2:10 AM Monday15 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ಅಧಿಕಾರ ವಹಿಸಿದ ಮೊದಲ ದಿನವೇ ಕಾಲ್ ಫಾರ್ವಡ್ ಮಾಡಿಟ್ಟ ನೂತನ ಮೇಯರ್!: ಸಾರ್ವಜನಿಕರ ಸಂಪರ್ಕಕ್ಕೆ ಅಲಭ್ಯ!!

09/09/2022, 17:40

ಮಂಗಳೂರು(reporterkarnataka.com): ಹಲವು ಅನಿಶ್ಚಿತತೆಗಳನ್ನು ದಾಟಿ ಮಂಗಳೂರಿಗೆ ನೂತನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ನಡೆದಿದೆ. ಆದರೆ ನೂತನ ಮೇಯರ್ ಅವರನ್ನು ಮೊದಲ ದಿನ ಸಂಪರ್ಕಿಸಲು ನಾಗರಿಕರು ಯತ್ನಿಸಿದರೆ ಅವರು ಸಿಗಲಿಲ್ಲ. ಅವರು ಮೊಬೈಲ್ ಕಾಲ್ ಗಳನ್ನು ಫಾರ್ವಡ್ ಆಪ್ಶನ್ ನಲ್ಲಿಟ್ಟರೆ, ಇತ್ತ 5 ಗಂಟೆ ವರೆಗೂ ನಗರದ ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರಪಾಲಿಕೆ ಕಚೇರಿಗೂ ಬರಲಿಲ್ಲ.

ಪಾಲಿಕೆಯ ನೇತ್ರಾವತಿ ಸಭಾಂಗಣದಲ್ಲಿ ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿಯ ಜಯಾನಂದ ಅಂಚನ್ ಮತ್ತು ಪೂರ್ಣಿಮಾ ಅವರು ಆಯ್ಕೆಗೊಂಡಿದ್ದರು. ಮಧ್ಯಾಹ್ನ 12 ಗಂಟೆಗೆ ಮೇಯರ್ ಚುನಾವಣೆಯ ಪ್ರಕ್ರಿಯೆ ಆರಂಭಗೊಂಡಿತ್ತು. ಸುಮಾರು 1 ಗಂಟೆಯ ವೇಳೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತ್ತು. ನಂತರ ಅಭಿನಂದನೆಗಳ ಪರ್ವ ಆರಂಭವಾಯಿತು. ಮಂಗಳೂರು ಉತ್ತರ ಮತ್ತು ದಕ್ಷಿಣದ ಶಾಸಕರಾದ ಡಾ. ವೈ.ಭರತ್ ಶೆಟ್ಟಿ ಹಾಗೂ ಡಿ. ವೇದವ್ಯಾಸ ಕಾಮತ್ ಅವರ ಜತೆ ಫೋಟೋ ಸೆಷನ್ ನಡೆಯಿತು. ವಿಜಯದ ಭರ್ಜರಿ ಊಟವೂ ನಡೆಯಿತು. ನಂತರ ನೂತನ ಮೇಯರ್ ಕಾಣಸಿಗಲಿಲ್ಲ. ಅವರ ಮೊಬೈಲ್ ಸಂಖ್ಯೆ 9448026583 ಕರೆ ಮಾಡಿದರೆ ಕಾಲ್ ಫಾರ್ವರ್ಡ್ ಮಾಡಲಾಗಿದೆ ಎಂಬ ಉತ್ತರ ಬರುತ್ತಿತ್ತು. ಇತ್ತ ಅವರು ಪಾಲಿಕೆಯಲ್ಲಿರುವ ಕಚೇರಿಗೂ 5 ಗಂಟೆ ತನಕ ಬರಲಿಲ್ಲ. ಹಾಗಾದರೆ ಮೇಯರ್ ಎಲ್ಲಿ ಹೋದರೂ ಎಂಬ ಪ್ರಶ್ನೆಗೆ ಉತ್ತರವೂ ಸಿಕ್ಕಿದೆ. ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರ ಕಚೇರಿಗೆ ಮೇಯರ್ ಹೋಗಿದ್ದರು ಎನ್ನಲಾಗಿದೆ. ಮೇಯರ್ ಎಲ್ಲಿಗೂ ಹೋಗಲಿ, ಆದರೆ ಅವರ ಮೊಬೈಲ್ ಕಾಲ್ ಅನ್ನು ಫಾರ್ವರ್ಡ್ ಮಾಡಿ ಇಡಬಾರದು ಎನ್ನುವುದು ಸಾರ್ವಜನಿಕರ ಅನಿಸಿಕೆ.

ಇತ್ತೀಚಿನ ಸುದ್ದಿ

ಜಾಹೀರಾತು