10:49 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಅಹಲ್ಯಾಬಾಯಿ ಹೋಳ್ಕರ್ ಅಖಂಡ ರಾಷ್ಟ್ರ ತಪಸ್ವಿನಿ: ಲೇಖಕಿ ಮೇಘಾ ಪ್ರಮೋದ್

01/06/2025, 15:18

ಬೆಂಗಳೂರು(reporterkarnataka.com): ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ರಾಷ್ಟ್ರದ ಅಖಂಡತೆಯನ್ನು ನಿರ್ಮಿಸುವುದರಲ್ಲಿ ಪಾತ್ರವಹಿಸಿದ ಅಖಂಡ ರಾಷ್ಟ್ರ ತಪಸ್ವಿನಿ ಎಂದು ಲೇಖಕಿ ಮೇಘಾ ಪ್ರಮೋದ್ ಹೇಳಿದರು.
ಬಸವನಗುಡಿಯ ಅಬಲಾಶ್ರಮದಲ್ಲಿ ನಡೆದ ಮಂಥನ ಶಂಕರಪುರ ವತಿಯಿಂದ ‘ಅಖಂಡ ರಾಷ್ಟ್ರ ತಪಸ್ವಿನಿ ಅಹಲ್ಯಾಬಾಯಿ ಹೋಳ್ಕರ್’ ಪುಸ್ತಕದ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪುನರುತ್ಥಾನಕ್ಕಾಗಿ ಮಹತ್ವದ ಕೊಡುಗೆ ನೀಡಿದ ಅಹಲ್ಯಾಬಾಯಿ ಹೋಳ್ಕರ್ ಅವರ ಕುರಿತು ನಮ್ಮ ಪಠ್ಯಪುಸ್ತಕಗಳು ಕಡೆಗಣಿಸಿವೆ. ಆದರೆ ರಾಷ್ಟ್ರದ ಸರ್ವಾಂಗೀಣ ಉನ್ನತಿಗಾಗಿ ಹಲವು ಮಜಲುಗಳಲ್ಲಿ ಕೊಡುಗೆ ನೀಡಿದ ದಕ್ಷ ಆಡಳಿತಗಾರ್ತಿ, ರಾಜನೀತಿತಜ್ಞೆ, ಲೋಕಮಾತೆ, ಪುಣ್ಯಶ್ಲೋಕಿ ಅಹಲ್ಯಾಬಾಯಿ ಹೋಳ್ಕರ್ ಎಂದರು.


ಅಹಲ್ಯಾ ಬಾಯಿ ಹೋಳ್ಕರ್ ಅವರ ಆಡಳಿತದ ಅವಧಿಯಲ್ಲಿ ಬ್ರಿಟಿಷರಾದಿಯಾಗಿ, ನಾಡಿನೊಳಗಿನ ಅನೇಕ ಮತಾಂಧರೂ ತಮ್ಮ ರಾಜಕೀಯ ಅಸ್ತಿತ್ವವನ್ನು ಪಡೆಯುವುದಕ್ಕೆ ಪ್ರಯತ್ನಿಸುತ್ತಿದ್ದರು.‌ ಆದರೆ ಚಾಣಾಕ್ಷ ಅಹಲ್ಯಾ ಬಾಯಿ ಹೋಳ್ಕರ್ ಅವರಿಗೆ ಶತ್ರುಬೋಧೆ ಬಹಳ ಚೆನ್ನಾಗಿತ್ತು. ಟಿಪ್ಪುವನ್ನು ನಂಬಿಕೆಗೆ ಅನರ್ಹನಾದ ವ್ಯಕ್ತಿ ಎಂದೂ, ಬ್ರಿಟಿಷರ ಕುತಂತ್ರದ ಬಗ್ಗೆ ಎಚ್ಚರಿಕೆ ವಹಿಸಬೇಕೆಂದೂ ತಿಳಿಸಿದ್ದರು ಎಂದು ನುಡಿದರು.
ಅಂದಿನ ಕಾಲದಲ್ಲೇ ಮಹಿಳೆಯರ ಉತ್ಕೃಷ್ಟ ಜೀವನಕ್ಕಾಗಿ ಬಾಲ್ಯ ವಿವಾಹ ರದ್ಧತಿ, ಮಹಿಳಾ ಸೇನೆ ಮತ್ತು ಅದರಲ್ಲಿ ವಿಧವೆಯರ ಸಹಭಾಗಿತ್ವ, ಗುಡಿ ಕೈಗಾರಿಕೆಗಳಿಗೆ ಮಹತ್ವ, ಮಾಹೇಶ್ವರಿ ಸೀರೆಗಳ ತಯಾರಿಕೆ ಮುಂತಾದವುಗಳಿಗೆ ಪ್ರೋತ್ಸಾಹ ನೀಡಿದರು ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರದ ಉದ್ದಗಲಕ್ಕೂ ಅನೇಕ ತೀರ್ಥಕ್ಷೇತ್ರಗಳ ನಿರ್ಮಾಣ, ಪುನರುಜ್ಜೀವನ, ಗಂಗಾಜಲ ವಿತರಣೆ, ಸ್ವಾವಲಂಬಿ ಆರ್ಥಿಕತೆಗೆ ಒತ್ತು ನೀಡಿ ಎಲ್ಲಾ ಸೇವಾಕಾರ್ಯಗಳಿಗೆ ರಾಜ್ಯದ ಬೊಕ್ಕಸದ ಹಣವನ್ನು ಬಳಸದೆ ಸ್ವಂತದ್ದೇ ಹಣ ಬಳಸಿ ಅಹಲ್ಯಾಬಾಯಿ ಹೋಳ್ಕರ್ ಎಲ್ಲಾ ತಲೆಮಾರುಗಳಿಗೂ ಮಾದರಿಯಾಗಿದ್ದಾರೆ ಎಂದು ನುಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು