6:40 PM Friday24 - April 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ: 10 ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ ತುಮಕೂರು: ಒಂದು ವಾರದ ಅಂತರದಲ್ಲಿ 32 ನವಿಲುಗಳು ಸಾವು; ತಾಪಮಾನ ಕಾರಣ? ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್…

ಇತ್ತೀಚಿನ ಸುದ್ದಿ

ಶಿವಳ್ಳಿ ಸಮುದಾಯದ ಸಾತ್ವಿಕ ಅಹಾರ ಸಂಸ್ಕೃತಿ ಇಷ್ಟ: ಪತ್ರಕರ್ತ ರವೀಂದ್ರ ಜೋಶಿ

21/08/2025, 22:26

ಮಂಗಳೂರು(reporterkarnataka.com): ಶಿವಳ್ಳಿ ನಂಬಿಕಸ್ತ ಸಮುದಾಯ, ವಿಶಿಷ್ಟ ಆಹಾರ ಸಂಸ್ಕೃತಿಯ ಶಿವಳ್ಳಿ ಬ್ರಾಹ್ಮಣರ ಖಾದ್ಯಗಳು ತುಂಬಾ ರುಚಿಕರ ಎಂದು ಸಾಹಿತಿ, ಪತ್ರಕರ್ತ ರವೀಂದ್ರ ಜೋಶಿ ಹೇಳಿದರು.
ನಗರದ ಕದ್ರಿ ಶ್ರೀಮಾತಾಕೃಪಾದಲ್ಲಿ ಶಿವಳ್ಳಿ ಸ್ಪಂದನ ಕದ್ರಿ ವಲಯದ ವತಿಯಿಂದ ನಡೆದ ಆಟಿ ಕೂಟ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಾತ್ವಿಕ ಆಹಾರದಿಂದ ಜನರಲ್ಲಿ ಸಾತ್ವಿಕತೆ ಹೆಚ್ಚುತ್ತದೆ. ಶಿವಳ್ಳಿ ಹೆಸರಿನ ಹೋಟೆಲ್‌ಗಳಲ್ಲಿ ಆಹಾರದಲ್ಲಿ ಮೋಸ ಇರೋದಿಲ್ಲ, ಹೊಟ್ಟೆಗೆ ಸಮಸ್ಯೆ ಆಗುವುದಿಲ್ಲ. ವಿಶಿಷ್ಟ ರುಚಿ ಇರುತ್ತವೆ. ಆದರೆ ಅಂತಹ ಹೋಟೆಲ್‌ಗಳು ಈಗ ನಶಿಸುತ್ತಿವೆ ಎಂದರು. ಸಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆದರೆ ಖಿನ್ನತೆ ಉಂಟಾಗುತ್ತದೆ. ಮಾನವ ಸಂಘಜೀವಿ ಇದೇ ರೀತಿಯ ಸಮುದಾಯ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಮಾನಸಿ, ದೈಹಿಕ ಆರೋಗ್ಯ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕದ್ರಿ ದೇವಸ್ಥಾನ ಅರ್ಚಕರಾದ ವೇದಮೂರ್ತಿ ಕೃಷ್ಣ ಅಡಿಗರು ಪ್ರವಚನ ನೀಡಿ, ಆಟಿ ತಿಂಗಳಿನಲ್ಲಿ ಮಹಿಳೆಯರು ಹೊಸ್ತಿಲು ಬರೆಯುವ ಕ್ರಮದಿಂದ ಪ್ರಾರಂಭಿಸಿ ತುಳುನಾಡಿನಲ್ಲಿ ಆಟಿ ತಿಂಗಳನ್ನು ವಿಶೇಷ ಕ್ರಮದಿಂದ ಆಚರಿಸುತ್ತಾರೆ. ವಿವಿಧ ಆಚರಣೆಗಳಿವೆ, ಇದಕ್ಕೆ ವೈಜ್ಞಾನಿಕ/ಶಾಸ್ತ್ರದ ಹಿನ್ನೆಲೆ ಇದೆ ಎಂದರು.
ಶಿವಳ್ಳಿ ಸ್ಪಂದನ ಮಂಗಳೂರು ತಾಲೂಕಿನ ಅಧ್ಯಕ್ಷ ವಾಸುದೇವ ಭಟ್, ಕಾರ್ಯದರ್ಶಿ ಕೃಷ್ಣ ಭಟ್, ಉಪಾಧ್ಯಕ್ಷ ರಾಮಚಂದ್ರ ಭಟ್ ಎಲ್ಲೂರು, ಆಡಳಿತ ಮಂಡಳಿಯ ಸದಸ್ಯ ನೋಡು ಶ್ರೀನಿವಾಸ ಆಚಾರ್, ಮಾಧ್ಯಮ ಸಲಹೆಗಾರ ಜಿತೇಂದ್ರ ಕುಂದೇಶ್ವರ, ಧಾರ್ಮಿಕ ಪರಿಷತ್‌ ಮಾಜಿ ಸದಸ್ಯ ಗಿರಿಪ್ರಕಾಶ್‌ ತಂತ್ರಿ, ಶಿವಳ್ಳಿ ತಾಲೂಕು ಮಹಿಳಾಘಟಕದ ಅಧ್ಯಕ್ಷೆ ರಮಾಮಣಿ, ವಲಯ ಅಧ್ಯಕ್ಷೆ ಗೀತ ಬೆಳ್ಳೆ, ಕಾರ್ಯದರ್ಶಿ ಶೀಲಾ ಜಯಪ್ರಕಾಶ, ಕೋಶಾಧಿಕಾರಿ ರವಿಕಾಂತ ಭಟ್ ಇದ್ದರು.
ಅನಂತ ಭಟ್ ಮತ್ತು ರಾಮಚಂದ್ರ ಭಟ್ ಎಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಆ ನಂತರ ಆಟಿ ತಿಂಗಳ ವಿಶೇಷ ಖಾದ್ಯ ವನ್ನು ತಯಾರಿಸಿದ ಮಹಿಳಾ ಸದಸ್ಯರನ್ನು ಸನ್ಮಾನಿಸಲಾಯಿತು. ಖಾದ್ಯಗಳನ್ನು ಎಲ್ಲಾ ಸದಸ್ಯರಿಗೆ, ಅತಿಥಿಗಳಿಗೆ ಉಣಬಡಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು