1:01 PM Saturday29 - August 2026
ಬ್ರೇಕಿಂಗ್ ನ್ಯೂಸ್
ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ

ಇತ್ತೀಚಿನ ಸುದ್ದಿ

ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ ಜನರ ಮೆಚ್ಚುಗೆ

04/11/2025, 13:04

ಬೆಂಗಳೂರು(reporterkarnataka.com): ಈ ಹಿಂದೆ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ದಿನಗಳಲ್ಲಷ್ಟೇ ದೀಪಗಳಿಂದ ಅಲಂಕರಿಸಲ್ಪಡುತ್ತಿದ್ದ ವಿಧಾನ ಸೌಧ, ಈಗ ಪ್ರತಿನಿತ್ಯ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಸ್ಪೀಕರ್ ಯು.ಟಿ. ಖಾದರ್ ಅವರ ಮುಂದಾಳತ್ವದಲ್ಲಿ ಈ ಶಕ್ತಿಕೇಂದ್ರವು ಈಗ ಹೊಸ ಟೂರಿಸ್ಟ್ ಸ್ಪಾಟ್ ಆಗಿ ರೂಪಾಂತರಗೊಂಡಿದೆ.
ಪ್ರತಿ ಬಾರಿ ದೀಪಾಲಂಕಾರಕ್ಕೆ ಸುಮಾರು ₹20,000 ವೆಚ್ಚವಾಗುತ್ತಿದ್ದರೂ, ಈಗ ಅಳವಡಿಸಿದ ಎಲ್‌ಇಡಿ ಲೈಟಿಂಗ್‌ನಿಂದ ಕಡಿಮೆ ವೆಚ್ಚದಲ್ಲಿ ಪ್ರತಿನಿತ್ಯ ಬೆಳಗುತ್ತಿದೆ ವಿಧಾನಸೌಧ. ಮಂಗಳೂರು ಮೂಲದ ತಂತ್ರಜ್ಞರಿಂದ ಅಳವಡಿಸಲಾದ ಈ ಎಲ್‌ಇಡಿ ದೀಪಗಳು ವಿಧಾನ ಸೌಧವನ್ನು ರಾತ್ರಿ ವೇಳೆಯಲ್ಲಿ ಆಕರ್ಷಕವಾಗಿ ಹೊಳೆಯುವಂತೆ ಮಾಡಿವೆ.
ರಾತ್ರಿ 11 ಗಂಟೆಯವರೆಗೆ ಸೌಧದ ಸೌಂದರ್ಯವನ್ನು ಕಾಣಲು ಜನರು ನಗರದೆಲ್ಲೆಡೆಯಿಂದ ಹರಿದು ಬರುತ್ತಿದ್ದಾರೆ. “ದಿನದ ಕೆಲಸ ಮುಗಿಸಿ ಬಂದಾಗ ಸಂಜೆ 7 ಗಂಟೆ ಆಗುತ್ತದೆ. ಆಗ ಬೆಳಕು ನಂದಿಸಿದರೆ ನೋಡುವ ಅವಕಾಶವೇ ಸಿಗುವುದಿಲ್ಲ. ಕನಿಷ್ಠ 11 ಗಂಟೆವರೆಗೆ ದೀಪಗಳು ಬೆಳಗಿರಬೇಕು,” ಎಂದು ಬೆಂಗಳೂರಿನ ಪ್ರಶಾಂತ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಜನರ ಸಂಚಾರ ಹೆಚ್ಚಾದ ಹಿನ್ನೆಲೆ ಟ್ರಾಫಿಕ್ ಪೊಲೀಸರಿಗೆ ಹೊಸ ಸವಾಲು ಎದುರಾಗಿದೆ. ಬೆಳಕು ನಂದಿಸಲು ರಾತ್ರಿ 8 ಗಂಟೆಗೆ ಸಮಯ ನಿಗದಿ ಮಾಡುವ ಸಲಹೆ ನೀಡಲಾಗಿದ್ದರೂ, ಸಾರ್ವಜನಿಕರು ಬೆಳಕನ್ನು 11 ಗಂಟೆಯವರೆಗೆ ಮುಂದುವರಿಸಲು ಒತ್ತಾಯಿಸುತ್ತಿದ್ದಾರೆ.



ಈ ಬದಲಾವಣೆಯಿಂದ ವಿಧಾನ ಸೌಧ ಕೇವಲ ಶಕ್ತಿಕೇಂದ್ರವಾಗಿ ಉಳಿಯದೆ, ಬೆಂಗಳೂರಿನ ನೈಟ್ ಲೈಫ್‌ನ ಹೊಸ ಆಕರ್ಷಣೆಯಾಗಿ ಪರಿಣಮಿಸಿದೆ. ಜನರಲ್ಲಿ ಹೆಮ್ಮೆ ಮೂಡಿಸುವ ಈ ಪರಿವರ್ತನೆ ಸ್ಪೀಕರ್ ಯು.ಟಿ. ಖಾದರ್ ಅವರ ಹೊಸ ಶೈಲಿಯ ನಿರ್ವಹಣೆಯ ಫಲ ಎನ್ನುವ ಮಾತುಗಳೂ ಕೇಳಿ ಬರುತ್ತಿದೆ. ಜೊತೆಗೆ ರಾತ್ರಿ 11 ಗಂಟೆಯವರೆಗೂ ಅಲಂಕಾರದ ಬೆಳಕು ಮೂಡಿರಲಿ ಎನ್ನುವ ಸಲಹೆ ಜನ ಸಾಮಾನ್ಯರದ್ದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು