ಇತ್ತೀಚಿನ ಸುದ್ದಿ
ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ವಾಹನ ಡಿಕ್ಕಿ: ಕಾಡುಕೋಣ ಕಾಲು ಮುರಿತ
20/02/2026, 20:23
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಪ್ರದೇಶದಲ್ಲಿ ಮೇವು ಅರಸಿ ಬಂದ ಕಾಡು ಕೋಣಕ್ಕೆ ವಾಹನವೊಂದು ದಿಕ್ಕಿಯಾದ ಪರಿಣಾಮ ಕಾಡುಕೋಣ(bison) ಕಾಲು ಮುರಿದು ಗಂಭೀರ ಗಾಯಗೊಂಡರೆ, ಡಿಕ್ಕಿ ಹೊಡೆದ ವಾಹನ ಮುಂಭಾಗ ಜಖಂಗೊಂಡಿದೆ.

ಕಾಫಿ ತೋಟದಿಂದ ಏಕಾಏಕಿ ಅಡ್ಡ ಬಂದ ಕಾರಣ ಕಾಡುಕೋಣದ ಕಾಲು ಮುರಿದಿದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ವಾಹನದಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳು ಆಗಿದ್ದು ಪ್ರಾಥಮಿಕ ಚಿಕಿತ್ಸೆ ಸಿದ್ದಾಪುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.













