2:35 PM Thursday3 - July 2025
ಬ್ರೇಕಿಂಗ್ ನ್ಯೂಸ್
ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ…

ಇತ್ತೀಚಿನ ಸುದ್ದಿ

ಆಂಜೆಲೊರ್ ಸೆಕ್ಯುಲರ್ ಫ್ರಾನ್ಸಿಸ್ಕನ್ ಸಭೆಯ 7ನೇ ವಾರ್ಷಿಕ ಹಬ್ಬ: ಪವಿತ್ರಾ ಪೂಜಾ ಬಲಿದಾನ ಅರ್ಪಣೆ

12/10/2024, 18:18

ಮಂಗಳೂರು(reporterkarnataka com): ಆಂಜೆಲೊರ್ ಸೆಕ್ಯುಲರ್ ಫ್ರಾನ್ಸಿಸ್ಕನ್ ಸಭೆಯ ಸದಸ್ಯರು ಅಕ್ಟೋಬರ್ 5 ರಂದು ಸಂಜೆ ತಮ್ಮ ಸಭೆಯ 7ನೇ ವಾರ್ಷಿಕ ಹಬ್ಬವನ್ನು ಆಚರಿಸಿದರು. ದೇವರಿಗೆ ಸ್ತುತಿ ಸಲ್ಲಿಸಿ ಪವಿತ್ರಾ ಪೂಜಾ ಬಲಿದಾನ ಅರ್ಪಿಸಿ ಚರ್ಚ್ ಸಭಾ ಮಂದಿರದಲ್ಲಿ ಚಿಕ್ಕ ಕಾರ್ಯಕ್ರಮ ನಡೆಸಿದರು. ಆಂಜೆಲೊರ್ ಚರ್ಚಿನ ಪ್ರಧಾನ ಗುರು ವಂದನೀಯ ಫೆಡ್ರಿಕ್ ಮೊಂತೆರೊರವರು ಅಧ್ಯಕ್ಷತೆ ವಹಿಸಿದರು. ಸೆಕ್ಯುಲರ್ ಫ್ರಾನ್ಸಿಸ್ಕನ್ ಸಭೆಯ ಪ್ರಾಂತೀಯಾ ಸಹಾಯಕರಾದ ವಂದನೀಯ ಪ್ರಕಾಶ್ ಲೋಬೊ ಹಾಗೂ ಚರ್ಚಿನ ಸಹಾಯಕ ಗುರು ವಂದನೀಯ ಸ್ಟೇನಿ ಲೋಬೊ, ಆಂಜೆಲೊರ್ ಚರ್ಚಿನ ಉಪಾಧ್ಯಕ್ಷ ಸಹೋದರ ಪಾವ್ಲ್ ರೊಡ್ರಿಗಸ್, ಕಾರ್ಯದರ್ಶಿ ಸಹೋದರಿ ಲೋಲಿನಾ ಡಿ’ಸೋಜ , 21 ಆಯೋಗಗಳ ಸಂಚಾಲಕಿ ಸಹೋದರಿ ರೆನಿಟಾ ಮಿನೇಜಸ್, ಪ್ರಾಂತೀಯ ಖಜಾಂಚಿ ಸಹೋದರ ಆಲ್ವಿನ್ ಮೊಂತೆರೊ ಹಾಗೂ ಪ್ರತಿನಿಧಿ ಅತಿಥಿಗಳಾಗಿದ್ದರು.
ಅಧ್ಯಕ್ಷೆ ಸಹೋದರಿ ಸಿಂತಿಯಾ ರುಜಾರಿಯೊ ಸ್ವಾಗತಿಸಿದರು. ಕಾರ್ಯದರ್ಶಿ ಸಹೋದರಿ ಸುನೀತಾ ಡಿ’ಸೋಜ ವಾರ್ಷಿಕ ವರದಿ ವಾಚಿಸಿದರು. ಮನೋರಂಜನ ಕಾರ್ಯಕ್ರಮದೊಡನೆ ದೇವರನ್ನು ಹರಸಿ ಕಾರ್ಯಕ್ರಮ ಕೊನೆಗೊಂಡಿತು. ಸಹೋದರಿ ಸವಿತಾ ಫೆಲ್ಸಿ ರೊಡ್ರಿಗಸ್ ಕಾರ್ಯ ನಿಯೋಜಿಸಿದರು. ಸಹೋದರ ಡೆನಿಸ್ ಡಿ’ಸೋಜ ಧನ್ಯವಾದ ಸಮರ್ಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು