ಇತ್ತೀಚಿನ ಸುದ್ದಿ
ಕಡಲನಗರಿಯಲ್ಲಿ ‘ಅನುಷ ಅನುರಾಗದ ಮುಸ್ಸಂಜೆ’ ಸಾಂಸ್ಕೃತಿಕ ಕಾರ್ಯಕ್ರಮ
26/05/2022, 23:28
ಮಂಗಳೂರು(reporterkarnataka.com): ಮಂಗಳೂರಿನಲ್ಲಿ ಕವಿ ದಿವಂಗತ ಬಿ.ಎನ್. ಗೋಪಾಲಕೃಷ್ಣ ರಾವ್ ಅವರ ನೆನಪಿನಂಗಳದ “ಅನುಷ ಅನುರಾಗದ ಮುಸ್ಸಂಜೆ” ಸಾಂಸ್ಕೃತಿಕ ಕಾರ್ಯಕ್ರಮವು ಸುಬ್ರಮಣ್ಯ ಸಭಾ ಸಭಾಂಗಣದಲ್ಲಿ ನಡೆಯಿತು.
ಕವಿ ಗೋಪಾಲಕೃಷ್ಣ ರಾವ್ ನೆನಪಿನ ಜೊತೆ,ರೂಪ ಲಕ್ಷ್ಮಿ ರಾವ್ ನಿರ್ಮಾಣದ, ಶರತ್ ಬಿಳಿನೆಲೆ ಸಂಗೀತ ನೀಡಿ ನಿರ್ದೇಶಿಸಿದ, ಕಿರುತೆರೆ, ಹಿರಿತೆರೆ ನಾಯಕಿ ತನ್ವಿ ರಾವ್ ಅಭಿನಯದ,ತನುಶ್ರೀ ಅವರ ಕಂಠಸಿರಿಯಿಂದ ಮೂಡಿಬಂದ “ಕವಿ” ದೃಶ್ಯಕಾವ್ಯ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜೊತೆಜೊತೆಗೆ ನಡೆದವು, ತನ್ನ ಅಪ್ರತಿಮ ಪ್ರತಿಭೆ ಮೂಲಕ ದೇಶದ ಗಮನ ಸೆಳೆದ, ರಾಷ್ಟ್ರಪತಿ ಮತ್ತು ಪ್ರಧಾನಿಗಳಿಂದ ಪ್ರಶಂಸಿಸಲ್ಪಟ್ಟ ತನ್ವಿ ರಾವ್ ಮತ್ತು ರಾಜ್ಯೋತ್ಸವ ಸಾಧಕಿ ಪ್ರಶಸ್ತಿ ಪುರಸ್ಕೃತ ತನುಶ್ರೀ ಜೋಡಿ, ದೃಶ್ಯಕಾವ್ಯದ ಮೂಲಕ ಮತ್ತೊಮ್ಮೆ ಮನೆಮಾತಾಗಿದ್ದಾರೆ. ಅಲ್ಲದೆ ಯುವ ಸಂಗೀತ ನಿರ್ದೇಶಕ ಶರತ್ ಬಿಳಿನೆಲೆ ಯವರು ಉತ್ತಮ ಮತ್ತು ವಿಭಿನ್ನ ರೀತಿಯ ಪ್ರಯತ್ನದಲ್ಲಿ ಸಂಗೀತವನ್ನು ನೀಡಿ ಸಫಲರಾಗಿದ್ದಾರೆ. ರೂಪಲಕ್ಷ್ಮಿ ತನ್ನ ಬಹುದಿನಗಳ ಕನಸಾದ “ಅನುಷಾ ಅನುರಾಗ ” ಯುಟ್ಯೂಬ್ ಚಾನೆಲ್ ಇತ್ತೀಚೆಗಷ್ಟೇ ಆರಂಭಿಸಿದ್ದು ಈ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ರತಿಮ ಸಾಧಕರನ್ನು ನಾಡಿಗೆ ಪರಿಚಯಿಸುವ ಪ್ರಯತ್ನವನ್ನು ಮಾಡುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತವಾಯಿತು.
ಸಭಾ ಕಾರ್ಯಕ್ರಮದಲ್ಲಿ ರಂಗಕರ್ಮಿ, ಚಲನಚಿತ್ರ ನಿರ್ಮಾಪಕ-ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಲ್ ಬೈಲ್, ಸುಬ್ರಹ್ಮಣ್ಯ ಸಭಾದ ಅಧ್ಯಕ್ಷ, ಉದ್ಯಮಿ ಹರ್ಷಕುಮಾರ್ ಕ್ಯಾದಿಗೆ, ಸನಾತನ ನಾಟ್ಯಾಲಯದ ವಿದುಷಿ ಶಾರದಾ ಮಣಿ ಶೇಖರ್, ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ವೈದ್ಯಕೀಯ ಕ್ಷೇತ್ರದ ಸಾಧಕಿ ವಾಣಿ ಸುಗುಣ ಕುಮಾರ್, ಇಂಡಿಯನ್ ಮಿಲಿಟರಿ ಹವಾಲ್ದಾರ್ ನವೀನ್,
ದೀಕ್ಷಾ ಅಮೀನ್, ಜೂನಿಯರ್ ರಾಜ್ ಕುಮಾರ್ ಬಿರುದಾಂಕಿತ ಜಗದೀಶ್ ಶಿವಪುರ, ಶಶಿ ಗಿರಿವನ, ಇವರುಗಳನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದ ಪ್ರಸ್ತಾವನೆ- ನಿರೂಪಣೆ, ನಿರ್ದೇಶನ ಹಾಗೂ ವಂದನಾರ್ಪಣೆಯನ್ನು ದೃಶ್ಯ ಮಾಧ್ಯಮ ನಿರೂಪಕ ಚೇತನ್ ಶೆಟ್ಟಿ ನಡೆಸಿಕೊಟ್ಟರು. ಒಟ್ಟಾರೆಯಾಗಿ ಉತ್ತಮ, ನೂತನ ವಿಭಿನ್ನ ಕಾರ್ಯಕ್ರಮ ಜನರ ಮನಸ್ಸನ್ನು ಸೆಳೆಯುವುದರ ಜೊತೆಗೆ ಮಾದರಿ ಕಾರ್ಯಕ್ರಮ ಎನಿಸಿತು.














