9:18 AM Friday6 - March 2026
ಬ್ರೇಕಿಂಗ್ ನ್ಯೂಸ್
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನವೀಕೃತ, ವಿಸ್ತೃತ, ಹವಾನಿಯಂತ್ರಿತ ಬಿ.ಸಿ. ರೋಡ್ ಶಾಖೆ… ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಆರತಕ್ಷತೆ: ಶುಭ ಹಾರೈಸಿದ ಡಿಕೆಶಿ- ಪೊನ್ನಣ್ಣ ಬೇಡ್ತಿ ಸಮೀಪ ಕೆಎಸ್ಸಾರ್ಟಿಸಿ ಬಸ್ -ಕಾರು ಡಿಕ್ಕಿ,: ಮಂಗಳೂರಿನ ಉದ್ಯಮಿ ಸಾವು ದನದ ಅವಶೇಷ ಪತ್ತೆ: ಕೊಪ್ಪ-ತೀರ್ಥಹಳ್ಳಿ ರಾಷ್ಟಿಯ ಹೆದ್ದಾರಿ ತಡೆದು ಭಜರಂಗ ದಳ ಕಾರ್ಯಕರ್ತರ… ಡಿಕೆಶಿ ಮೇಲೆ ಕಣ್ಗಾವಲು | ಎಚ್ ಡಿಕೆ, ಆರ್. ಅಶೋಕ್ ಹೇಳಿಕೆ ‘’ತಾ… ಚೆನ್ನೈ ವಿಶೇಷ ಸಮಾವೇಶದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್: ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಕುರಿತು… ಚೆನ್ನಪಟ್ಟಣ | ಕೊಡಗಿನ ಸಾಕಾನೆಗಳ ಯಶಸ್ವಿ ಕಾರ್ಯಾಚರಣೆ: ನಿರಂತರ ಉಪಟಳ ನೀಡುತ್ತಿದ್ದ ಮಕ್ನಾ… ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ…

ಇತ್ತೀಚಿನ ಸುದ್ದಿ

ಆರಗ ಜ್ಞಾನೇಂದ್ರ ಅವರು ವಿವೇಚನೆ ಇಲ್ಲದೆ ಅಧಿಕಾರಿಗಳ ಜೊತೆಗೆ ಏಕವಚನದಲ್ಲಿ ಮಾತನಾಡುತ್ತಾರೆ: ಕಿಮ್ಮನೆ ರತ್ನಾಕರ್

14/07/2025, 19:23

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಧಿಕಾರಿಗಳ ಜೊತೆಗೆ ಮಾತನಾಡುವ ರೀತಿ ತೀರಾ ಧೋರಣೆಯಿಂದ ಕೂಡಿದ್ದಾಗಿದೆ. ಏಕವಚನದಲ್ಲಿ ಮಾತನಾಡುವಂತಹದ್ದು, ಅಧಿಕಾರಿಗಳಿಗೆ ಬಯ್ಯುವಂತಹದ್ದು, ದಲಿತ ಸಮಾಜಕ್ಕೆ ಸೇರಿದ ಪಪಂ ಮುಖ್ಯ ಅಧಿಕಾರಿಗೆ ಬೈದಿದ್ದಾರೆ. ಅದು ಯಾವುದೊ ಒಳ್ಳೆಯ ಕೆಲಸಕ್ಕೆ ಆದರೆ ಬೇಸರವಿಲ್ಲ ಅದನ್ನು ಬಿಟ್ಟು ತಮ್ಮ ಬಿಜೆಪಿ ಕಾರ್ಯಕರ್ತರಿಗಾಗಿ ಮಾತನಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಸೋಮವಾರ ಪಟ್ಟಣದ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸಾರ್ವಜನಿಕರ ಎದುರು ಓರ್ವ ಅಧಿಕಾರಿಗೆ ಹೊಟ್ಟೆಗೆ ಏನು ತಿನ್ನುತ್ತಿಯ ಎಂದು ಏಕ ವಚನದಲ್ಲಿ ಮಾತನಾಡುತ್ತಾರೆ. ವಿವೇಚನೆ ಇಲ್ಲದೆ ಮಾತನಾಡುತ್ತಾರೆ. ಅವರ ಸರ್ಕಾರ ಹಾಗೆ ಮಂತ್ರಿ ಇದ್ದಾಗ ಮಾತನಾಡುವುದು ಬೇರೆ ಆದರೆ ಈಗ ತಮಗೆ ಬೇಕಾದ ಹಾಗೆ ಮಾತನಾಡುವುದು ಸರಿಯಲ್ಲ, ಸರ್ಕಾರಿ ಕಾರ್ಯಕ್ರಮದಲ್ಲಿ ತಮ್ಮ ಪಕ್ಕದಲ್ಲಿ ಯಾರನ್ನೋ ತಂದು ಕೂರಿಸಿಕೊಳ್ಳುತ್ತಾರೆ. ನಾವು ಯಾವತ್ತೂ ಆ ರೀತಿ ಮಾಡಿಲ್ಲ. ಇವರ ಜೊತೆಗೆ ಇದ್ದವರು ಅಷ್ಟೇ ಮರ್ಯಾದೆ ಇಲ್ಲದೆ ಹೋಗಿ ಕೂರುತ್ತಾರೆ. ನಾವು ಅಧಿಕಾರಿಗಳಿಗೆ ಕಂಪ್ಲೇಂಟ್ ಮಾಡಲು ಹೇಳಿದ್ದೇನೆ ಇಲ್ಲದಿದ್ದರೆ ನಾವೇ ಕಂಪ್ಲೇಂಟ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
*ಆಸ್ಪತ್ರೆಯಲ್ಲಿ ಪ್ರತಿಭಟನೆ ಮಾಡುವ ಅವಶ್ಯಕತೆ ಏನಿತ್ತು?:* ಪಕ್ಷಾತೀತವಾಗಿ ಎಂದಿದ್ದಕ್ಕೆ ನಮ್ಮವರು ಹೋಗಿದ್ದಾರೆ. ಆದರೆ ನಾವು ಪಕ್ಷಾತೀತವಾಗಿ ಎಂದು ಪ್ರತಿಭಟನೆಗೆ ಕರೆದರೆ ಬರುತ್ತಾರಾ? ಬಿಜೆಪಿ ಅವರಿಗೆ ಮೋಸ ಮಾಡುವುದು ಹೇಳಿಕೊಡಬೇಕಾಗಿಲ್ಲ, ಆಸ್ಪತ್ರೆಯಲ್ಲಿ ದಶಕಗಳಿಂದ ಇರುವ ವೈದ್ಯರನ್ನು ವರ್ಗಾವಣೆ ಮಾಡಲಾಗಿದೆ. 48 ಗಂಟೆಯಾದರೂ ಬೇರೆ ವೈದ್ಯರು ಬಂದಿಲ್ಲ ಎಂದಾದರೆ ಪ್ರತಿಭಟನೆ ಮಾಡಿದ್ದರೆ ನಾನೆ ಸಹಕಾರ ನೀಡುತ್ತಿದ್ದೆ. ಆದರೆ ಅಷ್ಟೊಂದು ತಾರಾತುರಿ ಏನಿತ್ತು ಗೊತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ಶಚಿಂದ್ರ ಹೆಗಡೆ, ಮುಡುಬಾ ರಾಘವೇಂದ್ರ, ರಹಮತ್ ಉಲ್ಲಾ ಆಸಾದಿ, ಡಾ. ಸುಂದರೇಶ್, ಗೀತಾ ರಮೇಶ್, ಶಬನಮ್, ಮಂಜುಳಾ ನಾಗೇಂದ್ರ, ಸುಶೀಲ ಶೆಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು