4:21 PM Monday2 - March 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ… ನಾಪೋಕ್ಲು: ಹಿಂದೂ ಸಂಗಮ ಸಮಾವೇಶ ಪ್ರಚಾರ ವೇಳೆ ಮಾತಿನ ಚಕಮಕಿ; ಓರ್ವನಿಗೆ ಗಾಯ ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು… “ನಾನು ಭ್ರಷ್ಟನಲ್ಲ”: ದಿಲ್ಲಿ ಅಬಕಾರಿ ಪ್ರಕರಣದಲ್ಲಿ ಖುಲಾಸೆಗೊಂಡ ಅರವಿಂದ್ ಕೇಜ್ರಿವಾಲ್ ಕಣ್ಣೀರು ಪಾದಚಾರಿಗೆ ಸ್ಕೂಟಿ ಡಿಕ್ಕಿ: ಅದೇ ವ್ಯಕ್ತಿ ಮೇಲೆ ಹರಿದ ಕಾರು; ಸ್ಥಳದಲ್ಲೇ ಸಾವು ಬ್ಯಾಚುಲರ್ ಲೈಫ್‌ಗೆ ಕೊಡಗಿನ ಬೆಡಗಿ ಗುಡ್‌ಬೈ: ರಶ್ಮಿಕಾ – ದೇವರಕೊಂಡ ದಂಪತಿಗೆ ಅಂಬಾನಿ,… ಮಸ್ಕಿ ಇರಕಲ್ ಶ್ರೀ ಮಠದ ಜಾತ್ರಾ ಮಹೋತ್ಸವ: ಹಸೆಮಣೆ ಏರಿದ 12 ಜೋಡಿಗಳು ಜವಾಹರಲಾಲ್ ನೆಹರು ತಾರಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂಭ್ರಮ; ವೈಜ್ಞಾನಿಕ ಮನೋಭಾವಕ್ಕೆ ಸಚಿವ…

ಇತ್ತೀಚಿನ ಸುದ್ದಿ

ಸಂತ ಆಗ್ನೇಸ್ ಕಾಲೇಜಿನಲ್ಲಿ ವಾರ್ಷಿಕ ಕ್ರಿಸ್ಮಸ್ ದತ್ತಿ ಕಾರ್ಯಕ್ರಮ “ನವಿದಾದ್”: ಕ್ಯಾರೋಲ್ಸ್ , ನೃತ್ಯಗಳು, ಲೈವ್ ಬ್ಯಾಂಡ್ ಪ್ರದರ್ಶನ

24/12/2025, 16:01

ಮಂಗಳೂರು(reporterkarnataka.com): ಸಂತ ಆಗ್ನೇಸ್ ಕಾಲೇಜಿನ (ಸ್ವಾಯತ್ತ) ವಾರ್ಷಿಕ ಕ್ರಿಸ್ಮಸ್ ದತ್ತಿ ಕಾರ್ಯಕ್ರಮವಾದ ನವಿದಾದ್ ಜರಗಿತು.
ಕಾಲೇಜು ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಂತರ ಜಿಲ್ಲಾ ಮಟ್ಟದ ಕ್ಯಾರಲ್ಸ್ ಗಾಯನ ಸ್ಪರ್ಧೆಯಾದ ‘ಕ್ಯಾರೋಲ್ ಕ್ಲಾಶ್’ ನಡೆಯಿತು. ಈ ಗಾಯನ ಸ್ಪರ್ಧೆಗೆ ಮೂರು ವಿಭಾಗಗಳು ಇದ್ದವು. ೩ – ೧೦ ವರ್ಷಗಳು, ೧೧ – ೧೫ ವರ್ಷಗಳು ಮತ್ತು ೧೫ ವರ್ಷಕ್ಕಿಂತ ಮೇಲ್ಪಟ್ಟವರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಲ್ವಿನ್ ಮ್ಯೂಸಿಕಲ್ ನ ಸಂಸ್ಥಾಪಕ ಮತ್ತು ಬ್ಯಾಂಡ್ ಚರಿತ್ರದ ಸ್ಥಾಪಕ ಸದಸ್ಯ ಲಾಯ್ ಸಲ್ಡಾನಾ ಆಗಮಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ಅವರು ಕಾಲೇಜಿನ ಹಿರಿಮೆಯನ್ನು ಶ್ಲಾಘಿಸಿದರು ಮತ್ತು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ನಿಧಿ ಸಂಗ್ರಹಿಸಿ ನಿರ್ಗತಿಕ ಕುಟುಂಬಕ್ಕೆ ಮನೆ ನಿರ್ಮಿಸಲು ಸಹಾಯ ಮಾಡುವ ಕಾರ್ಯವನ್ನು ಕೊಂಡಾಡಿದರು.
ಪ್ರಾಂಶುಪಾಲರಾದ ಸಿಸ್ಟರ್ ಡಾ. ವೆನಿಸ್ಸಾ ಎ.ಸಿ ತಮ್ಮ ಸಂದೇಶದಲ್ಲಿ ದತ್ತಿ ನಿಧಿಗೆ ಉದಾರವಾಗಿ ದಾನ ನೀಡಿದ ಸರ್ವರಿಗೂ ಅಭಿನಂದನೆ ಸಲ್ಲಿಸಿದರು ಮತ್ತು ೨೦೨೫ ರ ಸಾಲಿನ ಫಲಾನುಭವಿಯಾಗಿ ಸಂತ ಆಗ್ನೇಸ್ ಕಾಲೇಜಿನ ಒಂಟಿ ಪೋಷಕ ಮತ್ತು ಬೋಧಕೇತರ ಸಿಬ್ಬಂದಿಯಾದ ಶ್ರೀಮತಿ ಅನುಷಾ ಅವರು ಆಯ್ಕೆ ಆಗಿರುವುದನ್ನು ಘೋಷಿಸಿದರು.
ಕಾರ್ಯಕ್ರಮದ ಅಂಗವಾಗಿ ಕ್ಯಾರೋಲ್ಸ್ , ನೃತ್ಯಗಳು, ಲೈವ್ ಬ್ಯಾಂಡ್ ಪ್ರದರ್ಶನ , ಸಾಮರಸ್ಯ ಕ್ರಿಸ್ಮಸ್ ಪ್ಲೇ ಮುಂತಾದ ನಾನಾ ಮನೋರಂಜನಾ ಕಾರ್ಯಕ್ರಮಗಳು, ನಾನಾ ರೀತಿಯ ಆಟಗಳು, ಕರಕುಶಲ ವಸ್ತುಗಳ ಮಳಿಗೆಗಳು , ರುಚಿಕರವಾದ ಆಹಾರ ಮಳಿಗೆಗಳು ಗಮನ ಸೆಳೆಯಿತು. ವಿದ್ಯಾರ್ಥಿಗಳಾದ ದಿಯಾ ಶಂಕರ್, ಸಾನ್ವಿ ಮತ್ತು ಆಗ್ನಸ್ ಪ್ರಿನ್ಸ್ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು