9:32 AM Friday7 - November 2025
ಬ್ರೇಕಿಂಗ್ ನ್ಯೂಸ್
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್…

ಇತ್ತೀಚಿನ ಸುದ್ದಿ

ಅನಾಥ, ಬಡ ಮಕ್ಕಳಿಗೆ ನಿತ್ಯ ಅನ್ನದಾನ: ಮಹಾನ್ ಸಾಧಕ ಮಸ್ಕಿಯ ಡಾ. ಶಿವಶರಣಪ್ಪ ಇತ್ಲಿ

03/10/2021, 16:47

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಸಿಂಧನೂರಿನ ಪಿಡಬ್ಲ್ಯೂಡಿ ಕ್ಯಾಂಪ್ ನಲ್ಲಿರುವ ಆಶಾಕಿರಣ ಅನಾಥ ಮತ್ತು ಬಡಮಕ್ಕಳ ಆಶ್ರಮದಲ್ಲಿ ನಿತ್ಯ ಅನ್ನದಾನ ಜತೆಗೆ ಶಿಕ್ಷಣಕ್ಕೆ ಸಾಥ್ ನೀಡುತ್ತಿರುವ ಡಾ. ಶಿವಶರಣಪ್ಪ ಕುಟುಂಬವು ಇದೀಗ ಮಸ್ಕಿ ಭಾಗದಲ್ಲಿ ಡಾ. ಶಿವಶರಣಪ್ಪ ಫೌಂಡೇಶನ್ ಚಾಲನೆ ನೀಡಿದೆ.


ಮೂಲತಃ ರಾಯಚೂರಿನವರಾದ ಡಾ. ಶಿವಶರಣಪ್ಪ ಕುಟುಂಬವು 50 ವರ್ಷಗಳ ಹಿಂದೆ ಮಸ್ಕಿಗೆ ಆಗಮಿಸಿತ್ತು. ಮಸ್ಕಿಯಲ್ಲಿ ಆಸ್ಪತ್ರೆ ತೆರೆದು ಡಾ. ಇತ್ಲಿ ಅವರು ವೈದ್ಯಕೀಯ ನೆರವಿನ ಜತೆಗೆ ಸಮಾಜಮುಖಿ ಕೆಲಸ ಮಾಡಲಾರಂಭಿಸಿದರು. ಡಾ. ಇತ್ಲಿ ಅವರ ಪುಣ್ಯ ಕಾರ್ಯಕ್ಕೆ ಅವರ ಕುಟುಂಬ ಕೈಜೋಡಿಸಿತು. ಇದೀಗ ಡಾ. ಶಿವಶರಣಪ್ಪ ಫೌಂಡೇಶನ್ ಎಂಬ ಸಂಸ್ಥೆ ತಲೆ ಎತ್ತಿ ನಿಂತಿದೆ. ಡಾ. ಇತ್ಲಿ ಅವರು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಘನತೆ ಮೆರೆದಿದ್ದಾರೆ. ಇಲ್ಲಿ ಬಡವರು, ಅನಾಥರು, ದಿಕ್ಕು ಇಲ್ಲದವರು ಡಾ. ಇತ್ಲಿ ಅವರನ್ನು ದೇವರ ತರಹ ಪೂಜಿಸುತ್ತಾರೆ. ಸಿಂಧನೂರಿನ ಪಿಡಬ್ಲ್ಯೂಡಿಕ್ಯಾಂಪ್ ನಲ್ಲಿರುವ ಆಶಾಕಿರಣ ಅನಾಥ ಮತ್ತು ಬಡಮಕ್ಕಳಿಗೆ ಅನ್ನದಾನ ಮಾಡುತ್ತಿದ್ದರು. ಜತೆಗೆ ಅವರ ಶಿಕ್ಷಣಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು