10:42 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಕುಶಾಲನಗರದಲ್ಲಿ ಅದ್ದೂರಿ ಹನುಮ ಜಯಂತಿ ಆಚರಣೆ: ಅಬ್ಬರಿಸಿ ಬೊಬ್ಬಿರಿಸಿದ ದಶ ಮಂಟಪಗಳು

02/12/2025, 22:41

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಕೊಡಗು ಜಿಲ್ಲೆ ಕುಶಾಲನಗರ ಪಟ್ಟಣ್ಣದ ಕಳೆದ 40 ವರ್ಷಗಳಿಂದ ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಸ್ಥಾನ ಸೇವಾ ಟ್ರಸ್ಟ್ ಆಚರಿಸಿಕೊಂಡು ಬರುತ್ತಿರುವ ಹನುಮ ಜಯಂತಿ ಅದ್ದೂರಿಯಾಗಿ ನಡೆಯಿತು. ಕಳೆದ ಎರಡು ದಿನಗಳಿಂದ ಹನುಮ ಜಯಂತಿ ಕಳೆಗಟ್ಟಿದ್ದ ಪಟ್ಟಣದ ರಥ ಬೀದಿ ಅದ್ದೂರಿ ಮಂಟಪಗಳ ಮೆರವಣಿಗೆಗೆ ಸಾಕ್ಷಿಯಾಯಿತು. ಆಂಜನೇಯನ ಸಾಹಸ, ಶಕ್ತಿ ಹೊಂದಿರುವ ವಿವಿಧ ಕಥಾಹಂದರದ ಹೊತ್ತು ಸಾಗಿದ ಮಂಟಪಗಳಲ್ಲಿ ಡಿಜೆ, ಆಕರ್ಷಕ ವಿದ್ಯುತ್ ಅಲಂಕಾರಕ್ಕೆ ಸಾರ್ವಜನಿಕರು ಫಿದಾ ಆದರು, ಯುವ ಸಮೂಹ ಕುಣಿದು ಕುಪ್ಪಲಿಸಿ ಸಂಭ್ರಮಿಸಿದರು.


ಕೂಡಿಗೆ, ಮುಳ್ಳುಸೋಗೆ, ಕೊಪ್ಪ, ಮಾದಪಟ್ಟಣ, ಗುಡ್ಡೆಹೊಸೂರು ಭಾಗದಿಂದ ಮಂಟಪಗಳು ಸಂಜೆ 7 ಗಂಟೆ ಸುಮಾರಿಗೆ ಪಟ್ಟಣ ಪ್ರವೇಶಿಸಿದವು. ಇಲ್ಲಿನ ಗಣಪತಿ ದೇವಾಲಯ ಆವರಣದಲ್ಲಿ ಪ್ರದರ್ಶನ ನೀಡಿದ್ದು, ಸಾರ್ವಜನಿಕರು ಮೂಕ ವಿಸ್ಮಿತರಾದರು. ಪ್ರತಿ ವರ್ಷದಂತೆ ಈ ಭಾರಿಯೂ ಪಕ್ಕದ ಜಿಲ್ಲೆ ಮೈಸೂರಿನ ಪಿರಿಯಾಪಟ್ಟಣ ತಾಲ್ಲೂಕು, ಹಾಸನ ಭಗದಿಂದಲೂ ಅದ್ದೂರಿ ಉತ್ಸವಕ್ಕೆ ಸಾಕ್ಷಿಯಾದರು.

ಇತ್ತೀಚಿನ ಸುದ್ದಿ

ಜಾಹೀರಾತು