4:11 AM Wednesday19 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ಆರಗ ಜ್ಞಾನೇಂದ್ರ ಅವರು ವಿವೇಚನೆ ಇಲ್ಲದೆ ಅಧಿಕಾರಿಗಳ ಜೊತೆಗೆ ಏಕವಚನದಲ್ಲಿ ಮಾತನಾಡುತ್ತಾರೆ: ಕಿಮ್ಮನೆ ರತ್ನಾಕರ್

14/07/2025, 19:23

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಧಿಕಾರಿಗಳ ಜೊತೆಗೆ ಮಾತನಾಡುವ ರೀತಿ ತೀರಾ ಧೋರಣೆಯಿಂದ ಕೂಡಿದ್ದಾಗಿದೆ. ಏಕವಚನದಲ್ಲಿ ಮಾತನಾಡುವಂತಹದ್ದು, ಅಧಿಕಾರಿಗಳಿಗೆ ಬಯ್ಯುವಂತಹದ್ದು, ದಲಿತ ಸಮಾಜಕ್ಕೆ ಸೇರಿದ ಪಪಂ ಮುಖ್ಯ ಅಧಿಕಾರಿಗೆ ಬೈದಿದ್ದಾರೆ. ಅದು ಯಾವುದೊ ಒಳ್ಳೆಯ ಕೆಲಸಕ್ಕೆ ಆದರೆ ಬೇಸರವಿಲ್ಲ ಅದನ್ನು ಬಿಟ್ಟು ತಮ್ಮ ಬಿಜೆಪಿ ಕಾರ್ಯಕರ್ತರಿಗಾಗಿ ಮಾತನಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಸೋಮವಾರ ಪಟ್ಟಣದ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸಾರ್ವಜನಿಕರ ಎದುರು ಓರ್ವ ಅಧಿಕಾರಿಗೆ ಹೊಟ್ಟೆಗೆ ಏನು ತಿನ್ನುತ್ತಿಯ ಎಂದು ಏಕ ವಚನದಲ್ಲಿ ಮಾತನಾಡುತ್ತಾರೆ. ವಿವೇಚನೆ ಇಲ್ಲದೆ ಮಾತನಾಡುತ್ತಾರೆ. ಅವರ ಸರ್ಕಾರ ಹಾಗೆ ಮಂತ್ರಿ ಇದ್ದಾಗ ಮಾತನಾಡುವುದು ಬೇರೆ ಆದರೆ ಈಗ ತಮಗೆ ಬೇಕಾದ ಹಾಗೆ ಮಾತನಾಡುವುದು ಸರಿಯಲ್ಲ, ಸರ್ಕಾರಿ ಕಾರ್ಯಕ್ರಮದಲ್ಲಿ ತಮ್ಮ ಪಕ್ಕದಲ್ಲಿ ಯಾರನ್ನೋ ತಂದು ಕೂರಿಸಿಕೊಳ್ಳುತ್ತಾರೆ. ನಾವು ಯಾವತ್ತೂ ಆ ರೀತಿ ಮಾಡಿಲ್ಲ. ಇವರ ಜೊತೆಗೆ ಇದ್ದವರು ಅಷ್ಟೇ ಮರ್ಯಾದೆ ಇಲ್ಲದೆ ಹೋಗಿ ಕೂರುತ್ತಾರೆ. ನಾವು ಅಧಿಕಾರಿಗಳಿಗೆ ಕಂಪ್ಲೇಂಟ್ ಮಾಡಲು ಹೇಳಿದ್ದೇನೆ ಇಲ್ಲದಿದ್ದರೆ ನಾವೇ ಕಂಪ್ಲೇಂಟ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
*ಆಸ್ಪತ್ರೆಯಲ್ಲಿ ಪ್ರತಿಭಟನೆ ಮಾಡುವ ಅವಶ್ಯಕತೆ ಏನಿತ್ತು?:* ಪಕ್ಷಾತೀತವಾಗಿ ಎಂದಿದ್ದಕ್ಕೆ ನಮ್ಮವರು ಹೋಗಿದ್ದಾರೆ. ಆದರೆ ನಾವು ಪಕ್ಷಾತೀತವಾಗಿ ಎಂದು ಪ್ರತಿಭಟನೆಗೆ ಕರೆದರೆ ಬರುತ್ತಾರಾ? ಬಿಜೆಪಿ ಅವರಿಗೆ ಮೋಸ ಮಾಡುವುದು ಹೇಳಿಕೊಡಬೇಕಾಗಿಲ್ಲ, ಆಸ್ಪತ್ರೆಯಲ್ಲಿ ದಶಕಗಳಿಂದ ಇರುವ ವೈದ್ಯರನ್ನು ವರ್ಗಾವಣೆ ಮಾಡಲಾಗಿದೆ. 48 ಗಂಟೆಯಾದರೂ ಬೇರೆ ವೈದ್ಯರು ಬಂದಿಲ್ಲ ಎಂದಾದರೆ ಪ್ರತಿಭಟನೆ ಮಾಡಿದ್ದರೆ ನಾನೆ ಸಹಕಾರ ನೀಡುತ್ತಿದ್ದೆ. ಆದರೆ ಅಷ್ಟೊಂದು ತಾರಾತುರಿ ಏನಿತ್ತು ಗೊತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ಶಚಿಂದ್ರ ಹೆಗಡೆ, ಮುಡುಬಾ ರಾಘವೇಂದ್ರ, ರಹಮತ್ ಉಲ್ಲಾ ಆಸಾದಿ, ಡಾ. ಸುಂದರೇಶ್, ಗೀತಾ ರಮೇಶ್, ಶಬನಮ್, ಮಂಜುಳಾ ನಾಗೇಂದ್ರ, ಸುಶೀಲ ಶೆಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು