2:43 AM Wednesday19 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ಹಿರಿಯಡ್ಕ: ಸೆಪ್ಟೆಂಬರ್ 7ರಂದು ‘ಸಪ್ತಪದಿ’ ವಧು–ವರ ಅನ್ವೇಷಣೆ – 2025

04/09/2025, 12:51

ಹಿರಿಯಡ್ಕ(reporterkarnataka.com): ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ, ಹಿರಿಯಡ್ಕ ಇವರ ಮುಂದಾಳತ್ವದಲ್ಲಿ, RSB & BGSB ಸಪ್ತಪದಿ ವಿವಾಹ ಮಾಹಿತಿ ಕೇಂದ್ರ, ಬೆಂಗಳೂರು ಇವರ ಆಯೋಜನೆಯಲ್ಲಿ “ಸಪ್ತಪದಿ ವಧು–ವರ ಅನ್ವೇಷಣೆ – 2025” ಕಾರ್ಯಕ್ರಮವು ಸೆಪ್ಟೆಂಬರ್ 7ರಂದು ಬೆಳಗ್ಗೆ 9 ಗಂಟೆಯಿಂದ ಹಿರಿಯಡ್ಕ ಓಂತಿಬೆಟ್ಟುನ
ಶಿವಪುರ ಸುಬ್ಬಣ್ಣನಾಯಕ್ ಸಾರಸ್ವತ ಸಭಾ ಭವನ ನಡೆಯಲಿದೆ.
ಸಮಾಜದ ವಿವಾಹಾಪೇಕ್ಷಿ ವಧು–ವರರಿಗೆ ಪರಸ್ಪರ ಪರಿಚಯ ಹಾಗೂ ಮಾಹಿತಿಗಳ ವಿನಿಮಯಕ್ಕಾಗಿ ವೇದಿಕೆಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಭಾಗವಹಿಸಲು ಯಾವುದೇ ಶುಲ್ಕವಿಲ್ಲ. ನೋಂದಾವಣಾ ಅರ್ಜಿ 2 ಪ್ರತಿಗಳು ಹಾಗೂ 2 postcard ಗಾತ್ರದ ಭಾವಚಿತ್ರಗಳನ್ನು ಸಲ್ಲಿಸುವುದು ಕಡ್ಡಾಯ. ವಧು–ವರರ ಪೋಷಕರು ಕಡ್ಡಾಯವಾಗಿ ಹಾಜರಿರಬೇಕೆಂದು ಸಂಘದವರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಚಹಾ, ತಿಂಡಿ ಹಾಗೂ ಊಟದ ವ್ಯವಸ್ಥೆಯೂ ಕಲ್ಪಿಸಲಾಗಿದೆ.
ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದವರು:
– ಪ್ರತಿಮಾ ಪ್ರಭು ಕೋಂಟು – 9480566541

– ಮೋಹನ್ ನಾಯಕ್ ಶಿವಮೊಗ್ಗ – 9482736447
– ಶಿವರಾಮ್ ಪ್ರಭು ಆತ್ರಾಡಿ – 9448724073
– ಸುನೀಲ್ ಬೋರ್ಕರ್ ಪುತ್ತೂರು – 9686914639
– ಸರೋಜಿನಿ ಪ್ರಭು ಕೋಡಿಬೆಟ್ಟು – 9663394650
– ಎಂ.ಡಿ. ಪ್ರಭು ಬೆಂಗಳೂರು – 7019976058
– ಹರಿದಾಸ್ ಕಾಮತ್ ಕಾಂಥರಗುಂಡಿ – 9481748552
– ಶ್ರೀನಿಧಿ ಓಂತಿಬೆಟ್ಟು – 8277403845
– ಮೇಘ ನಾಗರಾಜ್ ನಾಯಕ್ ಕಾಜರಗುತ್ತು – 7676822949
ಭಾಗವಹಿಸುವವರು ಫೋಟೋ ಹೊಂದಿರುವ ಬಯೋಡೇಟಾವನ್ನು ನೋಂದಾವಣಾ ಅಧಿಕಾರಿಗಳಿಗೆ WhatsApp ಮುಖಾಂತರ ಕಳುಹಿಸಿ ನೋಂದಾವಣೆ ಖಚಿತಪಡಿಸಿಕೊಳ್ಳಬೇಕು. ನೋಂದಾವಣೆಯನ್ನು ಪರಿಚಿತ ಅಧಿಕಾರಿಯ ಮೂಲಕವೇ ಮಾಡಿಕೊಳ್ಳಬೇಕು, ಪ್ರತಿಯೊಬ್ಬರಿಗೂ ಕರೆ ಮಾಡುವ ಅವಶ್ಯಕತೆಯಿಲ್ಲ ಎಂದು ಹಿರಿಯಡ್ಕ ರಾಜಾಪುರ ಸಾರಸ್ವತ ಬ್ರಾಹ್ಮಣಸಂಘ ಪ್ರಕಟಣೆಯಲ್ಲಿ ತಿಳಿಸಿದೆ

ಇತ್ತೀಚಿನ ಸುದ್ದಿ

ಜಾಹೀರಾತು