1:58 PM Sunday28 - June 2026
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ: ಪಲ್ಸ್ ಪೋಲಿಯೋ ಅಭಿಯಾನಕ್ಕೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ಟ್ರೆಕ್ಕಿಂಗ್ ವೇಳೆ ದುರಂತ: ಹೃದಯಾಘಾತದಿಂದ ಚಿತ್ರ ನಿರ್ಮಾಪಕ ಭಾ ಮಾ ಹರೀಶ್ ಪುತ್ರ… ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು ಮಂಗಳೂರಿನಲ್ಲೇ ಇದ್ದಿದ್ದರೆ ಶಿಕ್ಷಕನಾಗಿರುತ್ತಿದ್ದೆ: ಬಾಲಿವುಡ್ ಬಾದ್ ಶಾ ಶಾರುಖ್‌ ಖಾನ್ ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ…

ಇತ್ತೀಚಿನ ಸುದ್ದಿ

Chikkamagaluru | ಶೃಂಗೇರಿ: ತುಂಗಾ ನದಿ ಈಜಿ ದಡ ಹತ್ತಲು ಕಾಡಾನೆಗಳ ಪರದಾಟ

15/08/2025, 13:18

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಲೋ… ಮಗಾ… ಇಲ್ಲಿ ಹೈಟ್ ಇದೆ ಕಣೋ… ಹತ್ತಕ್ಕಾಗಲ್ಲ… ಆಕಡೆ ನೋಡೋಣ ಬಾ…
ಬೇಡ… ಬೇಡ… ಇಲ್ಲೂ ಬೇಡ… ಅಲ್ ಮುಂದಕ್ಕೆ ಹೋಗು…


ಇದು ನಾಡಿಗೆ ಬಂದ ಕಾಡಾನೆಗಳ ನಡುವೆ ನಡೆದ ಡೈಲಾಗ್. ಶೃಂಗೇರಿ ದೇವಸ್ಥಾನ ಸಮೀಪ ತುಂಗಾ ನದಿಯಲ್ಲಿ ಈಜಿ ದಡ ಹತ್ತಲು ಆನೆಗಳ ನಡೆಸಿದ ಪರದಾಟ ವಿಷಯವಿದು.
ಒಂದು ಗುಂಪು ಕಾಡಲ್ಲಿದ್ರೆ, ಮತ್ತೊಂದು ಗುಂಪು ನಾಡಿಗೆ ಎಂಟ್ರಿ ಕೊಟ್ಟಿದೆ. ಶೃಂಗೇರಿ ಪಟ್ಟಣದ ನರಸಿಂಹವನದ ಸಮೀಪದ ಕಾಡಾನೆಗಳು ಪ್ರತ್ಯಕ್ಷವಾಗಿದೆ.


ಮೊನ್ನೆ ತುಂಗಾ ನದಿ ತಟ್ಟದಲ್ಲಿ ಮರಿ ಜೊತೆ ತಾಯಾನೆ ಕಾಣಿಸಿಕೊಂಡಿತ್ತು. ಕಾಡಾನೆ ಹಿಂಡು ಸಾಗಿದ ದಾರಿಯಲ್ಲೇ ಬರುತ್ತಿರುವ ಮತ್ತೊಂದು ಗುಂಪು ಇದಾಗಿದೆ. ಶೃಂಗೇರಿ ತಾಲೂಕಿನ ಹೊಸಹಕ್ಲು, ಕುಂತೂರು ವ್ಯಾಪ್ತಿಯಲ್ಲಿ ಆನೆಗಳ ಕಾಟ ಜಾಸ್ತಿಯಾಗಿದೆ.
ಆನೆಗಳು ಪಟ್ಟಣದ ಸಮೀಪವೇ ಇರೋದ್ರಿಂದ ಸ್ಥಳಿಯರಲ್ಲಿ ಆತಂಕ ಹೆಚ್ಚಿದೆ.

ಇತ್ತೀಚಿನ ಸುದ್ದಿ

ಜಾಹೀರಾತು