ದೇಶಕರಾದ ಫಾ.ಪೌಲ್ ಮೆಲ್ವಿನ್ ಡಿಸೋಜ ಹೇಳಿದರು.
ಬುಧವಾರ ಸಂಜೆ ಬಣಕಲ್ ಬಾಲಿಕ ಮರಿಯ ಚರ್ಚಿನ ವಾರ್ಷಿಕೋತ್ಸವದಲ್ಲಿ ಪ್ರಬೋಧನೆ ನೀಡಿ ಮಾತನಾಡಿದರು.


ಮಾತೆ ಮರಿಯಮ್ಮನವರು ನಿಷ್ಕಳಂಕ ಮಾತೆಯಾಗಿ ಪ್ರಭು ಏಸುವಿಗೆ ಜನ್ಮ ನೀಡಿ ಕ್ರೈಸ್ತರಿಗೆ ಉನ್ನತ ತಾಯಿಯಾಗಿ ನಮಗೆ ಆದರ್ಶ ಮಾತೆಯಾಗಿದ್ದಾರೆ. ಧೀನತೆಯ ಪ್ರತಿರೂಪವಾಗಿ ಮಾತೆ ಮರಿಯಮ್ಮನವರು ದೇವರ ಚರಣದಾಸಿಯಾಗಿ ವಿಧೇಯರಾದರು. ಅವರ ಆದರ್ಶ ಗುಣಗಳು, ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರೀಕರಾಗಿ ಬದುಕಬೇಕು. ನಮ್ಮ ಕುಟುಂಬದಲ್ಲಿ ಭರವಸೆ, ಪ್ರೀತಿ, ವಿಶ್ವಾಸಗಳು ಹೆಚ್ಚಿಸಿ ಕುಟುಂಬದಲ್ಲಿ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಏಸು ಕ್ರಿಸ್ತರ ದಾರಿಯಲ್ಲಿ ನಾವು ನಡೆದು ಪರಿವರ್ತನೆಯ ಜೀವನ ನಾವು ನಡೆಸಬೇಕು’ ಎಂದರು. ಬಣಕಲ್ ಚರ್ಚ್ ಧರ್ಮಗುರು ಫಾ. ಪ್ರೇಮ್ ಲಾರೆನ್ಸ್ ಡಿಸೋಜ ಮಾತನಾಡಿ, ಅಮ್ಮನ ಮಮತೆಯ ಸಮಾನವಾದ ಆಭರಣವೂ ಯಾವುದೂ ಇಲ್ಲ. ಸರ್ವರಿಗೂ ಮಾತೆ ಮರಿಯಮ್ಮನವರ ಹೇರಳವಾದ ಕೃಪೆ ಕುಟುಂಬದಲ್ಲಿ ನೆಲೆಸಲಿ. ಚರ್ಚ್ ವಾರ್ಷಿಕೋತ್ಸವಕ್ಕೆ ನೆರವಾದ ಸರ್ವ ದಾನಿಗಳನ್ನು ಅವರ ಸಹಕಾರವನ್ನು ಸ್ಮರಿಸಿದರು.ಹಬ್ಬದ ಶುಭಾಶಯ ಕೋರಿದರು. ಪೂಜೆಯ ಬಳಿಕ ಬಣಕಲ್ ಪಟ್ಟಣದಲ್ಲಿ ಮಾತೆ ಮರಿಯಮ್ಮನವರ ಸುಂದರ ತೇರುವಿನೊಂದಿಗೆ ಪರಮ ಪ್ರಸಾದದ ಪ್ರತಿಷ್ಠಾಪನೆ ಜತೆಗೆ ಕ್ರೈಸ್ತ ಭಕ್ತಾಧಿಗಳು ಆಕರ್ಷಕ ಮೆರವಣಿಗೆ ನಡೆಸಿದರು. ಹಬ್ಬದ ಸಂಭ್ರಮದಲ್ಲಿ ಫಾ.ಆನಂದ್ ಕ್ಯಾಸ್ತಲಿನೊ, ಫಾ.ಥಾಮಸ್ ಕಲಘಟಗಿ, ಫಾ.ಡೇವಿಡ್ ಪ್ರಕಾಶ್, ಫಾ.ಎಡ್ವಿನ್ ರಾಕೇಶ್, ಫಾ.ಜೆ.ಬಿ.ಗೊನ್ಸಾಲ್ವಿಸ್, ಫಾ.ಡೆನಿಸ್ ಡಿಸೋಜ ಸೇರಿದಂತೆ ಚಿಕ್ಕಮಗಳೂರು ಧರ್ಮಕ್ಷೇತ್ರದ ವಿವಿಧ ಚರ್ಚಿನ ಇಪ್ಪತ್ತಕ್ಕೂ ಅಧಿಕ ಧರ್ಮಗುರುಗಳು ಭಾಗವಹಿಸಿದ್ದರು. ಸಿಸ್ಟರ್ ಹಿಲ್ಡಾ ಲೋಬೋ, ಸಿಸ್ಟರ್ ಆಮಲ್ ರಾಣಿ ಸೇರಿದಂತೆ ವಿವಿಧ ಕ್ರೈಸ್ತ ಭಗಿನೀಯರು ಇದ್ದರು.ಬಣಕಲ್ ಕ್ರೈಸ್ತ ಅಭಿವೃದ್ದಿ ಸಂಘ, ಹರ್ಷ ಮೆಲ್ವಿನ್ ಲಸ್ರಾದೊ, ಐಸಿವೈಎಂ ಯುವ ಸಂಘಟನೆ, ಪೀಠ ಸೇವಕರು, ಸ್ತ್ರೀ ಸಂಘಟನೆಯವರು, ಸಂಗೀತ ವೃಂದದವರು ವಾರ್ಷಿಕೋತ್ಸವದ ಸಾಥ್ ವಹಿಸಿದ್ದರು. ಮಂಗಳೂರಿನ ಪಜೀರ್ ಬ್ಯಾಂಡ್ ಸಿಸ್ಟಮ್ ಮೆರವಣಿಗೆಯ ಅಂದ ಹೆಚ್ಚಿಸಿತು. ಬಳಿಕ ಸಹ ಭೋಜನ ಕೂಟ ನಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು