ಇತ್ತೀಚಿನ ಸುದ್ದಿ
ಶಬರಿಮಲೆಗೆ ವಾರ್ಷಿಕ ಯಾತ್ರೆ: ಶ್ರೀಲಂಕಾ ಸರಕಾರ ಮಾನ್ಯತೆ; ವರ್ಷಕ್ಕೆ 15 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ
14/08/2025, 23:23

ಕೊಲಂಬೊ(reporterkarnataka.com): ಶ್ರೀಲಂಕಾದ ಅಯ್ಯಪ್ಪ ಭಕ್ತರು ವಾರ್ಷಿಕ ತೀರ್ಥಯಾತ್ರೆಯನ್ನು ಶಬರಿಮಲೆಗೆ ಕೈಗೊಳ್ಳಬಹುದು ಎಂದು ಅಲ್ಲಿನ ಸರ್ಕಾರ ನಿರ್ಧರಿಸಿದೆ.
ಶ್ರೀಲಂಕಾದ ಭಕ್ತರು ಸಹ ಅಯ್ಯಪ್ಪನನ್ನು ಆರಾಧಿಸುತ್ತಾರೆ. ಹಾಗೆಯೇ ಸುಮಾರು ಹದಿನೈದು ಸಾವಿರಕ್ಕೂ ಅಧಿಕ ಅಯ್ಯಪ್ಪ ಭಕ್ತರು ಪ್ರತಿ ವರ್ಷ ಶಬರಿಮಲೆಗೆ ಭೇಟಿ ನೀಡುತ್ತಾರೆ. ಈ ಕಾರಣದಿಂದ ಶಬರಿಮಲೆ ಯಾತ್ರೆಗೆ ಸರ್ಕಾರದ ಮಾನ್ಯತೆಯನ್ನು ಅಲ್ಲಿನ ಸರ್ಕಾರ ನೀಡಿರುವುದಾಗಿದೆ.