9:08 PM Wednesday2 - July 2025
ಬ್ರೇಕಿಂಗ್ ನ್ಯೂಸ್
Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ… ಕವಿಕಾದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ: ಇಂಧನ… Kodagu Crime | ಸುಳ್ಳು ಕೊಲೆ ಕೇಸ್ ಮೂಲಕ ಅಮಾಯಕ ಜೈಲಿಗೆ: ಇನ್ಸ್​ಪೆಕ್ಟರ್,… ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕೊಂಡೇ ಅಧಿಕಾರಕ್ಕೆ ಬರಬೇಕು, ಸ್ವಂತ ಶಕ್ತಿಯಿಂದ… Karnataka CM | ಸರಕಾರ 5 ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ: ಮೈಸೂರಿನಲ್ಲಿ ಸಿಎಂ…

ಇತ್ತೀಚಿನ ಸುದ್ದಿ

Kodagu | ಟೆರರ್ ಆಫ್ ಬೆಂಗಾಲ್ ಇನ್ ಕುಶಾಲನಗರ !: ಚಂದಕ್ಕೆ ಪೂರಕ , ಆರೋಗ್ಯಕ್ಕೆ ಬಲು ಮಾರಕ!!

02/07/2025, 14:13

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com

ಅಕ್ಷರಶಃ ಕಳೆದ ಒಂದು ವಾರದಿಂದ ಕೊಡಗಿನ ಕುಶಾಲನಗರ -ಮಡಿಕೇರಿ ನಡುವಿನ ರಾಷ್ಟ್ರೀಯ ಹೆದ್ದಾರಿ 275 ಬದಿಯಲ್ಲಿರುವ ಕುಶಾಲನಗರದ ತಾವರೆಕೆರೆಯಲ್ಲಿ ಅರಳಿ ನಿಂತಿರುವ ಲ್ಯಾವೆಂಡರ್/ ಬ್ಲೂ ವಾಯಿಲೆಟ್ ಬಣ್ಣದ ಹೂವು ಅಕ್ಷರಶಃ ಮಾರಕವಾಗಿದೆ. ವೈಜ್ಞಾನಿಕವಾಗಿ ನೋಡುವುದಾದರೆ ಇದೊಂದು ತ್ಯಾಜ್ಯದಿಂದ ಉದ್ಭವಿಸುವ ಒಂದು ಕಳೆಯಿಂದ ಅರಳಿರುವ ಸಸ್ಯ ಪ್ರಭೇಧ.”ಇಚ್ಹೊರ್ನಿಯಾ ಕ್ರೇಸ್ಸಿಪಿಸ್” ಹೆಸರಿನ ಈ ಕಳೆ ಬಾಂಗ್ಲಾದೇಶದಲ್ಲಿ ನಿಂತ ನೀರು, ಅದರಿಂದ ಉದ್ಭವ ಆಗುತ್ತಿದ್ದ ಸೊಳ್ಳೆ ಸೇರಿದಂತೆ ಕ್ರಿಮಿ ಕೀಟದಿಂದ ರೋಗ ರುಜಿನ ಉಂಟಾಗಿತ್ತು, ಸ್ವಲ್ಪ ನೀರಿನ ಸೆಲೆ ಸಿಕ್ಕರೆ ಸಾಕು ಅಲ್ಲಿ ಇದರ ಬೇರು ಕ್ಷಣಾರ್ಧದಲ್ಲಿ ಹಬ್ಬುವ ತಾಕತ್ತು ಇದಕ್ಕಿದೆ, ಮತ್ತೆ ಈ ತ್ಯಾಜ್ಯದ ಗಿಡ ನೀರಿನಲ್ಲಿನಲ್ಲಿರುವ ಜಲಚರ ಜೀವಿಗಳು(ಮೀನುಗಳು, ಆಮೆ, ಕಪ್ಪೆ), ತಾವರೆ, ವಾಟರ್ ಲಿಲ್ಲಿ ಯಂತಹ ಸೂಕ್ಷ್ಮ ಜೀವಿಗಳಿಗೆ ಆಮ್ಲಜನಕ ತಡೆಯುವ ಸಾಮರ್ಥ್ಯ ಹೊಂದಿದೆ. ಸಹಜವಾಗಿ ಇದರ ಎಲೆಗಳು ಸೂರ್ಯನ ಕಿರಣ ತಡೆಯುವ ಸಾಮರ್ಥ್ಯ ಹೊಂದಿದ್ದು, ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ತಡೆಯುತ್ತದೆ ಎಂದು ದೃಢಪಟ್ಟಿದೆ. ಒಂದು ವೇಳೆ ಇದು ಹಬ್ಬಿದ್ದಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ತಾವರೆಕೆರೆ ಒಂದು ರೋಗ ಗುಂಡಿ ಆಗುವುದರಲ್ಲಿ ಸಂಶಯವಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು