8:49 PM Tuesday25 - August 2026
ಬ್ರೇಕಿಂಗ್ ನ್ಯೂಸ್
Chikkamagaluru | ಕಾಫಿನಾಡಿನ ನೂರಾರು ಬಿಜೆಪಿ, ಭಜರಂಗದಳ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ

ಇತ್ತೀಚಿನ ಸುದ್ದಿ

ಸಿಎಂ ಬೊಮ್ಮಾಯಿಯ ‘ಬೊಂಬಾಯಿ’ ಅಂದ್ರು ಕೇಂದ್ರ ಗೃಹ ಸಚಿವರು!; ರಾಜ್ಯ ಗೃಹ ಸಚಿವ ಅರಗರ ‘ಅಗರ’ ಅಂದ್ರು ಸಚಿವ ಭೈರತಿ !!

02/09/2021, 21:45

ದಾವಣಗೆರೆ(reporterkarnataka.com): ಒಬ್ರು ಬೊಂಬಾಯಿ ಅಂದ್ರು. ಇನ್ನೊಬ್ಬರು ಅಗರ ಅಂದ್ರು. ಜನ ಮಾತ್ರ ಮುಸಿ ಮುಸಿ ನಕ್ಕು ಸಮ್ಮನಾದರು.

ಇದು ಇವತ್ತು ಬೆಣ್ಣೆನಗರಿ ದಾವಣಗೆರೆಯ ಜಿಎಂಐಟಿಯಲ್ಲಿ ನಡೆದ ಸ್ವಾರಸ್ಯ ಘಟನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದಿದ್ರು. ಗೃಹ ಸಚಿವರು ಹಲವು ಉದ್ಘಾಟನೆಗಳನ್ನು ನೆರವೇರಿಸಿದರು. ನಂತರ ಮಾತಾಡಿದ ಅಮಿತ್ ಶಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರು ಹೇಳುವಾಗ ತಪ್ಪಿ ‘ಬೊಂಬಾಯಿ’ ಅಂತ ಹೇಳಿ ಬಿಟ್ರು. ಇದು ನೆರೆದ ಜನರಲ್ಲಿ ನಗು ತರಿಸಿತು. ಹೆಚ್ಚಿನವರು ನಗುವನ್ನು ಅದುಮಿಟ್ಟುಕೊಂಡು ಮುಸಿ ಮುಸಿ ನಕ್ಕರು. 

ಹಾಗೆ ಸ್ವಾಗತ ಭಾಷಣ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ರಾಜ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹೆಸರು ಹೇಳಲು ತಡವರಿಸಿದರು. ” ಅಗರ… ಅಗರ.. ಎಂದು ಹೇಳಿ ಭೈರತಿ  ತಡವರಿಸಿದರು‌. ಇದು ಕೂಡ ಜನರಿಗೆ ಪುಕ್ಕಟೆ ಮನರಂಜನೆ ನೀಡಿತು.

ಅಮಿತ್ ಶಾ ಅವರು ಗುಜರಾತಿನವರು ಅವರಿಗೆ ಇಲ್ಲಿನ ಹೆಸರು ಉಚ್ಚರಣೆ ಮಾಡುವುದು ಕಷ್ಟವಾದೀತು. ಆದರೆ ಇಲ್ಲಿಯವರೇ ಆದ ಭೈರತಿಗೇನು ಕಷ್ಟ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ದಶಕಗಳ ಕಾಲ ಬಿಜೆಪಿಯಲ್ಲಿ ಶಾಸಕರಾಗಿದ್ದ ಅರಗ ಜ್ಞಾನೇಂದ್ರ ಅವರಿಗೆ ಕೊನೆಗೂ ಸಚಿವ ಸ್ಥಾನ ದೊರಕಿ ಆಯಕಟ್ಟಿನ ಖಾತೆ ದೊರಕಿದೆ. ಆದರೆ ಅವರದೇ ಪಕ್ಷದ ಸಚಿವರಿಗೆ ಮಾತ್ರ ಅವರ ಹೆಸರು ಗೊತ್ತಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು