8:10 PM Sunday24 - August 2025
ಬ್ರೇಕಿಂಗ್ ನ್ಯೂಸ್
Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಟ್ಟು ಗುಳ್ಳ ನಂಟು ಉಡುಪಿ ಮಠಕ್ಕೂ ಉಂಟು: ವಾದಿರಾಜ ತೀರ್ಥರು ಬದನೆಗೆ ಹೆಸರಿಟ್ಟರಂತೆ!

ಇತ್ತೀಚಿನ ಸುದ್ದಿ

ಸಿಎಂ ಬೊಮ್ಮಾಯಿಯ ‘ಬೊಂಬಾಯಿ’ ಅಂದ್ರು ಕೇಂದ್ರ ಗೃಹ ಸಚಿವರು!; ರಾಜ್ಯ ಗೃಹ ಸಚಿವ ಅರಗರ ‘ಅಗರ’ ಅಂದ್ರು ಸಚಿವ ಭೈರತಿ !!

02/09/2021, 21:45

ದಾವಣಗೆರೆ(reporterkarnataka.com): ಒಬ್ರು ಬೊಂಬಾಯಿ ಅಂದ್ರು. ಇನ್ನೊಬ್ಬರು ಅಗರ ಅಂದ್ರು. ಜನ ಮಾತ್ರ ಮುಸಿ ಮುಸಿ ನಕ್ಕು ಸಮ್ಮನಾದರು.

ಇದು ಇವತ್ತು ಬೆಣ್ಣೆನಗರಿ ದಾವಣಗೆರೆಯ ಜಿಎಂಐಟಿಯಲ್ಲಿ ನಡೆದ ಸ್ವಾರಸ್ಯ ಘಟನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದಿದ್ರು. ಗೃಹ ಸಚಿವರು ಹಲವು ಉದ್ಘಾಟನೆಗಳನ್ನು ನೆರವೇರಿಸಿದರು. ನಂತರ ಮಾತಾಡಿದ ಅಮಿತ್ ಶಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರು ಹೇಳುವಾಗ ತಪ್ಪಿ ‘ಬೊಂಬಾಯಿ’ ಅಂತ ಹೇಳಿ ಬಿಟ್ರು. ಇದು ನೆರೆದ ಜನರಲ್ಲಿ ನಗು ತರಿಸಿತು. ಹೆಚ್ಚಿನವರು ನಗುವನ್ನು ಅದುಮಿಟ್ಟುಕೊಂಡು ಮುಸಿ ಮುಸಿ ನಕ್ಕರು. 

ಹಾಗೆ ಸ್ವಾಗತ ಭಾಷಣ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ರಾಜ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹೆಸರು ಹೇಳಲು ತಡವರಿಸಿದರು. ” ಅಗರ… ಅಗರ.. ಎಂದು ಹೇಳಿ ಭೈರತಿ  ತಡವರಿಸಿದರು‌. ಇದು ಕೂಡ ಜನರಿಗೆ ಪುಕ್ಕಟೆ ಮನರಂಜನೆ ನೀಡಿತು.

ಅಮಿತ್ ಶಾ ಅವರು ಗುಜರಾತಿನವರು ಅವರಿಗೆ ಇಲ್ಲಿನ ಹೆಸರು ಉಚ್ಚರಣೆ ಮಾಡುವುದು ಕಷ್ಟವಾದೀತು. ಆದರೆ ಇಲ್ಲಿಯವರೇ ಆದ ಭೈರತಿಗೇನು ಕಷ್ಟ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ದಶಕಗಳ ಕಾಲ ಬಿಜೆಪಿಯಲ್ಲಿ ಶಾಸಕರಾಗಿದ್ದ ಅರಗ ಜ್ಞಾನೇಂದ್ರ ಅವರಿಗೆ ಕೊನೆಗೂ ಸಚಿವ ಸ್ಥಾನ ದೊರಕಿ ಆಯಕಟ್ಟಿನ ಖಾತೆ ದೊರಕಿದೆ. ಆದರೆ ಅವರದೇ ಪಕ್ಷದ ಸಚಿವರಿಗೆ ಮಾತ್ರ ಅವರ ಹೆಸರು ಗೊತ್ತಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು