1:52 AM Monday15 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ಅಥಣಿ: ಹೆಸ್ಕಾಂ ದಿವ್ಯ ನಿರ್ಲಕ್ಷ್ಯ; ವಿದ್ಯುತ್ ಅವಘಡಕ್ಕೆ 2 ಜೀವ ಬಲಿ

13/11/2022, 10:29

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಬದುಕು ಕಟ್ಟಿಕೊಳ್ಳಲು ಬಂದ ಬಡ ಜೀವಗಳು HESCOM ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಈಗ ಬಲಿಯಾಗಿವೆ.
ಸಬ್ ಕಾಂಟ್ರಾಕ್ಟ್ ಸಮರ್ಥ್ ಎಲೆಕ್ಟ್ರಿಕಲ್ ಗುತ್ತಿಗೆದಾರ ಜತೆ ಮೇನ್ ಲೈನ್ ಕೆಲಸ ಮಾಡುವ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಮೇನ್ ಲೈನ್ ತಂತಿ ಜೋಡಿಸುವ ಕೆಲಸ ಮಾಡುವ ಸಮಯದಲ್ಲಿ ವಿದ್ಯುತ್ ಹರದಾಡಿ, ವಿದ್ಯುತ್ ಕಂಬ ಹತ್ತಿದ ಇಬ್ಬರು ಯುವಕರ ಜೀವ ಬಲಿ ಪಡೆದಿದೆ.


ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಹಿಡಕಲ್ ಮೂಲದ ಹಣಮಂತ ಮುಗುದುಮ್ (34) ಹಾಗೂ ಅಶೋಕ್ ಮಾಳಿ (35)
ಮೃತ ದುರ್ದೈವಿಗಳು ಮೇನ್ ಲೈನ್ ವಿದ್ಯುತ್ ಅಂಟಿಕೊಂಡು ನಂತರ ಇಬ್ಬರು ಸ್ಥಳದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ. ನಂತರ ಅಥಣಿ ಆಸ್ಪತ್ರೆ ಸೇರುವಷ್ಟರಲ್ಲಿ ಕೊನೆ ಉಸಿರು ಎಳೆದಿದ್ದಾರೆ.

ಬೆಳಗಾವಿ ಜೆಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ 110/11 ವಿದ್ಯುತ್ ವಿತರಣಾ ಕೇಂದ್ರ ಹತ್ತಿರದಲ್ಲೇ ಕೆಲಸ ವೇಳೆ ಈ ಘಟನೆ ಸಂಭವಿಸಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೆಲಸ ಪ್ರರಂಬಿಸುವ ಮುಂಚೆ ಏರಿಯಾ ಲೈನ್ ಮೆನ್ ಕಡೆಯಿಂದ ಎಲ್ ಸಿ ಪಡೆಯಲಾಗಿತ್ತು..! ಎಲ್ ಸಿ ಪಡೆದ ಸುಮಾರು ಎರಡು ಘಂಟೆಯ ವರೆಗೆ ಟ್ರ್ಯಾಕ್ಟರ್ ಸಹಾಯದಿಂದ ಕಂಬ ಹತ್ತಿ ತಂತಿ ಜೋಡಣೆ ಕೆಲಸ ನಡೆದಿತ್ತು.

ಎಲ್ ಸಿ ವಾಪಸ ಪಡೆಡೆಯಿಲ್ಲ ಆದರೂ ವಿದ್ಯುತ್ ಸಪ್ಲಯ್ ಹೇಗೆ ಬಂತು ಅನ್ನೋದರ ಬಗ್ಗೆ ಮಾಹಿತಿ ಲಭ್ಯವಾಗಬೇಕಾಗಿದೆ.
ಅಥಣಿ ವಲಯದ HESCOM ಇಲಾಖೆಯ ಸೆಕ್ಷನ್ ಆಫೀಸರ್ ದಾಸರ ಅವರನ್ನು ದೂರವಾಣಿ ಮುಕಾಂತರ ಸಂಪರ್ಕಿಸೀದಾಗ ವಿದ್ಯುತ್ ಹರಿದಾಡಿದ ಬಗ್ಗೆ ನಿಖರ ಕಾರಣ ಗೊತ್ತಾಗಿಲ್ಲ ಪರಿಶೀಸಲಾಗುತ್ತಿದೆ ಅಂತಾ ಮಾಹಿತಿ ನೀಡಿದ್ದಾರೆ..


ಒಟ್ಟಿನಲ್ಲಿ HESCOM ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಬಾಳಿ ಬದುಕಬೇಕಿದ್ದ ಇಬ್ಬರ ಯುವಕನ್ನು ಬಲಿ ಪಡೆದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು